ಮಾಜಿ ಸಂಸದ ವಿಶ್ವನಾಥ್ ಪುತ್ರನ ಮೇಲೆ ಯುವಕರಿಂದ ದಾಳಿ
ಮೈಸೂರು, ಮಾರ್ಚ್ 15: ಮಾಜಿ ಸಂಸದ ಎಚ್.ವಿಶ್ವನಾಥ್ ಅವರ ಪುತ್ರ ಪೂರ್ವಜ್ ಮೆಲೆ ಯುವಕರ ಗುಂಪೊಂದು ದಾಳಿ ನಡೆಸಿದ ಘಟನೆ ಮಾ.15 ರ ಬೆಳಗ್ಗಿನ ಜಾವ ನಡೆದಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದ ಪೂರ್ವಜ್ ಬೆಳಗ್ಗಿನ ಜಾವ ಸುಮಾರು 1:45 ರ ವೇಳೆಗೆ ಮೈಸೂರಿನ ವಿವೇಕಾನಂದ ವೃತ್ತದ ಬಳಿ ತಮ್ಮ ಸ್ನೇಹಿತರನ್ನು ಡ್ರಾಪ್ ಮಾಡುವುದಕ್ಕೆಂದು ಹೋಗಿದ್ದರು.
ಮೊಹಮ್ಮದ್ ನಲಪಾಡ್ ಪ್ರಕರಣ : ವಿದ್ವತ್ ನೀಡಿದ ಘಟನೆಯ ವಿವರ
ಈ ವೇಳೆ ಬಂದ ಕೆಲವು ಯುವಕರಿದ್ದ ಗುಂಪು, ಅವರ ಕತ್ತಿನಲ್ಲಿದ್ದ ಸರ ಎಳೆದು, ನಂತರ ಅವರ ಮೇಲೆ ದಾಳಿ ನಡೆಸಿದೆ. ನಂತರ ಹೇಗೋ ಪಾರಾಗಿ ಮನೆಗೆ ಬಂದರೆ, ಮನೆ ಬಳಿಯೂ ಕಾದುಕುಳಿತಿದ್ದ ಕೆಲವು ಯುವಕರ ಗುಂಪು ಅವರ ಕಪಾಳಕ್ಕೆ ಹೊಡೆದು, ದಾಳಿ ನಡೆಸಿದೆ.
ಆದರೆ ಈ ಕುರಿತು ಪೂರ್ವಜ್ ಕಡೆಯಿಂದ ಪೊಲಿಸರಿಗೆ ದೂರು ನೀಡಿದ ಮಾಹಿತಿ ಇಲ್ಲ.
Comments
English summary
A group of youths attacked on former member of Parliament from Mysuru, H Vishwanath's son in Mysuru on March 15th early morning in Mysuru. No complaints has registered yet.
Story first published: Thursday, March 15, 2018, 13:03 [IST]