ಭಾರತದ ಮಟ್ಕಾ ಕಿಂಗ್ ರತನ್ ಖತ್ರಿ ಇನ್ನಿಲ್ಲ
ಮುಂಬೈ, ಮೇ 11: ಭಾರತದಲ್ಲಿ ಹಲವು ದಶಕಗಳ ಕಾಲ ಮಟ್ಕಾ ಸಾಮ್ರಾಜ್ಯವನ್ನು ಸೃಷ್ಟಿಸಿ, ಆಳಿ ಮಟ್ಕಾ ಕಿಂಗ್ ಎನಿಸಿಕೊಂಡಿದ್ದ ರತನ್ ಖತ್ರಿ ಅವರು ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖತ್ರಿ ಅವರು ನವಜೀವನ್ ಸೊಸೈಟಿ ಪ್ರದೇಶದ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರತ-ಪಾಕಿಸ್ತಾನ ವಿಭಜನೆಯಾದಾಗ ಕರಾಚಿಯಿಂದ ಮುಂಬೈಗೆ ವಲಸೆ ಬಂದ ಖತ್ರಿ ಅವರು 1962ರಲ್ಲಿ ಮಟ್ಕಾ ಆರಂಭಿಸಿದ ಕಲ್ಯಣಿ ಭಗತ್ ಅವರ ಬಳಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ.
1964 ರಲ್ಲಿ ತನ್ನದೇ ಆದ ರತನ್ ಮಟ್ಕಾ ಆರಂಭಿಸಿ, ಜೂಜಾಟದಲ್ಲಿ ಯಶಸ್ಸು ಗಳಿಸಿದ. ಯಶಸ್ಸಿನ ಉತ್ತುಂಗದಲ್ಲಿದ್ದಾಗ ದಿನವೊಂದಕ್ಕೆ 1 ಕೋಟಿ ರು ವಹಿವಾಟು ನಡೆಸಿದ ದಾಖಲೆಯೂ ಇದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 19 ತಿಂಗಳುಗಳ ಕಾಲ ಜೈಲುವಾಸ ಆನುಭವಿಸಿದ್ದ ರತನ್ 90ರ ದಶಕದ ತನಕ ಓಪನ್, ಕ್ಲೋಸ್ ವಹಿವಾಟು ನಡೆಸಿದ, ನಂತರ ಸುರೇಶ್ ಭಗತ್, ಅರುಣ್ ಗಾವ್ಲಿ ಗ್ಯಾಂಗಿನ ಪಪ್ಪು ಸಾವ್ಲಾ ಅವರು ಓಸಿ, ಮಟ್ಕಾ ದಂಧೆಯನ್ನು ಮುಂದುವರೆಸಿದ್ದು ಈಗ ಇತಿಹಾಸ.

ಮಟ್ಕಾ ಅಥವಾ ಓಸಿ ಅರ್ಥಾತ್ ಓಪನ್ ಅಂಡ್ ಕ್ಲೋಸ್ ಆಟ ಭಲೇ ಸಿಂಪಲ್ಲು, ಆದ್ರೆ ಅಷ್ಟೇ ಕಾಂಪ್ಲಿಕೇಟೆಡ್ದು. ನಂಬರಿನ ಮೇಲೆ ದುಡ್ಡು ಕಟ್ಟೋ ಆಟ ಇದು. ಮಧ್ಯಾಹ್ನ, ಮತ್ತು ರಾತ್ರಿ ಎರಡು ಹಂತಗಳಲ್ಲಿ ಜೂಜು ನಡೆಯುತ್ತದೆ. ಜೂಜಾಡುವವರು ಮೊದಲಿಗೆ ಓಪನ್ ಒಂದರಿಂದ ಹತ್ತರೊಳಗಿನ ನಂಬರೊಂದರ ಮೇಲೆ ಜೂಜು ಕಟ್ಟಬಹುದು, ಅಥವಾ, ಒಂದರಿಂದ 99ರ ಒಳಗಿನ ಸಂಖ್ಯೆಯ ಮೇಲೂ ದುಡ್ಡು ಹಾಕಬಹುದು.
ರತನ ಖತ್ರಿ ಎಂಬ ಮನುಷ್ಯ 1962ರಲ್ಲಿ ಬೊಂಬಾಯಿಯಲ್ಲಿ ಈ ಮಟ್ಕಾವನ್ನು ಪ್ರಚಲಿತಗೊಳಿಸಿದ. ಬೊಂಬಾಯಿಯಲ್ಲಿ ಈತ ಪ್ರತಿ ರಾತ್ರಿ ಅಂದಿನ ನಂಬರ್ ಯಾವುದನ್ನುವುದನ್ನ ನಾಲ್ಕೆಂಟು ಜನರ ಮುಂದೆ ತಾನೇ ಲಾಟರಿ ಎತ್ತಿ ಅಂದಿನ ನಂಬರು ಯಾವುದೆಂದು ಹೇಳುತ್ತಿದ್ದ. ಯಾರೇ ಆಗಲಿ, ಅವರಾಡಿದ ನಂಬರು ಬಂದರೆ, ದುಡ್ಡು ಸಿಕ್ಕೇ ಸಿಗುತ್ತಿತ್ತು. ಅದೆಷ್ಟೇ ಲಕ್ಷ ಬೇಕಾದರೂ ಆಗಲಿ. ಯಾವುದೇ ಮೋಸ ಇರಲಿಲ್ಲ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications