Get Updates
Get notified of breaking news, exclusive insights, and must-see stories!

ಮಹಿಳೆಗೆ ಮೊಬೈಲ್ ಸಂದೇಶ ಕಳಿಸಿದ ಯುವಕನಿಗೆ ಆಕೆ ಸೋದರರಿಂದ ಒದೆ

ಮೈಸೂರು, ಡಿಸೆಂಬರ್ 10 : ಯುವಕನೊಬ್ಬ ಮಹಿಳೆಗೆ ಮೊಬೈಲ್ ಸಂದೇಶ ಕಳುಹಿಸಿದ್ದಕ್ಕೆ ಮಹಿಳೆ ಹಾಗೂ ಆಕೆಯ ಸಹೋದರ ಇಬ್ಬರು ಸೇರಿ ಹಲ್ಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೆಬ್ಬಾಳ್ ನ 2ನೇ ಹಂತದ ನಿವಾಸಿ ಹೇಮಂತ ಕುಮಾರ್ ಹಲ್ಲೆಗೊಳಗಾದವರು. ಈತ ಲತಾ ಎಂಬ ಮಹಿಳೆಯ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿದ್ದ. ಇದರಿಂದ ರೋಸಿ ಹೋದ ಮಹಿಳೆ, ತನ್ನ ತಮ್ಮನೊಂದಿಗೆ ಡಿಸೆಂಬರ್ 5ರಂದು ಹೇಮಂತಕುಮಾರ್ ಮನೆ ಮುಂದೆ ಗಲಾಟೆ ಮಾಡಿದ್ದರು. ಆ ವೇಳೆಯಲ್ಲಿ ಸಾರ್ವಜನಿಕರು ಸಮಾಧಾನ ಮಾಡಿ ಕಳುಹಿಸಿದ್ದರು.

ಆ ಬಳಿಕ ಡಿಸೆಂಬರ್ 7ರ ರಾತ್ರಿ 12.30ರ ಸಮಯದಲ್ಲಿ ಲತಾ ಹಾಗೂ ಆಕೆಯ ಸಹೋದರ, ಮತ್ತೊಬ್ಬ ವ್ಯಕ್ತಿ ಹೇಮಂತ್ ಕುಮಾರ್ ಮನೆಗೆ ನುಗ್ಗಿ, ಆತನನ್ನು ಬಲವಂತವಾಗಿ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಕೂರಿಸಿಕೊಂಡು ಬಂದು, ರಾಜು ಅಪಾರ್ಟ್ ಮೆಂಟ್ ನ ಹಿಂಭಾಗದ ರಸ್ತೆಯಲ್ಲಿ ಹಲ್ಲೆ ನಡೆಸಿದ್ದಾರೆ. ಆಗ ಆತ ಪ್ರಜ್ಞಾಹೀನನಾಗಿದ್ದಾರೆ.

Attack on young man for sending mobile message to woman

ಹೇಮಂತ್ ಕುಮಾರ್ ಅವರ ಭಾವ ಹುಡುಕಿಕೊಂಡು ಹೋದಾಗ, ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಹತ್ತುವ ವೇಳೆ ಕೆಳಗೆ ಬಿದ್ದು ದಾರುಣ ಸಾವು

ಖಾಸಗಿ ಬಸ್ ಚಲಿಸಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಸಂಭವಿಸಿದೆ.

ತಿ.ನರಸೀಪುರ ಖಾಸಗಿ ಬಸ್ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಗಾಯತ್ರಿ (52) ಮೃತ ದುರ್ದೈವಿ. ಗಾಯತ್ರಿ ಅವರು ನಂಜನಗೂಡಿನ ನಿವಾಸಿಯಾಗಿದ್ದು, ತಿ.ನರಸೀಪುರದ ಯರಗನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ತಿ.ನರಸೀಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+