ಮೈಸೂರಿನಲ್ಲಿ ಐಪಿಎಲ್ ನೋಡುತ್ತಿದ್ದ ವ್ಯಕ್ತಿ ನೇಣಿಗೆ ಶರಣು
ಮೈಸೂರು, ಮಾರ್ಚ್ 30 : ಮೈಸೂರಿನಲ್ಲಿ ಐಪಿಎಲ್ ಪಂದ್ಯ ವೀಕ್ಷಣೆ ಮಾಡುತ್ತಿದ್ದ ವ್ಯಕ್ತಿ ಏಕಾಏಕಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ನಗರದ ಹಳೆ ಬಂಡಿಕೇರಿಯಲ್ಲಿ ವಾಸವಾಗಿದ್ದ ಕಾರು ಚಾಲಕ ರಘು (35) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಊರಿಗೆ ತೆರಳಿದ್ದ ಇವರ ಪತ್ನಿ ಮತ್ತು ಮಕ್ಕಳು ಗುರುವಾರ ಸಂಜೆ ಹೊತ್ತಿಗೆ ವಾಪಸ್ ಬಂದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾತ್ರಿ ಕೋಣೆಯಲ್ಲಿ ಒಬ್ಬರೇ ಐಪಿಎಲ್ ಕ್ರಿಕೆಟ್ ಪಂದ್ಯ ನೋಡುತ್ತಿದ್ದರು. ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಬೇರೆಡೆ ಮಲಗಿದ್ದಾರೆ. ಆದರೆ, ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ರಘು ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ.
ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.
ಮುಂದುವರಿದ ಸರಗಳ್ಳತನ : ಬಿಸಿಲಿನಲ್ಲಿ ಸುತ್ತಿ ಸೊಪ್ಪು ವ್ಯಾಪಾರ ಮಾಡಿ ಗಳಿಸಿದ 1 ಸಾವಿರ ಹಣ ಹಾಗೂ ಕುತ್ತಿಗೆಯಲ್ಲಿದ್ದ 8ರಿಂದ 10 ಗ್ರಾಂನಷ್ಟು ಚಿನ್ನದ ಗುಂಡುಗಳುಳ್ಳ ಕರಿಮಣಿ ಸರವನ್ನು 55 ವರ್ಷದ ಮಹಿಳೆಯೊಬ್ಬರಿಂದ ಅಪಹರಿಸಿದ ಘಟನೆ ನಡೆದಿದೆ.

ಇಲ್ಲಿನ ಶಿವಾಜಿ ರಸ್ತೆಯ 10ನೇ ಕ್ರಾಸ್ನಲ್ಲಿ ಮಹಿಳೆಯೊಬ್ಬರು ಸೊಪ್ಪು ಮಾರಾಟ ಮಾಡುತ್ತಾ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ನೀಲಿ ಬಣ್ಣದ ಸ್ಕೂಟರ್ನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆಯ ಸೊಂಟದಲ್ಲಿ ಸಿಕ್ಕಿಸಿ ಕೊಂಡಿದ್ದ ಚೀಲ ಹಾಗೂ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಂಡು ಹೋಗಿದ್ದಾನೆ. ಪ್ರಕರಣ ಎನ್.ಆರ್.ಠಾಣೆಯಲ್ಲಿ ದಾಖಲಾಗಿದೆ.












Click it and Unblock the Notifications