ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಳುಗಿದ ಜಿಂದಾಲ್ ಕಾಮಾಕ್ಷಿ ಹಡಗು, 19 ಜನರ ರಕ್ಷಣೆ

|
Google Oneindia Kannada News

ಮುಂಬೈ, ಜೂ. 22 : ಮುಂಬೈನಿಂದ ಸುಮಾರು 40 ನಾಟಿಕಲ್ ಮೈಲು ದೂರದಲ್ಲಿ ಸರಕು ಸಾಗಣೆ ಮಾಡುವ ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 19 ಸಿಬ್ಬಂದಿಗಳನ್ನು ಐಎನ್‌ಎಸ್ ನೌಕಾನೆಲೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಸೋಮವಾರ ಬೆಳಗ್ಗೆ ಸರಕು ಸಾಗಣೆ ಮಾಡುತ್ತಿದ್ದ 'ಜಿಂದಾಲ್ ಕಾಮಾಕ್ಷಿ' ಹಡಗು ಸಮುದ್ರದಲ್ಲಿ ಮುಳುಗಡೆಯಾಗಿದೆ. ಈ ಕುರಿತು ಹಡಗಿನ ಸಿಬ್ಬಂದಿ ಮುಂಬೈ ನೌಕಾನೆಲೆಗೆ ಮಾಹಿತಿ ನೀಡಿದ್ದು, ಹೆಲಿಕಾಪ್ಟರ್ ಮೂಲಕ ನೌಕಾನೆಲೆ ಸಿಬ್ಬಂದಿ ಹಡಗಿನಲ್ಲಿದ್ದ 20 ಸಿಬ್ಬಂದಿಗಳ ಪೈಕಿ 19 ಜನರನ್ನು ರಕ್ಷಣೆ ಮಾಡಿದ್ದಾರೆ.

indian navy

ಮುಂಬೈನಿಂದ ಸುಮಾರು 40 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ನಡೆದಿದೆ. ರಕ್ಷಣೆ ಮಾಡಲಾದ ಸಿಬ್ಬಂದಿಗಳನ್ನು ಐಎನ್‌ಎಸ್ ನೌಕಾನೆಲೆಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಡಗಿನ ಕ್ಯಾಪ್ಟನ್‌ಗಾಗಿ ಹುಡುಕಾಟ ಮುಂದುವರೆದಿದೆ. [ಮುಂಬೈ ಮಹಾಮಳೆ : ರೈಲು ಬಂದ್]

English summary
Indian Navy launched a massive rescue operation after a merchant vessel 'Jindal Kamaskshi' with 20 people on board, began sinking off the Mumbai coast on Monday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X