ಮೈಸೂರಿನ ಪರಿಸರ ದಿನಾಚರಣೆಯಲ್ಲಿ ಭಾವುಕರಾದ ನಟಿ ರೂಪಿಕಾ
ಮೈಸೂರು, ಜೂನ್ 6: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಕಂಟ್ರಿ ಇನ್ ಅಂಡ್ ಸ್ಯೂಟ್ ಕಾರ್ಲ್ಸ್ ಊಟವಿಲ್ಲದ, ಅನಾಥ ಬಡ ಮಹಿಳೆಯರಿಗೆ ಊಟ ನೀಡುವ ಮೂಲಕ ವಿಶೇಷವಾಗಿ ಆಚರಿಸಿದರು.
ನಗರದಲ್ಲಿನ ಎಂಟು ಅತಿ ಬಡ ಮಹಿಳೆಯರನ್ನು ಗುರುತಿಸಿ ಅವರಿಗೆ ಕಂಟ್ರಿ ಇನ್ ಹೋಟೆಲ್ ನಲ್ಲಿ ಅತಿಥಿ ಸತ್ಕಾರ ನೀಡಿದರು. ಈ ವಿಶೇಷ ಸಂದರ್ಭಕ್ಕೆ ಮೈಸೂರು ವಿಶ್ವವಿದ್ಯಾನಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಸೇಫ್ ವೀಲ್ಸ್ ಪ್ರಶಾಂತ್ ಕೈ ಜೋಡಿಸಿದ್ದರು.
ಈ ಸಂದರ್ಭ ಉಪಸ್ಥಿತರಿದ್ದ ಚಂದನವನದ ಬೆಡಗಿ ನಟಿ ರೂಪಿಕಾ ಮಾತನಾಡಿ ಕಂಟ್ರಿ ಇನ್ ಮುಖ್ಯಸ್ಥರು ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಕೆಲವರು ಎರಡು, ಮೂರು ಗಿಡ ಬೆಳೆಸಿ ಕೈ ತೊಳೆದುಕೊಂಡು ಬಿಡುತ್ತಾರೆ. ಆದರೆ ಇವರು ಸಾವಿರಾರು ಗಿಡಗಳನ್ನು ಬೆಳೆಸಿ ಪೋಷಿಸುವ ಜವಾಬ್ದಾರಿಯನ್ನೂ ಹೊತ್ತಿರುವುದು ಖುಷಿ ನೀಡಿದೆ ಎಂದರು.[ಮೈಸೂರು ವಿವಿ ಕುಲಸಚಿವೆಯಾಗಿ ಭಾರತಿ ನೇಮಿಸಿ ಸರಕಾರದ ಆದೇಶ]
ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಅನಾಥರನ್ನು ಗುರುತಿಸಿ ಅವರನ್ನು ಸತ್ಕರಿಸಿರುವುದು ಹೆಮ್ಮೆಯ ವಿಷಯ. ಅಷ್ಟೇ ಅಲ್ಲ, ಅವರು ಭೂಮಿಕಾ ಎಂಬ ಹೆಸರಿನ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಶಿಕ್ಷಣ ನೀಡುವಲ್ಲಿ ಮುಂದಾಗಿರುವುದು ಶ್ಲಾಘನೀಯ ಎಂದರು.