ಈ ಮಕ್ಕಳಿಗೆ ತಮ್ಮ ದಿನಾಚರಣೆಯ ಅರಿವೇ ಇಲ್ಲ
ಮೈಸೂರು, ನವೆಂಬರ್ 14 : ಮಕ್ಕಳ ದಿನಾಚರಣೆ ಎಂದರೆ ಎಲ್ಲಾ ಚಿಣ್ಣರಿಗೂ ಹಬ್ಬ. ಸಂತಸದಿಂದಲೇ ಶಾಲೆಗೆ ವಿವಿಧ ತೆರನಾದ ಬಟ್ಟೆಗಳನ್ನು ಧರಿಸಿ, ಆಟೋಟಗಳಲ್ಲಿ ಭಾಗವಹಿಸುವಲ್ಲಿ ತಲ್ಲೀನರಾಗುತ್ತಾರೆ. ಆದರೆ ಇನ್ನೊಂದೆಡೆ ತಮ್ಮ ದಿನಾಚರಣೆಯೆಂದು ಅರಿಯದ ಮಕ್ಕಳು ತಮ್ಮ ಹಾಗೂ ಸಂಸಾರದ ನೊಗ ಹೊರುವುದರಲ್ಲಿ ತಲ್ಲೀನರಾಗಿದ್ದಾರೆ.
ಇಂತಹ ಘಟನೆಗೆ ಸಾಕ್ಷಿಯಾಗಿದ್ದು ಮೈಸೂರಿನ ಜಿಲ್ಲಾಡಳಿತದ ಕಚೇರಿಯ ಸುತ್ತಮುತ್ತವೇ . ಒಂದೆಡೆ ಮಕ್ಕಳ ದಿನದಂದು ಬೆಳಿಗ್ಗೆ ವಿವಿಧ ಶಾಲೆಗಳ ಮಕ್ಕಳು ಜಿಲ್ಲಾಡಳಿತ ಆಯೋಜಿಸಿದ ಸೈಕಲ್ ಜಾಥಾ ದಲ್ಲಿ ಪಾಲ್ಗೊಂಡಿದ್ದು ಕಂಡು ಬಂದರೆ, ಇನ್ನೊಂದೆಡೆ ತಾಯಿಯ ಔಷಧ ಖರ್ಚಿಗಾಗಿ ಹಗ್ಗದ ಮೇಲೆ ನಡೆದಾಡುತ್ತಿರುವ ಪುಟಾಣಿ ಕಾಣ ಸಿಕ್ಕಳು.

ಪ್ರಥಮ ಪ್ರಧಾನಿ ಭಾರತ ರತ್ನ ದಿ.ಜವಾಹರ ಲಾಲ್ ನೆಹರೂರವರ ಜನ್ಮದಿನವನ್ನು ಮಕ್ಕಳದಿನವೆಂದು ಆಚರಿಸಲಾಗುತ್ತಿದೆ. ಯಾಕೆಂದರೆ ನೆಹರೂ ಅವರಿಗೆ ಮಕ್ಕಳೆಂದರೆ ತುಂಬಾ ಇಷ್ಟವಂತೆ. ಅದರಿಂದ ಅವರಿಗೆ ಚಾಚಾ ನೆಹರೂ ಅಂತಲೇ ಕರೆಯಲಾಗುತ್ತಿದೆ.
ಅವರ ಜನ್ಮದಿನ ಮಕ್ಕಳ ದಿನಾಚರಣೆ. ನಗರದಲ್ಲಿ ಇಂದು ಸರಿ ಸುಮಾರು ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೂ ಸೈಕಲ್ ಜಾಥಾ, ವಸ್ತು ಪ್ರದರ್ಶನ ಮೈದಾನ, ಮೃಗಾಲಯ ಎಲ್ಲ ಕಡೆಯೂ ಉಚಿತವಾಗಿಯೇ ದರ್ಶನ ಭಾಗ್ಯವಿದೆ. ಚಿಣ್ಣರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಸಂತಸ ಸಂಭ್ರಮಗಳಿಂದ ಮಕ್ಕಳ ದಿನವನ್ನಾಚರಿಸಿಕೊಳ್ಳುತ್ತಿದ್ದಾರೆ.

ಆದರೆ ನಗರದ ಹೃದಯ ಭಾಗದಲ್ಲಿರುವ ಬನುಮಯ್ಯ ಚೌಕದಲ್ಲಿ ಪುಟಾಣಿ ಬಾಲಕಿಯೋರ್ವಳು ತನ್ನ ತಾಯಿಗೆ ಹುಶಾರಿಲ್ಲದ ಕಾರಣ ಔಷಧ ಖರ್ಚು ಹಾಗೂ ಹೊಟ್ಟೆಪಾಡಿಗಾಗಿ ಹಗ್ಗದ ಮೇಲೆ ನಡೆದು ದಾರಿ ಹೋಕರಿಂದ ಹಣ ಸಂಗ್ರಹಿಸುತ್ತಿದ್ದಾಳೆ. ಇನ್ನೂ ಅದೆಷ್ಟು ಮಕ್ಕಳು ಹೊಟ್ಟೆಪಾಡಿಗಾಗಿ ಏನೆಲ್ಲ ಮಾಡುತ್ತಿದ್ದಾರೋ ತಿಳಿದಿಲ್ಲ. ಮಕ್ಕಳ ಕಲ್ಯಾಣ ಇಲಾಖೆ ಇತ್ತ ಗಮನ ಹರಿಸಿ ಮಕ್ಕಳ ಇಂತಹ ಮಕ್ಕಳ ಬಾಳಲ್ಲಿ ಬೆಳಕಿನ ಕಿರಣ ಮೂಡಿಸಲು ಪ್ರಯತ್ನಿಸಬೇಕಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications