ಎಲ್ಲೆಲ್ಲೂ ಓಲಾ, ಉಬರ್, ನ್ಯಾನೊ...ಆಟೋ ಚಾಲಕರ ಸಂಕಷ್ಟ ಕೇಳೋರಾರು?
Recommended Video

ಮೈಸೂರು, ಅಕ್ಟೋಬರ್ 25: ಆಟೋ ಒಂದು ಕಾಲದಲ್ಲಿ ಡಿಗ್ನಿಟಿಯ ಸಂಕೇತ. ಇನ್ನು ಆಟೋದವರಿಗೆ ಆಟೋ ರಾಜ ಶಂಕರ್ ನಾಗ್ ರವರೇ ಮಾದರಿ. ಆದರೆ ಸದ್ಯ ಈ ಆಟೋ ಹಾಗೂ ಆಟೋ ಚಾಲಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ.
ಹೌದು, ದಿನದಿಂದ ದಿನಕ್ಕೆ ಏರುತ್ತಿರುವ ನಿರ್ವಹಣಾ ವೆಚ್ಚ, ಪೆಟ್ರೋಲ್, ಗ್ಯಾಸ್ ದರ ಏರಿಕೆಯಿಂದ ಆಟೋ ಚಾಲಕರು ಅಡಕತ್ತರಿಯಲ್ಲಿ ಸಿಲುಕಿದ್ದು, ಬದುಕಿನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಓಲಾ, ಉಬರ್, ನ್ಯಾನೊ, ರಾಪಿಡೊಗಳ ಪೈಪೋಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಟೋ ಗಳ ವಿಮಾ ಕಂತಿನ ಮೊತ್ತವೂ ಹೆಚ್ಚಳವಾಗಿರುವುದರಿಂದ ಮತ್ತಷ್ಟು ತೊಂದರೆಗೀಡಾಗಿದ್ದಾರೆ. ಆಟೋ ಪ್ರಯಾಣ ದರಗಳು ಪರಿಷ್ಕರಣೆಯಾಗಿ ಮೂರು ವರ್ಷಗಳು ಕಳೆದಿವೆ. 3 ವರ್ಷಗಳಲ್ಲಿ ಎಲ್ಲ ವೆಚ್ಚಗಳೂ ದುಪ್ಪಟ್ಟಾಗಿವೆ. ಆದರೆ, ಪ್ರಯಾಣ ದರ ಮಾತ್ರ ಹಾಗೇ ಇದೆ. ದರ ಪರಿಷ್ಕರಿಸುವ ಬೇಡಿಕೆ ಇಡಲು ಚಾಲಕರು ಯೋಚನೆ ಮಾಡುವಂತಾಗಿದೆ.
ದರ ಪರಿಷ್ಕರಿಸಿದರೆ ಆಟೋ ಹತ್ತುವ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಕಡಿಮೆ ಆಗಬಹುದು ಎಂಬುದು ಅವರ ಆತಂಕ. ಸದ್ಯ, ನಗರದಲ್ಲಿ ಜನಪ್ರಿಯಗೊಳ್ಳುತ್ತಿರುವ ರ್ಯಾಪಿಡೊ, ಓಲಾ, ಉಬರ್, ನ್ಯಾನೊಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಕಡಿಮೆ ವೆಚ್ಚ, ಆರಾಮದಾಯಕ ಪ್ರಯಾಣಾನುಭೂತಿ ಸೇರಿದಂತೆ ಇತರ ಆಕರ್ಷಣೆಗಳು ಸಾರ್ವಜನಿಕರನ್ನು ಸೆಳೆಯುತ್ತಿವೆ. ಇದರಿಂದ ಸಾಮಾನ್ಯ ಆಟೋಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗುತ್ತಿವೆ.

ವಾಹನ ನಿರ್ವಹಣೆಗೆ 15 ಸಾವಿರ
ವಿಮೆ ಮಾರುಕಟ್ಟೆಯ ನಿಯಂತ್ರಕ 'ಐಆರ್ ಡಿಎ' ಕಳೆದ 3 ವರ್ಷಗಳಲ್ಲಿ ತ್ರಿಚಕ್ರ ವಾಹನಗಳ ವಿವಿಧ ಬಗೆಯ ವಿಮಾ ಕಂತುಗಳನ್ನು ಹಲವು ಪಟ್ಟು ಹೆಚ್ಚಿಸಿದೆ. ಮತ್ತೊಂದೆಡೆ ಪ್ರತಿ ವರ್ಷ ವಾಹನದ ನಿರ್ವಹಣಾ ವೆಚ್ಚ ಏರುತ್ತಲೇ ಇದೆ. ಕನಿಷ್ಠ ಎಂದರೂ ವರ್ಷಕ್ಕೆ 15 ಸಾವಿರವಾದರೂ ವಾಹನ ನಿರ್ವಹಣೆಗೆ ಬೇಕೇ ಬೇಕು ಎನ್ನುತ್ತಾರೆ ಆಟೋ ಚಾಲಕರು.

ವಿಮೆಯನ್ನು ಬೇಗ ನವೀಕರಿಸಿಕೊಳ್ಳಿ
ತ್ರಿಚಕ್ರ ವಾಹನಗಳ ವಿಮಾ ದರದಲ್ಲಿ ಆಗಿರುವ ಹೆಚ್ಚಳದಿಂದ ಬಹುತೇಕ ಬಡ ಆಟೋ ಚಾಲಕರು ವಿಮೆಯನ್ನು ನವೀಕರಿಸುತ್ತಿಲ್ಲ. ಇದೇ ಅವಕಾಶವನ್ನು ಬಳಸಿಕೊಂಡಿರುವ ಪೊಲೀಸರು ದ್ವಿಚಕ್ರ ವಾಹನ ಬಿಟ್ಟು ತ್ರಿಚಕ್ರ ವಾಹನಗಳತ್ತ ಲಕ್ಷ್ಯವಹಿಸಿದ್ದಾರೆ. ವಿಮೆ ನವೀಕರಣ ಆಗದ ಆಟೋ ಚಾಲಕರಿಗೆ 500 ರೂ. ದಂಡ ವಿಧಿಸಲಾಗುತ್ತಿದೆ.
ಇದಕ್ಕೆ ಮತ್ತಷ್ಟು ಹೆಚ್ಚು ಕಷ್ಟಕೊಡುವಂತೆ ಏನೋ ವಿಮಾ ಕಂತನ್ನು ನವೀಕರಿಸದ ಆಟೋಗಳ ವಿರುದ್ಧ ಕಾರ್ಯಾಚರಣೆಯನ್ನು ನಗರ ಸಂಚಾರ ವಿಭಾಗದ ಪೊಲೀಸರು ಹೆಚ್ಚಿಸಿದ್ದಾರೆ. ಒಂದು ವೇಳೆ ಎರಡನೇ ಬಾರಿಯೂ ವಿಮೆ ಇಲ್ಲದೇ ರಸ್ತೆಯಲ್ಲಿ ಆಟೋಗಳು ಸಂಚರಿಸಿದರೆ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಇದೆ. ಹೀಗಾಗಿ, ವಿಮೆಯನ್ನು ಆದಷ್ಟು ಬೇಗ ನವೀಕರಿಸಿಕೊಳ್ಳಬೇಕು ಎಂದು ಪೊಲೀಸರು ಹೇಳುತ್ತಾರೆ.

ಸರ್ಕಾರ ನಮ್ಮ ನೋವಿಗೆ ಸ್ಪಂದಿಸಬೇಕಿದೆ
ಓಲಾ, ಉಬರ್ ನಂತಹ ಆನ್ ಲೈನ್ ಬುಕಿಂಗ್ ಜನಪ್ರಿಯಗೊಳ್ಳಲು ಬೇಕಾಬಿಟ್ಟಿ ವಸೂಲಿ ಮಾಡುವ ಆಟೋ ಚಾಲಕರೇ ಕಾರಣ ಎಂದು ಹೆಸರು ಹೇಳಲಿಚ್ಛಿಸದ ಆಟೋ ಚಾಲಕರೊಬ್ಬರು ಹೇಳುತ್ತಾರೆ. ದೋಷಪೂರಿತ ಮೀಟರ್ ಅಳವಡಿಕೆ, ಹೆಚ್ಚಿನ ದರ ವಸೂಲಿ, ಹೇಳಿದ ಕಡೆ ಬಾರದ ಚಾಲಕರು... ಹೀಗೆ ಕೆಲವು ಆಟೋ ಚಾಲಕರ ವರ್ತನೆಗಳಿಂದಾಗಿಯೇ ಜನರು ಆನ್ಲೈನ್ ಬುಕ್ಕಿಂಗ್ ನತ್ತ ವಾಲಿದ್ದಾರೆ.
ಆನ್ ಲೈನ್ ಬುಕ್ ಮಾಡಿದಾಗಲೂ ಬರುವವರು ಇದೇ ಆಟೋ ಚಾಲಕರೇ. ಅಲ್ಲಿ ಒಂದು ದರ, ಆನ್ ಲೈನ್ ಇಲ್ಲದೇ ಬಂದಾಗ ಮತ್ತೊಂದು ದರ ವಸೂಲಿ ಮಾಡುತ್ತಿದ್ದಾರೆ. ಪ್ರಾಮಾಣಿಕ ಆಟೋ ಚಾಲಕರ ಸ್ಥಿತಿ ಶೋಚನೀಯವಾಗಿದ್ದು, ಸಾಲ ಮಾಡಿ ಆಟೋ ತೆಗೆದುಕೊಂಡವರ ಗೋಳು ಕೇಳುವವರೇ ಇಲ್ಲ. ಸರ್ಕಾರ ನಮ್ಮ ನೋವಿಗೆ ಸ್ಪಂದಿಸಬೇಕಿದೆ ಎನ್ನುತ್ತಾರೆ ನೊಂದ ಆಟೋ ಚಾಲಕರು.

ಹಬ್ಬಗಳ ಆಚರಣೆಗೆ ಸೀಮಿತ
ಮೈಸೂರು ನಗರದಲ್ಲಿ ಆಟೋ ಚಾಲಕರ ಹಿತ ಕಾಯಲು 8 ಸಂಘಟನೆಗಳು ಅಸ್ತಿತ್ವದಲ್ಲಿವೆ. ಎಲ್ಲಾ ಸಂಘಟನೆಗಳೂ, ಹಬ್ಬಗಳ ಆಚರಣೆಗೆ ಸೀಮಿತವಾದಂತಿವೆ. ಆಟೋ ಚಾಲಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಮುಂದಾಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications