ವಿದ್ಯಾರ್ಥಿಗಳ ಗಲಾಟೆ: ಫೆ.4ರವರೆಗೆ ಹಿಂದೂಸ್ತಾನಿ ಭಾವುಗಿಲ್ಲ ಬಿಡುಗಡೆ ಭಾಗ್ಯ
id='top-searched-articles'>
ಮುಂಬೈ
ಫೆಬ್ರವರಿ 2: ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಸೋಮವಾರ ರಾಜಧಾನಿ ಮುಂಬೈನಲ್ಲಿ ವಿದ್ಯಾರ್ಥಿಗಳು ದೊಡ್ಡ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದರು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 10 ಮತ್ತು 12 ನೇ ಪರೀಕ್ಷೆಗಳನ್ನು ಆಫ್ಲೈನ್ನಲ್ಲಿ ನಡೆಸುವ ಬದಲು ಆನ್ಲೈನ್ನಲ್ಲಿ ನಡೆಸಬೇಕು ಎಂಬುದು ಅವರ ಬೇಡಿಕೆಯಾಗಿದೆ. ಆದರೆ ಸರ್ಕಾರ ಅದನ್ನು ನಿರಾಕರಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಕರೆ ನೀಡಿದ್ದರು. ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ನೂಕುನುಗ್ಗಲು ಹೆಚ್ಚಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಇದರಿಂದಾಗಿ ಸಾಮಾಜಿಕ ಮಾಧ್ಯಮದ ಪ್ರಭಾವಿ ವಿಕಾಸ್ ಪಾಠಕ್ aka ಹಿಂದೂಸ್ತಾನಿ ಭಾವು ಅವರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ ಆರೋಪ ಮೇರೆಗೆ ಸಾಮಾಜಿಕ ಜಾಲತಾಣದ ಪ್ರಭಾವಿ ಮತ್ತು ಯೂಟ್ಯೂಬರ್ ಹಿಂದೂಸ್ತಾನಿ ಭಾವು ಅಲಿಯಾಸ್ ವಿಕಾಸ್ ಫಾಟಕ್ ಅವರನ್ನು ಮುಂಬೈನಲ್ಲಿ ಧಾರಾವಿ ಪೊಲೀಸರು ಬಂಧಿಸಿದ್ದಾರೆ.10 ಮತ್ತು 12ನೇ ತರಗತಿಗಳ ಆಫ್ಲೈನ್ ಪರೀಕ್ಷೆಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಲು ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಗಾಯಕ್ ವಾಡ್ ಅವರ ನಿವಾಸದ ಬಳಿ ಜಮಾಯಿಸುವಂತೆ ವಿದ್ಯಾರ್ಥಿಗಳಿಗೆ ವಿಕಾಸ್ ಕರೆ ನೀಡಿದ್ದರು. ಅವರನ್ನು ವಿದ್ಯಾರ್ಥಿಗಳನ್ನು ಧರಣಿ ಮತ್ತು ಗಲಾಟೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಾಸ್ತವವಾಗಿ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಮುಂಬೈ ಪೊಲೀಸರು ಹಿಂದೂಸ್ತಾನಿ ಭಾವು ಅವರನ್ನು ಬಂಧಿಸಲಾಯಿತು. ಮಂಗಳವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎಲ್ಲಾ ಕಡೆಯ ವಾದವನ್ನು ಆಲಿಸಿದ ನಂತರ ನ್ಯಾಯಾಲಯ ಫೆಬ್ರವರಿ 4ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ವಿಕಾಸ್ ಫಾಟಕ್ ವಿರುದ್ಧ ಧಾರಾವಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಗಲಭೆ, ಮಹಾರಾಷ್ಟ್ರ ಪೊಲೀಸ್ ಕಾಯಿದೆ, ವಿಪತ್ತು ನಿರ್ವಹಣಾ ಕಾಯಿದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. id="toptextpromo"> id='are-slot-1' class='oiad oi-axt oiadv'>
Recommended Video
ಇದೊಂದು ಕೋವಿಡ್ ಬಜೆಟ್!!ದೇಶವನ್ನು ಸಾಲದ ಸುಳಿಗೆ ತಳ್ಳಿದ ಬಜೆಟ್ ಎಂದ ಕಾಂಗ್ರೆಸ್ | Oneindia Kannada
ಹಿಂದೂಸ್ತಾನಿ
ಭಾವು
ತಮ್ಮ
ಇನ್ಸ್ಟಾಗ್ರಾಮ್
ವಿಡಿಯೋದಲ್ಲಿ
ಮಹಾರಾಷ್ಟ್ರ
ಶಿಕ್ಷಣ
ಸಚಿವೆ
ವರ್ಷಾ
ಗಾಯಕ್ವಾಡ್
ಅವರ
ಮನೆಯ
ಹೊರಗೆ
ಪ್ರತಿಭಟನೆ
ನಡೆಸುವಂತೆ
ವಿದ್ಯಾರ್ಥಿಗಳನ್ನು
ಕೇಳಿದ್ದಾರೆ
ಎಂದು
ಆರೋಪಿಸಲಾಗಿದೆ.
ಅವರು
24
ಜನವರಿ
2022
ರಂದು
ಈ
ವೀಡಿಯೊವನ್ನು
ಅಪ್ಲೋಡ್
ಮಾಡಿದ್ದಾರೆ.
ವೀಡಿಯೊದಲ್ಲಿ,
ಹಿಂದೂಸ್ತಾನಿ
ಭಾವು
ಈ
ಎರಡು
ವರ್ಷಗಳಲ್ಲಿ
ಕೋವಿಡ್ನಿಂದ
ಅನೇಕ
ಜನರು
ಸಾವನ್ನಪ್ಪಿದ್ದಾರೆ
ಎಂದು
ಹೇಳುತ್ತಾರೆ.
ಆದರೀಗ
ಕುಟುಂಬ
ಆಘಾತದಿಂದ
ಚೇತರಿಸಿಕೊಳ್ಳುತ್ತಿದೆ.
ಈಗ
ಓಮಿಕ್ರಾನ್ನ
ಹೊಸ
ನಾಟಕ
ಪ್ರಾರಂಭವಾಗಿದೆ.
ಇದು
ಏನು?
ಜನರು
ಮನೆಯೊಳಗೆ
ಇರುವಂತೆ
ಸರ್ಕಾರ
ಒತ್ತಾಯಿಸುತ್ತಿದೆ.
ಅವರು
ವಿದ್ಯಾರ್ಥಿಗಳ
ಪರೀಕ್ಷೆಗಳನ್ನು
ಏಕೆ
ಆಫ್ಲೈನ್ನಲ್ಲಿ
ತೆಗೆದುಕೊಳ್ಳುತ್ತಾರೆ.
'ಪರೀಕ್ಷೆ
ರದ್ದುಪಡಿಸಿ'
ಎಂದು
ಮಕ್ಕಳ
ಬದುಕಿನೊಂದಿಗೆ
ಆಟವಾಡಬೇಡಿ,
ಇಲ್ಲವಾದರೆ
ಮತ್ತೆ
ಆಂದೋಲನವಾಗುತ್ತದೆ
ಎಂದು
ಹೇಳಿದ್ದಾರೆ.












Click it and Unblock the Notifications