ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಪೊಲೀಸ್ ಟೈಗರ್ ಅಶೋಕ್ ಈಗ ಆಮ್ ಆದ್ಮಿ

By Srinath
|
Google Oneindia Kannada News

ಮೈಸೂರು, ಮಾರ್ಚ್ 11: ಆಮ್ ಆದ್ಮಿ ಪಕ್ಷದ ವತಿಯಿಂದ ಮೈಸೂರು ಲೋಕಸಭಾ ಕ್ಷೇತ್ರದ ಮತದಾರರಿಗೆ ಅಚ್ಚರಿಯೊಂದು ಕಾದಿದೆ. ದಕ್ಷ ಪೊಲೀಸ್ ಅಧಿಕಾರಿ ಮಾಜಿ ಎಸಿಪಿ ಟೈಗರ್ ಅಶೋಕ್ ಕುಮಾರ್ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷಸಲಿದ್ದಾರೆ ಎಂದು ತಿಳಿದುಬಂದಿದೆ.

ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾ ಅವರು ಇದೇ 15/16ರಂದು ಕರ್ನಾಟಕಕ್ಕೆ ಬರುತ್ತಿದ್ದು, ಪಕ್ಷದ ವತಿಯಿಂದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಆ ವೇಳೆ, ಬಿಬಿ ಅಶೋಕ್ ಕುಮಾರ್ ಅವರ ಹೆಸರು ಅಧಿಕೃತವಾಗಿ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ex-acp-bb-ashok-kumar-may-contest-from-aap-mysore-lok-sabha-seat

ಹಾಗೆ ನೋಡಿದರೆ ಮೈಸೂರು ಟೈಗರ್ ಅಶೋಕ್ ಅವರ ಕರ್ಮಭೂಮಿ. ಕ್ಷೇತ್ರದ ಅಂಚಿಗೆ ಹೋದರೆ ತವರು ಸಹ ಆಗುತ್ತದೆ. ಹಾಗಾಗಿ ಮೈಸೂರು-ಕೊಡಗು ಕಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭಾ ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ. (ಹುಷಾರು, ಟೈಗರ್ ಅಶೋಕ್ ಕೈಯಲ್ಲಿದೆ ರಿವಾಲ್ವರು!)

ಮೈಸೂರು, ಟೈಗರ್ ಅಶೋಕ್ ಕುಮಾರ್ ಹೆಸರುಗಳು ಪ್ರಸ್ತಾಪವಾದ ಮೇಲೆ ಕಾಡುಗಳ್ಳ ವೀರಪ್ಪನ್ ಹೆಸರೂ ಕಾಣಿಸಿಕೊಳ್ಳಬೇಕು. ಏಕೆಂದರೆ ವೀರಪ್ಪನ್ ಬೇಟೆ ಸಂದರ್ಭದಲ್ಲಿ ಮೈಸೂರು-ಚಾಮರಾಜನಗರ ಭಾಗಗಳಲ್ಲಿನ ಅರಣ್ಯವನ್ನು ಇಂಚಿಂಚೂ ಅಳೆದವರು ಟೈಗರ್ ಅಶೋಕ್ (ವೆಬ್ ಸೈಟ್).

'ನನ್ನ ಹೆಸರು ಪ್ರಸ್ತಾಪಕ್ಕೆ ಬಂದಿರುವುದು ನಿಜ. ಆದರೆ ನಿಲ್ಲಬೇಕೋ/ ಬೇಡ್ವೋ ಎಂಬ ಬಗ್ಗೆ ಇನ್ನೂ ಆಲೋಚಿಸುತ್ತಿದ್ದೇನೆ' ಎಂದು ಟೈಗರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ. (ಗೆಳೆಯ ಬಿಕೆಶಿ ಗೆಲುವಿಗಾಗಿ ತುಡಿಯುತ್ತಿರುವ ಟೈಗರ್ ಬಿಬಿ)

English summary
Retired ACP B B Ashok Kumar may contest from aap in Mysore-Kodagu Lok Sabha constituency according to AAP Mysore convenor M S Vinod. The party has approached B B Ashok Kumar who was part of the Special Task Force to nab forest brigand Veerappan. B B Ashok, popularly known as Tiger Ashok Kumar confirmed that he was approached. “I am wondering whether to enter the fray or not,” he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X