ವಿಡಿಯೋ: ಕ್ಯಾಮೆರಾಕ್ಕೆ ಕಪ್ಪು ಸ್ಪ್ರೇ ಮಾಡಿ, ಎಟಿಎಂ ಸ್ಫೋಟಿಸಿ 11 ಲಕ್ಷದೊಂದಿಗೆ ಪರಾರಿ
ಮುಂಬೈ, ಸೆಪ್ಟೆಂಬರ್ 08: ಎಟಿಎಂ ಯಂತ್ರದಿಂದ ಹಣ ದೋಚಿರುವ ಘಟನೆ ಮಹಾರಾಷ್ಟ್ರದಿಂದ ಬೆಳಕಿಗೆ ಬಂದಿದೆ. ಎಟಿಎಂಗಳಲ್ಲಿ ಕಳ್ಳರು ಹಣ ದೋಚಿದ್ದ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಎಟಿಎಂ ದರೋಡೆ ಮಾಡಲು ಬಾಂಬ್ ಇಟ್ಟು ಕಳ್ಳರು ಸ್ಫೋಟಿಸಿದ್ದಾರೆ. ಬಳಿಕ ಎಟಿಎಂನಲ್ಲಿದ್ದ 11 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸತಾರಾ ಜಿಲ್ಲೆಯ ನಾಗಠಾಣೆ ಗ್ರಾಮದಲ್ಲಿ ಬುಧವಾರ ನಸುಕಿನ 2:30ಕ್ಕೆ ಜೆಲಾಟಿನ್ ಎಂಬ ಸ್ಫೋಟಕ ವಸ್ತು ಬಳಸಿ ಎರಡು ಬ್ಯಾಂಕ್ ಆಫ್ ಮಹಾರಾಷ್ಟ್ರದ ಎಟಿಎಂಗಳನ್ನು ಕಳ್ಳರು ಸ್ಫೋಟಿಸಿದ್ದಾರೆ. ಬಾಂಬ್ ಅವುಗಳಲ್ಲಿ ಒಂದನ್ನು ಸಂಪೂರ್ಣವಾಗಿ ಹಾನಿಗೊಳಿಸಿತು. ಕಳ್ಳ 11 ಲಕ್ಷ ರೂ. ದೋಚಿದ ಗುರುತು ಸಿಗದಿರಲು ಆ ದುಷ್ಟ ದರೋಡೆಕೋರ ಎಟಿಎಂ ಕೇಂದ್ರದಲ್ಲಿ ಅಳವಡಿಸಿದ್ದ ಸಿಸಿಟಿವಿ ಮೇಲೆ ಕಪ್ಪು ಬಣ್ಣ ಎರಚಿದ್ದ. ಇದರಿಂದಾಗಿ ಎಟಿಎಂನಲ್ಲಿ ಸ್ಫೋಟ ಸಂಭವಿಸಿದ ಘಟನೆ ದಾಖಲಾಗಿಲ್ಲ.
ಕ್ಯಾಮೆರಾಕ್ಕೆ ಕಪ್ಪು ಸ್ಪ್ರೇ
ಆದರೆ, ಸ್ಪ್ರೇ ಹೊಡೆಯುವ ಮುನ್ನ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ರೇನ್ ಕೋರ್ಟ್ ಧರಿಸಿದ ವ್ಯಕ್ತಿಯೊಬ್ಬರು ಬಾಯಿಗೆ ಮಾಸ್ಕ್ ಹಾಕಿಕೊಂಡು ಎಟಿಎಂಗೆ ಪ್ರವೇಶಿಸಿದ್ದಾರೆ. ಅವನ ಕೈಯಲ್ಲಿ ಸ್ಪ್ರೇ ಇದೆ. ಮೊದಲು ಅವನು ಮುಂಭಾಗದ ಕ್ಯಾಮರಾದಲ್ಲಿ ಕಪ್ಪು ಬಣ್ಣವನ್ನು ಎರಚುತ್ತಾನೆ. ಇದರ ನಂತರ, ಅವನು ಇನ್ನೊಂದು ಬದಿಯಲ್ಲಿ ಅಳವಡಿಸಲಾದ ಕ್ಯಾಮೆರಾದಲ್ಲಿ ಕಪ್ಪು ಸ್ಪ್ರೇ ಅನ್ನು ಸ್ಪ್ರೇ ಮಾಡುತ್ತಾನೆ. ಇದರಿಂದಾಗಿ ಎಟಿಎಂ ಒಳಗಿನ ದೃಶ್ಯಗಳು ಸೆರೆಯಾಗಿಲ್ಲ.

ಎಟಿಎಂ ಜಿಲೆಟಿನ್ನಿಂದ ಸ್ಫೋಟ
ನಂತರ ಕಳ್ಳರು ಜಿಲೆಟಿನ್ ಕಡ್ಡಿಗಳ ಸಹಾಯದಿಂದ ಎಟಿಎಂ ಅನ್ನು ಸ್ಫೋಟಿಸಿದ್ದಾರೆ. ಎಟಿಎಂನಲ್ಲಿಟ್ಟಿದ್ದ 11 ಲಕ್ಷ ರೂಪಾಯಿಯೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಘಟನೆಯ ಮತ್ತೊಂದು ಚಿತ್ರವೂ ಹೊರಬಿದ್ದಿದೆ. ಇದರಲ್ಲಿ ಸ್ಫೋಟದ ನಂತರ ಎಟಿಎಂ ಹಾಳಾಗಿರುವುದು ಕಂಡುಬಂದಿದೆ. ಎಟಿಎಂ ಅವಶೇಷಗಳು ಅಲ್ಲಲ್ಲಿ ಕಾಣಸಿಗುತ್ತವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇತ್ತೀಚೆಗೆ ಅಂತಹದ್ದೇ ಒಂದು ಘಟನೆ
ಕೆಲ ದಿನಗಳ ಹಿಂದೆ ಜಿಲ್ಲೆಯ ಕರಡ ಪಟ್ಟಣದ ಬಳಿಯ ವಿದ್ಯಾನಗರದಲ್ಲಿ ಇದೇ ರೀತಿ ದರೋಡೆಗೆ ಯತ್ನಿಸಲಾಗಿತ್ತು. ಆದರೆ, ಸ್ಫೋಟಕ್ಕೂ ಮುನ್ನವೇ ಕಳ್ಳರನ್ನು ಬಂಧಿಸಲಾಗಿತ್ತು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications