ಮೈಸೂರು ರಂಗಾಯಣದಲ್ಲಿ ವಾರಾಂತ್ಯ ನಾಟಕೋತ್ಸವ

ಶನಿವಾರ ಮತ್ತು ಅದಿತ್ಯವಾರ ಒಂದು ತಿಂಗಳ ಕಾಲ ರಾಜ್ಯದ ಹೆಸರಾಂತ ತಂಡಗಳು ನಾಟಕ ಪ್ರದರ್ಶನ ನೀಡಲಿದ್ದು, ಒಂಭತ್ತು ತಂಡಗಳು ಹೆಸರು ನೋಂದಾಯಿಸಿದೆ ಎಂದು ರಂಗಾಯಣದ ನಿರ್ದೇಶಕ ಎಚ್ ಜನಾರ್ದನ ಹೇಳಿದ್ದಾರೆ.[ಮೈಸೂರು: ಬಿಸಿಎಂ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ]
ರಾಜ್ಯದಲ್ಲಿ ರಾಜ್ಯದಲ್ಲಿ ಉತ್ತಮ ನಾಟಕ ಕಲಾವಿದರಿದ್ದಾರೆ. ಆದರೆ ಆರ್ಥಿಕ ಕಾರಣಗಳಿಂದಾಗಿ ಅವರ ಪ್ರತಿಭೆಗಳಿಗೆ ಅವಕಾಶ ಇಲ್ಲದಂತಾಗಿದೆ. ಈ ಕಾರಣಕ್ಕಾಗಿ ಮೈಸೂರಿನಲ್ಲಿ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿ, ನಾಟಕ ತಂಡಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ನಾಟಕೋತ್ಸವವನ್ನು ಆಯೋಜನೆ ಮಾಡಲಾಗಿದೆ ಎಂದು ಎಂದು ಜನಾರ್ದನ ತಿಳಿಸಿದರು.
ಜೂನ್.1ರಂದು ನಾಟಕೋತ್ಸವ ಉದ್ಘಾಟನೆಯಾಗಲಿದೆ. ಲಿಂಗದೇವರು ಹಳೇಮನೆ ರಚಿಸಿದ ಚಿಕ್ಕದೇವ ಭೂಪ, ಬಿ.ವಿ ಕಾರಂತರ ಸತ್ತವರ ನೆರಳು, ಚಂದ್ರಶೇಖರ ಕಂಬಾರರ ಜೀಕೆ ಮಾಸ್ತರರ ಪ್ರಣಯ ಪ್ರಸಂಗ ನಾಟಕಗಳು ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.












Click it and Unblock the Notifications