ಮೈಸೂರು: ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

ಮೈಸೂರು, ಜುಲೈ 4 : ಲಂಚ ಸ್ವೀಕರಿಸುವ ವೇಳೆ ಮೈಸೂರು ಪಿಯು ಬೋರ್ಡ್ ವಿಭಾಗದ ಉಪನಿರ್ದೇಶಕ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಘಟನೆ ಇಂದು(ಜು.4) ನಡೆದಿದೆ. ಕಾಲೇಜು ಮಾನ್ಯತೆ ನವೀಕರಣಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೈಸೂರಿನ ಪಿಯು ಮಂಡಳಿ ಉಪನಿರ್ದೇಶಕ ಜಯಪ್ರಕಾಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮೈಸೂರಿನ ಕುವೆಂಪುನಗರದ ವಿಜಯ ಚೇತನ ಕಾಲೇಜು ಮಾನ್ಯತೆ ನವೀಕರಣಕ್ಕಾಗಿ ಜಯ ಪ್ರಕಾಶ್ 2.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ನಡುವೆ ಕುವೆಂಪುನಗರದಲ್ಲಿ 22 ಸಾವಿರ ರೂ. ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಜಯ ಪ್ರಕಾಶ್ ಅವರನ್ನ ಹಿಡಿದಿದ್ದಾರೆ. ಜಯಪ್ರಕಾಶ್ ಜತೆಗೆ ಅವರ ಕಾರುಚಾಲಕನನ್ನೂ ಮತ್ತು 22 ಸಾವಿರ ಹಣವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ACB attack in Mysuru: PU board deputy director detained

ಜಯಪ್ರಕಾಶ್ ಲಂಚ ಕೇಳಿರುವ ಬಗ್ಗೆ ಕಾಲೇಜಿನ ಆಡಳಿತಾಧಿಕಾರಿ ಶಕುಂತಲಾ, ಎಸಿಬಿಗೆ ದೂರು ಸಲ್ಲಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+