5 ರಾಜ್ಯದ ಚುನಾವಣೆ; ಮೈಸೂರಿನ ಅಳಿಸಲಾಗದ ಶಾಯಿಗೆ ಬೇಡಿಕೆ
ಮೈಸೂರು, ಮಾರ್ಚ್ 11; ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಚುನಾವಣೆಗಾಗಿ ಮೈಸೂರಿನಲ್ಲಿ ತಯಾರಾಗುವ ಅಳಿಸಲಾಗದ ಶಾಯಿ ಪೂರೈಕೆಗೆ ಆಯಾ ರಾಜ್ಯಗಳ ಚುನಾವಣಾ ಆಯೋಗಗಳು ಪ್ರಸ್ತಾವನೆ ಸಲ್ಲಿಸಿವೆ.
ಆಯೋಗಗಳ ಮನವಿಯಂತೆ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲ್ಯಾಕ್) ಈಗಾಗಲೇ ಭರದ ತಯಾರಿಯಲ್ಲಿ ತೊಡಗಿದೆ. ಎರಡು ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಶಾಯಿಯನ್ನು ಪೂರೈಸಲು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಬಳಸಲ್ಪಡುವ ಅಳಿಸಲಾಗದ ಶಾಯಿ ಒದಗಿಸುವಂತೆ ಆಯಾ ರಾಜ್ಯಗಳ ಚುನಾವಣಾ ಆಯೋಗ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಗೆ ಪತ್ರ ಬರೆದಿವೆ. ಐದೂ ರಾಜ್ಯಗಳಿಂದ ಒಟ್ಟು 6,99,270 ಬಾಟಲಿ ಶಾಹಿಗೆ ಬೇಡಿಕೆ ಬಂದಿದೆ.
ಬೇಡಿಕೆ ಬಂದ ದಿನದಿಂದಲೇ ಉತ್ಪನ್ನದ ತಯಾರಿಕೆಯಲ್ಲಿ ಹೆಚ್ಚಳ ಮಾಡಿರುವ ಮೈಲ್ಯಾಕ್, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣಾ ಆಯೋಗಗಳು ಕೇಳಿದ್ದ ನಿಗದಿತ ಪ್ರಮಾಣದ ಇಂಕನ್ನು ಈಗಾಗಲೇ ಕಳುಹಿಸಿಕೊಟ್ಟಿದೆ.

ಎಲ್ಲಾ ರಾಜ್ಯಗಳ ಬೇಡಿಕೆ
ಮಾರ್ಚ್ 15ರೊಳಗೆ ಎಲ್ಲಾ ರಾಜ್ಯಗಳ ಬೇಡಿಕೆಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಮೈಲ್ಯಾಕ್ ಕಾರ್ಯ ನಿರ್ವಹಣೆ ಮಾಡುತ್ತಿದೆ. ಇನ್ನುಳಿದ ಮೂರು ರಾಜ್ಯಗಳಿಗೆ ಮುಂದಿನ ವಾರದೊಳಗೆ ತಲುಪಿಸಲು ಸಿದ್ಧತೆ ಮಾಡಿಕೊಂಡಿದೆ.
ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಶಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಐದೂ ರಾಜ್ಯಗಳಿಂದ ಮೈಲ್ಯಾಕ್ಗೆ ಒಟ್ಟು 11 ಕೋಟಿ 20 ಲಕ್ಷ ರೂ.ಗಳ ವ್ಯವಹಾರ ನಡೆದಿದೆ. ಮೈಲ್ಯಾಕ್ನಲ್ಲಿ 5 ಸಿಸಿ ಮತ್ತು 10ಸಿಸಿ ಬಾಟಲಿಗಳಲ್ಲಿ ಶಾಯಿ ಲಭ್ಯವಿದ್ದು, ಈ ಐದೂ ರಾಜ್ಯಗಳ ಚುನಾವಣಾ ಆಯೋಗಗಳು 10 ಸಿಸಿ ಪ್ರಮಾಣದ ಬಾಟಲಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಅಂತೆಯೇ ಮೈಲ್ಯಾಕ್ ಎಲ್ಲ ರಾಜ್ಯಗಳಿಗೂ 10 ಸಿಸಿ ಬಾಟಲಿಯಲ್ಲಿ ಅಳಿಸಲಾಗದ ಶಾಯಿಯನ್ನು ಪೂರೈಕೆ ಮಾಡುತ್ತಿದೆ.

ಉತ್ತರಪ್ರದೇಶ ಪ್ರಸ್ತಾವನೆ
ಉತ್ತರಪ್ರದೇಶ ರಾಜ್ಯದಲ್ಲಿ ಶೀಘ್ರದಲ್ಲೇ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಶಾಯಿ ಒದಗಿಸುವಂತೆ ಕೋರಿ ಉತ್ತರ ಪ್ರದೇಶ ಚುನಾವಣಾ ಆಯೋಗ ಪ್ರಸ್ತಾವನೆ ಸಲ್ಲಿಸಿದೆ. ಆ ರಾಜ್ಯದ ಬೇಡಿಕೆ ಈಡೇರಿಕೆಗಾಗಿ ಮೈಲ್ಯಾಕ್ನಲ್ಲಿ ತಯಾರಿ ನಡೆದಿದೆ.

10 ಸಿಸಿ ಬಾಟಲಿಗಳಲ್ಲಿ ಪೂರೈಕೆ
ಅಸ್ಸಾಂ ರಾಜ್ಯ 83,860, ಪಶ್ಚಿಮ ಬಂಗಾಳ 2,70,700, ಕೇರಳ 1,02,000, ತಮಿಳುನಾಡು 2,37,410, ಪುದುಚೇರಿ 6,000 ಸೇರಿದಂತೆ ಒಟ್ಟು 6,99,270 ಬಾಟಲಿ ಅಳಿಸಲಾಗದ ಶಾಹಿಗಾಗಿ ಬೇಡಿಕೆ ಬಂದಿದೆ. ಎರಡು ರಾಜ್ಯಗಳಿಗೆ ಈಗಾಗಲೇ ಮೈಸೂರಿನಿಂದ 10 ಸಿಸಿ ಬಾಟಲಿಗಳಲ್ಲಿ ಶಾಹಿಯನ್ನು ಕಳಿಸಲಾಗಿದೆ.

ನಿಗದಿತ ಸಮಯದೊಳಗೆ ಒದಗಿಸುತ್ತೇವೆ
ಈ ಬಗ್ಗೆ ಮಾತನಾಡಿರುವ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಎನ್. ವಿ. ಫಣೀಶ್, "ಚುನಾವಣಾ ಆಯೋಗಗಳು ಎಷ್ಟೇ ಪ್ರಮಾಣದ ಶಾಯಿ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಿದರೂ, ಅದನ್ನು ನಿಗಧಿತ ಸಮಯದೊಳಗೆ ಒದಗಿಸಲು ಮೈಲ್ಯಾಕ್ ಶಕ್ತವಾಗಿದೆ. ಪಂಚರಾಜ್ಯಗಳ ಚುನಾವಣೆಗೆ ಈಗಾಗಲೇ ಭರದ ತಯಾರಿ ನಡೆದಿದೆ. ಶಾಯಿಯ ಗುಣಮಟ್ಟದಲ್ಲಿ ಅತ್ಯುನ್ನತೆ ಕಾಯ್ದುಕೊಂಡಿರುವುದರಿಂದ ಇಂದು ಭಾರತ ಮಾತ್ರವಲ್ಲದೆ, ಹೊರದೇಶಗಳಿಂದಲೂ ಶಾಯಿಗಾಗಿ ಬೇಡಿಕೆ ಬರುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಮತ್ತಷ್ಟು ಹೊಸ ಆವಿಷ್ಕಾರಕ್ಕೆ ಮೈಲ್ಯಾಕ್ ಪ್ರಯತ್ನ ನಡೆಸಿದ್ದು, ಅದರ ಫಲಿತಾಂಶ ಸಧ್ಯದಲ್ಲೇ ಬರಲಿದೆ" ಎಂದು ಹೇಳಿದ್ದಾರೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications