ಮೈಸೂರು ವಿವಿ ಗಡಿಯಾರದ ಟಿಕ್ ಟಿಕ್ ಶಬ್ದವೀಗ ಸ್ತಬ್ಧ!
ವಿಶ್ವವಿದ್ಯಾಲಯಕ್ಕೆ ಬರುವವರೆಲ್ಲ ಒಮ್ಮೆ ತಲೆಯೆತ್ತಿ ನೋಡುವಂತೆ ಮಾಡಿ, ಸಮಯದ ಮಹತ್ವವನ್ನೂ ಹೇಳುತ್ತಿದ್ದ ಗಡಿಯಾರ ಇದೀಗ ಸ್ತಬ್ಧವಾಗಿದ್ದು, ಪ್ರತಿದಿನ ವಿಶ್ವವಿದ್ಯಾಲಯಕ್ಕೆ ಬರುವವರಿಗೆಲ್ಲ ಏನನ್ನೂ ಕಳೆದುಕೊಂಡ ಭಾವ ಆವರಿಸುತ್ತಿದೆ.
ಮೈಸೂರು, ಮೇ 15 : ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಜನಾಕರ್ಷಣೆಯ ಕೇಂದ್ರ ಬಿಂದು, ಕ್ಲಾಕ್ ಟವರ್ ನ ಗಡಿಯಾರ ಇದೀಗ ಸ್ತಬ್ಧವಾಗಿದೆ! ವಿಶ್ವವಿದ್ಯಾಲಯಕ್ಕೆ ಬರುವವರೆಲ್ಲ ಒಮ್ಮೆ ತಲೆಯೆತ್ತಿ ನೋಡುವಂತೆ ಮಾಡಿ, ಸಮಯದ ಮಹತ್ವವನ್ನೂ ಹೇಳುತ್ತಿದ್ದ ಗಡಿಯಾರ ಇದೀಗ ಸ್ತಬ್ಧವಾಗಿದ್ದು, ಪ್ರತಿದಿನ ವಿಶ್ವವಿದ್ಯಾಲಯಕ್ಕೆ ಬರುವವರಿಗೆಲ್ಲ್ ಏನನ್ನೂ ಕಳೆದುಕೊಂಡ ಭಾವ ಆವರಿಸುತ್ತಿದೆ.
ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವದ ನೆನಪಿಗಾಗಿ ನಿರ್ಮಿಸಲಾಗಿದ್ದ ಕ್ಲಾಕ್ ಟವರ್ ಇದೀಗ ಸ್ತಬ್ಧವಾಗಿದೆ. ಕಳೆದ ಮೂರು ದಿನಗಳಿಂದ ಮಾನಸ ಗಂಗೋತ್ರಿ ಅಂಗಳದಲ್ಲಿರುವ ಈ ಗಡಿಯಾರ ಕೆಟ್ಟು ನಿಂತಿದೆ.[ಮೈಸೂರಿನಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ]
ಇದುವರೆಗೂ ಅದರ ದುರಸ್ಥಿ ಕಾರ್ಯ ಮಾತ್ರ ನಡೆದಿಲ್ಲ! ಮಾನಸ ಗಂಗೋತ್ರಿ ವಿಶ್ವವಿದ್ಯಾಲಯಕ್ಕೆ ಕಳೆ ನೀಡುತ್ತಿದ್ದ ಗಡಿಯಾರ ಕೆಟ್ಟು ನಿಂತು ಮೂರು ದಿನವಾದರೂ ದುರಸ್ಥಿ ಕಾರ್ಯ ನಡೆಯುತ್ತಿಲ್ಲ ಎಂಬ ಬಗ್ಗೆ ಈಗಾಗಲೇ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಒಮ್ಮೆ ಕೆಟ್ಟಿತ್ತು
ಹಿಂದಿನ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಅವಧಿಯಲ್ಲಿ, ಖುದ್ದು ಅವರೇ ಆಸ್ಥೆ ವಹಿಸಿ ಈ ಕ್ಲಾಕ್ ಟವರ್ ನಿರ್ಮಾಣ ಮಾಡಿಸಿದ್ದರು. ಆದರೆ ನಿರ್ಮಾಣವಾದ ತಿಂಗಳಲ್ಲೇ ಗಡಿಯಾರದ ಮುಳ್ಳು ಬಿದ್ದು ಕೆಟ್ಟಿತ್ತು. ಬಳಿಕ ರಿಪೇರಿ ಮಾಡಿದ್ದ. ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಈವರೆವಿಗೂ ಕೆಡದಂತೆ ನೋಡಿಕೊಂಡಿದ್ದರು.

ನಿರ್ಮಾಣವಾಗಿದ್ದು ಯಾವಾಗ…?
ಸುಮಾರು 75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಬೃಹತ್ ಗಡಿಯಾರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜುಲೈ 2015 ರಂದು ಉದ್ಘಾಟಿಸಿದ್ದರು. ಆ ಮೂಲಕ ಮಾನಸ ಗಂಗೋತ್ರಿಯ ಮೆರಗು ಹೆಚ್ಚಿಸುತ್ತಿದ್ದ ಟಿಕ್ ಟಿಕ್ ಗಡಿಯಾರ ಮೂರು ದಿನದಿಂದ ಸ್ತಬ್ಧವಾಗಿದೆ.[ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ಶಿಕ್ಷಣ ಆರಂಭ]

ಗಡಿಯಾರದ ಬೆಲೆ ಕೇಳಿ ತಲೆಸುತ್ತು ಬಂದೀತು!
ಈ ಕ್ಲಾಕ್ ಟವರ್ ನ ಗಡಿಯಾರಕ್ಕೇ 9.5 ಲಕ್ಷ ವೆಚ್ಚವಾಗಿದೆ. ಹೌದು, ಗಡಿಯಾರ ಬೆಲೆ ಕೇಳಿದರೆ ಒಮ್ಮೆ ತಲೆಸುತ್ತುಬರುವುದಂತೂ ನಿಜ.

ಎಚ್ ಎಂ ಟಿ ಕಂಪೆನಿಯ ಗಡಿಯಾರ
ಗಡಿಯಾರ ಹೆಚ್.ಎಂ.ಟಿ ಕಂಪನಿಯದಾಗಿದ್ದು, ಮೈಸೂರು ವಿಶ್ವವಿದ್ಯಾಲಯದ ವಿಶಾಲವಾದ ಕ್ಯಾಂಪಸ್ ಎದುರು ತಲೆ ಎತ್ತಿ ನಿಂತು ಲಕ್ಷಾಂತರ ಜನರನ್ನು ಆಕರ್ಷಿಸಿದೆ. ದಿನವೂ ವಾಯುವಿಹಾರಕ್ಕೆಂದು ಬರುವವರನ್ನೂ ಈ ಗಡಿಯಾರ ಸೆಳೆಯುತ್ತಿತ್ತು.

ನಮ್ಮೆಲ್ಲರ ನೆಚ್ಚಿನ ಗಡಿಯಾರ
'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ವಾಯುವಿಹಾರಿಗಳು ಮೂರು ದಿನಗಳಿಂದ ನಮ್ಮೆಲ್ಲರ ನೆಚ್ಚಿನ ಗಡಿಯಾರ ಕೆಟ್ಟು ನಿಂತಿದೆ. ಇನ್ನೂ ದುರಸ್ಥಿ ಮಾಡಿಲ್ಲ ಎಂದರು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications