ಮೊದಲು ಪಿಒಕೆಯನ್ನು ತನ್ನಿ, ಆಮೇಲೆ ಕರಾಚಿಗೆ ಹೋಗೋಣ: ಸಂಜಯ್ ರಾವತ್
ಮುಂಬೈ, ನವೆಂಬರ್ 23: ಪಾಕಿಸ್ತಾನದಲ್ಲಿರುವ ಕರಾಚಿಯು ಭಾರತದ ಭಾಗವಾಗಲಿದೆ ಎಂದು ಅಖಂಡ ಭಾರತದ ಬಗ್ಗೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀಡಿದ ಹೇಳಿಕೆಯನ್ನು ಶಿವಸೇನಾ ಮುಖಂಡ ಸಂಜಯ್ ರಾವತ್ ಟೀಕಿಸಿದ್ದಾರೆ. ರಾಜ್ಯದ ವಿರೋಧಪಕ್ಷದ ನಾಯಕ ಫಡ್ನವೀಸ್ ಹೇಳಿಕೆ ನೀಡಿದ ಎರಡು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿರುವ ರಾವತ್, ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಮೊದಲು ಮರಳಿ ಭಾರತದೊಂದಿಗೆ ಸೇರಿಸಲಿ. ಬಳಿಕ ಕರಾಚಿ ಬಗ್ಗೆ ಮಾತನಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ.
'ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಮೊದಲು ತನ್ನಿ, ನಾವು ಬಳಿಕ ಕರಾಚಿಗೆ ಹೋಗುತ್ತೇವೆ' ಎಂದು ರಾವತ್ ಹೇಳಿಕೆ ನೀಡಿದ್ದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಾಂದ್ರಾದಲ್ಲಿ ಸುಮಾರು 60 ವರ್ಷಗಳಿಂದ ಇರುವ 'ಕರಾಚಿ ಸ್ವೀಟ್ಸ್' ಅಂಗಡಿಯ ಹೆಸರಿನಿಂದ ಕರಾಚಿ ಎಂಬ ಪದವನ್ನು ತೆಗೆದುಹಾಕುವಂತೆ ಶಿವಸೇನಾ ಮುಖಂಡರೊಬ್ಬರು ಅಂಗಡಿ ಮಾಲೀಕರಿಗೆ ಸೂಚಿಸಿದ್ದರ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವಾಗ ಫಡ್ನವೀಸ್ ಕರಾಚಿಯನ್ನು ಭಾರತಕ್ಕೆ ಸೇರಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಮುಂದೆ ಓದಿ.

ಭಾರತದ ಭಾಗವಾಗಲಿದೆ
ಶನಿವಾರ ಹೇಳಿಕೆ ನೀಡಿದ್ದ ಫಡ್ನವೀಸ್, 'ನಾವು ಅಖಂಡ ಭಾರತವನ್ನು ನಂಬುತ್ತೇವೆ. ಒಂದು ದಿನ ಕರಾಚಿಯು ಭಾರತದ ಭಾಗವಾಗಲಿದೆ ಎಂದು ನಂಬಿದ್ದೇವೆ' ಎಂದಿದ್ದರು. ಅಖಂಡ ಭಾರತದ ಬಗ್ಗೆ ವಿಶ್ವಾಸವಿರುವುದರಿಂದ ಒಂದು ದಿನ ಕರಾಚಿಯು ಭಾರತ ಭಾಗ ಎಂದು ಘೋಷಿತವಾಗಲಿದೆ ಎಂದು ಹೇಳಿದ್ದರು.

ನಿತಿನ್ ನಂದಗಾಂವ್ಕರ್
ಶಿವಸೇನಾ ಮುಖಂಡ ನಿತಿನ್ ನಂದಗಾಂವ್ಕರ್ ಅವರು ಕಳೆದ ವಾರ 'ಕರಾಚಿ ಸ್ವೀಟ್ಸ್' ಅಂಗಡಿಯ ಹೆಸರನ್ನು ದ್ವೇಷಿಸುವುದಾಗಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 'ನಿಮ್ಮ ಪೂರ್ವಜರು ಪಾಕಿಸ್ತಾನದಿಂದ ಬಂದವರು. ನೀವು ದೇಶ ವಿಭಜನೆ ವೇಳೆ ಭಾರತಕ್ಕೆ ಬಂದವರು. ನಿಮಗೆ ಸ್ವಾಗತವಿದೆ. ಆದರೆ ನಾನು ಕರಾಚಿ ಎಂಬ ಹೆಸರನ್ನು ದ್ವೇಷಿಸುತ್ತೇನೆ. ಪಾಕಿಸ್ತಾನದಲ್ಲಿರುವ ಆ ನಗರವು ಭಯೋತ್ಪಾದಕರ ಕೇಂದ್ರವಾಗಿದೆ' ಎಂದು ನಿತಿನ್ ಹೇಳಿದ್ದರು. ಅಲ್ಲದೆ, ಅಂಗಡಿ ಹೆಸರನ್ನು ಮರಾಠಿಯಲ್ಲಿ ಏನಾದರೂ ಬದಲಿಸುವಂತೆ ಸೂಚಿಸಿದ್ದರು.

15 ದಿನದ ಬಳಿಕ ಬರುತ್ತೇನೆ
15 ದಿನಗಳ ಬಳಿಕ ಮತ್ತೆ ಬರುವುದಾಗಿ ಮತ್ತು ಹೆಸರು ಬದಲಾವಣೆಗೆ ಅಂಗಡಿ ಮಾಲೀಕರಿಗೆ ಸಹಾಯ ಮಾಡುವುದಾಗಿ ನಿತಿನ್ ತಿಳಿಸಿದ್ದರು. ಇದು ದೊಡ್ಡ ಸುದ್ದಿಯಾಗಿದ್ದರಿಂದ ತಾವು ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಲು ಬಯಸುವುದಿಲ್ಲ ಎಂದು ಅಂಗಡಿ ಮಾಲೀಕರು ಹೇಳಿದ್ದರು. ಶಿವಸೇನಾ ಇದರಿಂದ ಅಂತರ ಕಾಪಾಡಿಕೊಂಡಿತ್ತು.

ಹೆಸರು ಬದಲಿಸಲು ಅರ್ಥವಿಲ್ಲ
'ಪಾಕಿಸ್ತಾನದೊಂದಿಗೆ ಅವರಿಗೆ ಯಾವ ಸಂಬಂಧವೂ ಇಲ್ಲ. ಈಗ ಹೆಸರು ಬದಲಿಸುವಂತೆ ಹೇಳುವುದರಲ್ಲಿ ಯಾವ ಅರ್ಥವೇ ಇಲ್ಲ. ಹೆಸರು ಬದಲಿಸುವಂತೆ ಒತ್ತಾಯಿಸುವುದು ಶಿವಸೇನಾದ ಅಧಿಕೃತ ನಿಲುವಲ್ಲ' ಎಂದು ಸಂಜಯ್ ರಾವತ್ ಹೇಳಿದ್ದರು.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications