ಅಹಿಂದ ವರ್ಗಗಳು ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಯೋಚಿಸುವುದು ಒಳ್ಳೆಯದು
ಮೈಸೂರು, ಜುಲೈ 20: ಇಂದಿನ ರಾಜಕಾರಣ ಜಾತಿ ಮತ್ತು ವ್ಯಾಪಾರಕ್ಕೆ ಸೀಮಿತವಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
"ರಾಜಕಾರಣ ಬರಬರುತ್ತಾ ಜಾತಿ ಮತ್ತು ವ್ಯಾಪಾರದ ಗೋಡೆಗಳಿಗೆ ಮೊಳೆ ಹೊಡೆದುಕೊಂಡು ಜಾತಿ ಪ್ರೇಮದ ಆಚೆಗೂ ಇರುವಂತಹ ಸರ್ವ ಜನಾಂಗದ ಹಿತಾಸಕ್ತಿ ಎಂಬ ಜನಸೇವಾ ವಲಯದ ಗಂಭೀರ ಸಂಗತಿಯನ್ನು ಮರೆಯುತ್ತಿರುವುದು ದುರಂತದ ವಿದ್ಯಮಾನ"ಎಂದು ಮಹದೇವಪ್ಪ ಹೇಳಿದರು.
"ಕೆಲ ಮಿತಿಗಳ ನಡುವೆಯೂ ಕೂಡಾ ಜಾತ್ಯಾತೀತ ನಿಲುವುಗಳನ್ನೇ ಇಟ್ಟುಕೊಂಡು 5 ವರ್ಷಗಳ ಕಾಲ ಸುಭದ್ರ ಆಡಳಿತ ನೀಡಿ ಎಲ್ಲಾ ವರ್ಗದ ಜನರ ಹಿತಾಸಕ್ತಿಯನ್ನು ಕಾಂಗ್ರೆಸ್ ಕಾಪಾಡಿತು".

"ಕಾಂಗ್ರೆಸ್ ಸರ್ಕಾರವು ಅಧಿಕಾರದಿಂದ ಕೆಳಗಿಳಿದು ನಮ್ಮ ಸುತ್ತಲ ಜಾತಿವಾದಿ ಮತ್ತು ವ್ಯಾಪಾರಿ ಮನಸ್ಥಿತಿಯ ಜನರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರಿಂದಲೇ ಜನ ಸಾಮಾನ್ಯರು ಬದುಕಲು ಸಾಧ್ಯವೇ ಇಲ್ಲದಂತಹ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ" ಎಂದು ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದರು.
"ಬಹುಶಃ ಇಷ್ಟೊಂದು ಸಂಕಷ್ಟ ಅನುಭವಿಸಿದ ಮೇಲೆ ಈಗ ಎಲ್ಲರಿಗೂ ಪರಿಸ್ಥಿತಿಯ ಗಂಭೀರತೆಯು ಅರಿವಾಗಿದೆಯಾದರೂ ಕೂಡಾ ಜಾತಿಶ್ರೇಷ್ಠತೆಯ ಪ್ರಜ್ಞೆಯು ಅವರಲ್ಲಿ ತಮಗೆ ಒದಗಿದ ಪರಿಸ್ಥಿತಿಗಿಂತಲೂ ನಮ್ಮ ಜಾತಿಯಿದ್ದರೆ ಸಾಕು ಜನ ಬದುಕು ಯಾರಿಗೆ ಬೇಕು ಎಂಬ ಧೋರಣೆಯೇ ಮುನ್ನಲೆಗೆ ಬರುವುದು ಅಪಾಯಕಾರಿ ಸಂಗತಿಯೇ ಹೌದು" ಎಂದು ಮಹದೇವಪ್ಪ ಹೇಳಿದರು.
"ಒಂದು ವೇಳೆ ಇಂತಹ ಅತಿ ಜಾತಿ ಪ್ರಜ್ಞೆಯು ನಮ್ಮ ಅಹಿಂದ ವರ್ಗಗಳಲ್ಲಿ ಏನಾದರೂ ಜಾಗೃತವಾಗಿದ್ದಿದ್ದರೆ ನಿಜಕ್ಕೂ ರಾಜಕೀಯವಾಗಿ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಶಾಶ್ವತವಾದ ರಾಜಕೀಯ ಶಕ್ತಿಯೇ ಇಲ್ಲಿ ನಿರ್ಮಾಣವಾಗುತ್ತಿತ್ತು. ಅಹಿಂದ ವರ್ಗಗಳು ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಯೋಚಿಸುವುದು ಒಳ್ಳೆಯದು"ಎಂದು ಹೆಚ್.ಸಿ.ಮಹದೇವಪ್ಪ ಮನವಿ ಮಾಡಿದ್ದಾರೆ.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications