ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆ: ಮಾಕೋಡು ಜನರ ಸಮಸ್ಯೆ ಆಲಿಸಿದ ಮೈಸೂರು ಜಿಲ್ಲಾಧಿಕಾರಿ
ಮೈಸೂರು, ಡಿಸೆಂಬರ್, 18: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮಪಂಚಾಯಿತಿಯಲ್ಲಿ "ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ" ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೇ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.
ಕಂದಾಯ, ಪಂಚಾಯಿತಿ, ಚೆಸ್ಕಾಂ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ 209 ಅರ್ಜಿಗಳನ್ನು ಪರಿಶೀಲಿಸಿದರು. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರವೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಸೂಚಿಸಿದರು.
ಮೈಸೂರು: ಗಡಿ ಭಾಗದ ಜನರ ಅಭಿವೃದ್ಧಿಗಾಗಿ ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರಗಳು, ಇಲ್ಲಿದೆ ವಿವರ
ಜಿಲ್ಲಾಧಿಕಾರಿಗಳ
ನಡೆ
ಹಳ್ಳಿ
ಕಡೆ
ಶನಿವಾರ
ಪಿರಿಯಾಪಟ್ಟಣ
ತಾಲೂಕಿನ
ಮಾಕೋಡು
ಗ್ರಾಮಪಂಚಾಯಿತಿಯಲ್ಲಿ
"ಜಿಲ್ಲಾಧಿಕಾರಿಗಳ
ನಡೆ
ಹಳ್ಳಿ
ಕಡೆ"
ಎನ್ನುವ
ಕಾರ್ಯಕ್ರಮವನ್ನು
ಆಯೋಜಿಸಲಾಗಿತ್ತು.
ಕಾರ್ಯಕ್ರಮ
ಉದ್ಘಾಟಿಸಿ
ಮಾತನಾಡಿದ
ಅವರು,
ಕಂದಾಯ
ಇಲಾಖೆಗೆ
93,
ಪಂಚಾಯಿತಿ
ಸಂಬಂಧಿಸಿದಂತೆ
99,
ಚೆಸ್ಕಾಂ
ಸಂಬಂಧಿಸಿದಂತೆ
08,
ಸರ್ವೇ
ಸಂಬಂಧಿಸಿದಂತೆ
5,
ಆರೋಗ್ಯ
ಇಲಾಖೆಗೆ
ಸಂಬಂಧಿಸಿದಂತೆ
02,
ಸಮಾಜ
ಕಲ್ಯಾಣ
ಇಲಾಖೆ
ಸಂಬಂಧಿಸಿದಂತೆ
1
ಹಾಗೂ
ಕೆ.ಎಸ್.ಆರ್.ಟಿ.ಸಿ
ಇಲಾಖೆ
ಸಂಬಂಧಿಸಿದಂತೆ
1
ಒಟ್ಟು
209
ಅರ್ಜಿಗಳು
ಸಲ್ಲಿಕೆಯಾಗಿದೆ
ಎಂದು
ತಿಳಿಸಿದರು.
ಗ್ರಾಮವಾಸ್ತವ್ಯ
ಹೊಸದೇನಲ್ಲ
ಗ್ರಾಮವಾಸ್ತವ್ಯ
ಹೊಸದೇನಲ್ಲ,
ಗ್ರಾಮಗಳಿಗೆ
ಭೇಟಿ
ನೀಡಿ
ಸಮಸ್ಯೆಗಳನ್ನು
ಆಲಿಸುವ
ಕಾರ್ಯವನ್ನು
ಬಹಳ
ಹಿಂದಿನಿಂದಲೂ
ನಡೆಸಿಕೊಂಡು
ಬರುತ್ತಿದ್ದೇನೆ.
"ಜಿಲ್ಲಾಧಿಕಾರಿಗಳ
ನಡೆ
ಹಳ್ಳಿಯ
ಕಡೆ"
ಈ
ರೀತಿಯ
ಕಾರ್ಯಕ್ರಮದಿಂದ
ಅಧಿಕಾರಿಗಳು
ಮತ್ತು
ಸಾರ್ವಜನಿಕರ
ನಡುವಿನ
ಅಂತರವನ್ನು
ಕಡಿಮೆ
ಮಾಡಲು
ಉಪಯುಕ್ತವಾಗಿವೆ
ಎಂದರು.
ಗ್ರಾಮ
ಪಂಚಾಯತಿ
ಆವರಣದಿಂದ
ವೇದಿಕೆಯವರೆಗೆ
ರಸ್ತೆಯಲ್ಲಿ
ನಡೆದುಕೊಂಡು
ಬಂದಿದ್ದರಿಂದ
ಸಮಸ್ಯೆಗಳನ್ನು
ಪ್ರತ್ಯಕ್ಷವಾಗಿ
ಕಾಣುವುದಕ್ಕೆ
ಸಾಧ್ಯವಾಯಿತು.
ಜಿಲ್ಲಾ
ಮಟ್ಟದ
ಎಲ್ಲಾ
ಅಧಿಕಾರಿಗಳು
ನಮ್ಮೊಂದಿಗೆ
ಇದ್ದಾರೆ.
ಸ್ವೀಕರಿಸಿರುವ
ಅರ್ಜಿಗಳನ್ನು
ಹದಿನೈದು
ದಿನಗಳೊಳಗೆ
ಬಗೆಹರಿಸಿಕೊಡಲಾಗುವುದು
ಎನ್ನುವ
ವಿಶ್ವಾಸವನ್ನು
ವ್ಯಕ್ತಪಡಿಸಿದರು.
ಮಾಕೋಡು ಗ್ರಾಮಸ್ಥರ ಬೇಡಿಕೆಗಳು ಏನು?
ಮಾಕೋಡು ಗ್ರಾಮಸ್ಥರು ಶ್ರೀ ಬಸವೇಶ್ವರ ದೇವಸ್ಥಾನ ನಿರ್ವಹಣೆ, ಶ್ರೀ ಚನ್ನಕೇಶ್ವರ ದೇವಸ್ಥಾನ ಅಭಿವೃದ್ಧಿ ಬಗ್ಗೆ ಮನವಿ ಮಾಡಿದರು. ಉಳಿದಂತೆ ಜೈನ ಬಸದಿ ಕೌಂಪೌಂಡ್, ಶಾಲಾ ಒತ್ತುವರಿ ತೆರವು, 83 ಹೆಕ್ಟೇರ್ ಗೋಮಾಳ ತೆರವು, ಗ್ರಂಥಾಲಯ ನಿರ್ಮಾಣ, ಮೆಟ್ಲಿಂಗ್ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ, ಮುಸ್ಲಿಂ ಸ್ಮಶಾನ ಅಭಿವೃದ್ಧಿ ಸೇರಿದಂತೆ ಗ್ರಾಮದ ಅಭಿವೃದ್ಧಿ ಕಾರ್ಯಗಳು ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಅರ್ಜಿ ಸಲ್ಲಿಸಿ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಮಾಕೋಡು ಗ್ರಾಮ ಪಂಚಾಯತಿ ಆವರಣದಿಂದ ವೇದಿಕೆಯವರೆಗೆ ಜಿಲ್ಲಾಧಿಕಾರಿಗಳನ್ನು ಕಳಸ ಹಾಗೂ ಸಾಂಸ್ಕೃತಿಕ ಕಲಾತಂಡದೊಂದಿಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಜನರ ಸಮಸ್ಯೆಯನ್ನು ಆಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ಮಹಾದೇವ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರೇಮ್ ಕುಮಾರ್, ತಹಶೀಲ್ದಾರ್ ಕೆ.ಚಂದ್ರಮೌಳಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.