ಮೈಸೂರು ವಿವಿ ಗಡಿಯಾರದ ಟಿಕ್ ಟಿಕ್ ಶಬ್ದವೀಗ ಸ್ತಬ್ಧ!
ವಿಶ್ವವಿದ್ಯಾಲಯಕ್ಕೆ ಬರುವವರೆಲ್ಲ ಒಮ್ಮೆ ತಲೆಯೆತ್ತಿ ನೋಡುವಂತೆ ಮಾಡಿ, ಸಮಯದ ಮಹತ್ವವನ್ನೂ ಹೇಳುತ್ತಿದ್ದ ಗಡಿಯಾರ ಇದೀಗ ಸ್ತಬ್ಧವಾಗಿದ್ದು, ಪ್ರತಿದಿನ ವಿಶ್ವವಿದ್ಯಾಲಯಕ್ಕೆ ಬರುವವರಿಗೆಲ್ಲ ಏನನ್ನೂ ಕಳೆದುಕೊಂಡ ಭಾವ ಆವರಿಸುತ್ತಿದೆ.
ಮೈಸೂರು, ಮೇ 15 : ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಜನಾಕರ್ಷಣೆಯ ಕೇಂದ್ರ ಬಿಂದು, ಕ್ಲಾಕ್ ಟವರ್ ನ ಗಡಿಯಾರ ಇದೀಗ ಸ್ತಬ್ಧವಾಗಿದೆ! ವಿಶ್ವವಿದ್ಯಾಲಯಕ್ಕೆ ಬರುವವರೆಲ್ಲ ಒಮ್ಮೆ ತಲೆಯೆತ್ತಿ ನೋಡುವಂತೆ ಮಾಡಿ, ಸಮಯದ ಮಹತ್ವವನ್ನೂ ಹೇಳುತ್ತಿದ್ದ ಗಡಿಯಾರ ಇದೀಗ ಸ್ತಬ್ಧವಾಗಿದ್ದು, ಪ್ರತಿದಿನ ವಿಶ್ವವಿದ್ಯಾಲಯಕ್ಕೆ ಬರುವವರಿಗೆಲ್ಲ್ ಏನನ್ನೂ ಕಳೆದುಕೊಂಡ ಭಾವ ಆವರಿಸುತ್ತಿದೆ.
ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವದ ನೆನಪಿಗಾಗಿ ನಿರ್ಮಿಸಲಾಗಿದ್ದ ಕ್ಲಾಕ್ ಟವರ್ ಇದೀಗ ಸ್ತಬ್ಧವಾಗಿದೆ. ಕಳೆದ ಮೂರು ದಿನಗಳಿಂದ ಮಾನಸ ಗಂಗೋತ್ರಿ ಅಂಗಳದಲ್ಲಿರುವ ಈ ಗಡಿಯಾರ ಕೆಟ್ಟು ನಿಂತಿದೆ.[ಮೈಸೂರಿನಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ]
ಇದುವರೆಗೂ ಅದರ ದುರಸ್ಥಿ ಕಾರ್ಯ ಮಾತ್ರ ನಡೆದಿಲ್ಲ! ಮಾನಸ ಗಂಗೋತ್ರಿ ವಿಶ್ವವಿದ್ಯಾಲಯಕ್ಕೆ ಕಳೆ ನೀಡುತ್ತಿದ್ದ ಗಡಿಯಾರ ಕೆಟ್ಟು ನಿಂತು ಮೂರು ದಿನವಾದರೂ ದುರಸ್ಥಿ ಕಾರ್ಯ ನಡೆಯುತ್ತಿಲ್ಲ ಎಂಬ ಬಗ್ಗೆ ಈಗಾಗಲೇ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಒಮ್ಮೆ ಕೆಟ್ಟಿತ್ತು
ಹಿಂದಿನ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಅವಧಿಯಲ್ಲಿ, ಖುದ್ದು ಅವರೇ ಆಸ್ಥೆ ವಹಿಸಿ ಈ ಕ್ಲಾಕ್ ಟವರ್ ನಿರ್ಮಾಣ ಮಾಡಿಸಿದ್ದರು. ಆದರೆ ನಿರ್ಮಾಣವಾದ ತಿಂಗಳಲ್ಲೇ ಗಡಿಯಾರದ ಮುಳ್ಳು ಬಿದ್ದು ಕೆಟ್ಟಿತ್ತು. ಬಳಿಕ ರಿಪೇರಿ ಮಾಡಿದ್ದ. ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಈವರೆವಿಗೂ ಕೆಡದಂತೆ ನೋಡಿಕೊಂಡಿದ್ದರು.

ನಿರ್ಮಾಣವಾಗಿದ್ದು ಯಾವಾಗ…?
ಸುಮಾರು 75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಬೃಹತ್ ಗಡಿಯಾರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜುಲೈ 2015 ರಂದು ಉದ್ಘಾಟಿಸಿದ್ದರು. ಆ ಮೂಲಕ ಮಾನಸ ಗಂಗೋತ್ರಿಯ ಮೆರಗು ಹೆಚ್ಚಿಸುತ್ತಿದ್ದ ಟಿಕ್ ಟಿಕ್ ಗಡಿಯಾರ ಮೂರು ದಿನದಿಂದ ಸ್ತಬ್ಧವಾಗಿದೆ.[ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ಶಿಕ್ಷಣ ಆರಂಭ]

ಗಡಿಯಾರದ ಬೆಲೆ ಕೇಳಿ ತಲೆಸುತ್ತು ಬಂದೀತು!
ಈ ಕ್ಲಾಕ್ ಟವರ್ ನ ಗಡಿಯಾರಕ್ಕೇ 9.5 ಲಕ್ಷ ವೆಚ್ಚವಾಗಿದೆ. ಹೌದು, ಗಡಿಯಾರ ಬೆಲೆ ಕೇಳಿದರೆ ಒಮ್ಮೆ ತಲೆಸುತ್ತುಬರುವುದಂತೂ ನಿಜ.

ಎಚ್ ಎಂ ಟಿ ಕಂಪೆನಿಯ ಗಡಿಯಾರ
ಗಡಿಯಾರ ಹೆಚ್.ಎಂ.ಟಿ ಕಂಪನಿಯದಾಗಿದ್ದು, ಮೈಸೂರು ವಿಶ್ವವಿದ್ಯಾಲಯದ ವಿಶಾಲವಾದ ಕ್ಯಾಂಪಸ್ ಎದುರು ತಲೆ ಎತ್ತಿ ನಿಂತು ಲಕ್ಷಾಂತರ ಜನರನ್ನು ಆಕರ್ಷಿಸಿದೆ. ದಿನವೂ ವಾಯುವಿಹಾರಕ್ಕೆಂದು ಬರುವವರನ್ನೂ ಈ ಗಡಿಯಾರ ಸೆಳೆಯುತ್ತಿತ್ತು.

ನಮ್ಮೆಲ್ಲರ ನೆಚ್ಚಿನ ಗಡಿಯಾರ
'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ವಾಯುವಿಹಾರಿಗಳು ಮೂರು ದಿನಗಳಿಂದ ನಮ್ಮೆಲ್ಲರ ನೆಚ್ಚಿನ ಗಡಿಯಾರ ಕೆಟ್ಟು ನಿಂತಿದೆ. ಇನ್ನೂ ದುರಸ್ಥಿ ಮಾಡಿಲ್ಲ ಎಂದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications