ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ಪ್ರಕರಣ ಖಾತ್ರಿ: ಡಿಸಿ ಬಗಾದಿ ಗೌತಮ್
ಮೈಸೂರು, ಜೂನ್ 23: ಕೊರೊನಾ ಎರಡನೇ ಅಲೆಯ ಸುಳಿಯಿಂದ ಹೊರಬರಲಾಗದೆ ಕಂಗೆಟ್ಟಿರುವ ಮೈಸೂರಿನ ಜನತೆ ಇದೀಗ ಮತ್ತೊಂದು ಮಾರಣಾಂತಿಕ ವೈರಾಣುವಿನ ಸುಳಿಗೆ ಸಿಲುಕಿದ್ದಾರೆ.
ಕೊರೊನಾದ ರೂಪಾಂತರ ಡೆಲ್ಟಾ ಪ್ಲಸ್ನ ಒಂದು ಪ್ರಕರಣ ಮೈಸೂರಿನಲ್ಲಿ ಇರುವುದು ಖಾತ್ರಿಯಾಗಿದೆ. ಈ ಕುರಿತು ಖಾತ್ರಿಪಡಿಸಿರುವ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, "ಮೈಸೂರು ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಸದ್ಯ ಅವರು ಗುಣಮುಖರಾಗಿದ್ದಾರೆ. ಸೋಂಕಿತರ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ,'' ಎಂದು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ: ಇದು ಆಘಾತಕಾರಿ ಎಂದ ವೈದ್ಯರು
"ಕಳೆದ ಏಳು ದಿನಗಳಲ್ಲಿ ಜಿಲ್ಲೆಯಿಂದ 40 ಸ್ಯಾಂಪಲ್ಸ್ ಕಳುಹಿಸಲಾಗಿದೆ. ಮೈಸೂರಿನ ಮೆಡಿಕಲ್ ಕಾಲೇಜಿನಿಂದ ಬೆಂಗಳೂರಿನ ನಿಮಾನ್ಸ್ಗೆ ಸ್ಯಾಂಪಲ್ ಕಳುಹಿಸಲಾಗಿದೆ. ಇನ್ನಷ್ಟೇ ಫಲಿತಾಂಶ ಬರಬೇಕಿದೆ,'' ಎಂದರು.
ಶೇ.3
ಮಕ್ಕಳಲ್ಲಿ
ಕೊರೊನಾ
ಸೋಂಕು
ಮೈಸೂರು
ಜಿಲ್ಲೆಯ
ಮಕ್ಕಳಲ್ಲಿ
ಕೊರೊನಾ
ಹೆಚ್ಚಿದೆ
ಎಂಬ
ವದಂತಿ
ಕುರಿತು
ಸ್ಪಷ್ಟನೆ
ನೀಡಿರುವ
ಜಿಲ್ಲಾ
ಆರೋಗ್ಯಾಧಿಕಾರಿ
ಕೆ.ಎಚ್.
ಪ್ರಸಾದ್,
"ಶೇಕಡ
3ರಷ್ಟು
ಮಕ್ಕಳಿಗೆ
ಮಾತ್ರ
ಸೋಂಕು
ಇದೆ.
ಮಾರ್ಚ್
2020ರಿಂದ
ಜೂನ್
2021ರವರೆಗೆ
1
ಲಕ್ಷದ
63
ಸಾವಿರ
ಕೊರೊನಾ
ಪ್ರಕರಣಗಳು
ದಾಖಲಾಗಿದೆ.
ಇದರಲ್ಲಿ
0-
10
ವರ್ಷದ
ಮಕ್ಕಳಲ್ಲಿ
ಶೇಕಡಾ
2ರಿಂದ
3ರಷ್ಟು
ಪ್ರಮಾಣದಲ್ಲಿ
ಪಾಸಿಟಿವ್
ಇದೆ.
ಜೂನ್
2021ರಲ್ಲಿ
19
ಸಾವಿರ
ಪಾಸಿಟಿವ್
ಇದ್ದು,
ಇದರಲ್ಲಿ
700
ಮಕ್ಕಳಲ್ಲಿ
ಸೋಂಕಿಗೆ
ಒಳಗಾಗಿದ್ದಾರೆ,''
ಎಂದು
ತಿಳಿಸಿದ್ದಾರೆ.
"16 ತಿಂಗಳಲ್ಲಿ 0- 10 ವರ್ಷದ 9 ಮಕ್ಕಳು ಸಾವನ್ನಪ್ಪಿದ್ದು, 9 ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗಿದೆ. ಆ ಮಕ್ಕಳಿಗೆ ಕೋವಿಡ್ ಜೊತೆ ಬೇರೆ ಆರೋಗ್ಯದ ಸಮಸ್ಯೆ ಇತ್ತು ಎಂದಿರುವ ಅವರು, ಮೈಸೂರು ಜಿಲ್ಲೆಯಲ್ಲಿ ಮೂರನೇ ಅಲೆ ಅನ್ನುವ ಮಾಹಿತಿ ತಪ್ಪು,'' ಎಂದು ಸ್ಪಷ್ಟನೆ ನೀಡಿದ್ದಾರೆ.