ಚಿಕಿತ್ಸೆ ಕೊಡಿಸಲು ಹಣವಿಲ್ಲವೆಂದು ಹೆತ್ತ ತಾಯಿಯನ್ನೇ ಕೊಂದು ಬಿಡೋದಾ?
ಮುಂಬೈ, ಡಿಸೆಂಬರ್ 1: ಎಷ್ಟೇ ಬಡತನವಿರಲಿ ಮಕ್ಕಳು ಚೆನ್ನಾಗಿರಬೇಕು ಎಂದು ತಂದೆ-ತಾಯಿ ತಾವು ಉಪವಾಸವಿದ್ದು ಮಕ್ಕಳಿಗೆ ಊಟ ನೀಡುತ್ತಾರೆ ಅದಕ್ಕೆ ಪ್ರತಿಫಲವಾಗಿ ಮಕ್ಕಳು ಏನು ಕೊಡುತ್ತಾರೆ ನೋಡಿ.
ಕಲಬುರ್ಗಿ ಹತ್ಯೆ: ಗೌರಿ ಕೊಲೆಯ ಇಬ್ಬರು ಆರೋಪಿಗಳು ಸಿಐಡಿ ವಶಕ್ಕೆ
ತಾಯಿಗೆ ಕಾಯಿಲೆ ಚಿಕಿತ್ಸೆ ಕೊಡಿಸಲು ತನ್ನ ಬಳಿ ಹಣವಿಲ್ಲ ಎಂದು ಹೇಳಿ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಯೋಗೇಶ್ ಆರೋಪಿ, ಚಿಕಿತ್ಸೆ ಭರಿಸಲು ತನ್ನ ಬಳಿ ಹಣವಿಲ್ಲ ಎಂದು 80 ವರ್ಷದ ವೃದ್ಧ ತಾಯಿ ಲಲಿತಾರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಅಡುಗೆ ಮನೆಯಲ್ಲಿರುವ ಚಾಕುವನ್ನು ತೆಗೆದುಕೊಂಡು ಕುತ್ತಿಗೆಯನ್ನು ಸೀಳಿ ತನ್ನ ಕ್ರೂರತ್ವ ಪ್ರದರ್ಶಿಸಿದ್ದಾನೆ.
ಜೈಲಿನಲ್ಲಿಯೇ ಎಂ.ಎಂ.ಕಲಬುರ್ಗಿ ಹಂತಕರ ವಿಚಾರಣೆ
ಕೆಲವು ವರ್ಷಗಳ ಹಿಂದೆ ಆತನ ಪತ್ನಿ ಆತನನ್ನು ಬಿಟ್ಟು ಹೋಗಿದ್ದಳು, ಆತ ಖಿನ್ನತೆಗೆ ಒಳಗಾಗಿದ್ದ, ತಾಯಿಯ ಜೊತೆ ದಿನವೂ ಜಗಳವಾಡುತ್ತಿದ್ದ, ಕೊಲೆ ನಡೆಯುವ ದಿನವೂ ಕೂಡ ಅವರಿಬ್ಬರ ಮಧ್ಯೆ ಜಗಳವಾಗಿದೆ, ಜಗಳ ವಿಪರೀತವಾದಾಗ ಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ, ಅವರು ಬರುವಷ್ಟರೊಳಗೆ ತಾಯಿಯನ್ನು ಕೊಲೆ ಮಾಡಿದ್ದ, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.