ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದ ಗುರುದ್ವಾರದಲ್ಲಿ ಗಲಭೆ; ನಾಲ್ವರು ಪೊಲೀಸರಿಗೆ ಗಾಯ

|
Google Oneindia Kannada News

ಮುಂಬೈ, ಮಾರ್ಚ್ 29: ಮಹಾರಾಷ್ಟ್ರದ ನಾಂದೆಡ್‌ನಲ್ಲಿನ ಗುರುದ್ವಾರದಲ್ಲಿ ಗಲಭೆ ಸಂಭವಿಸಿದ್ದು, ನಾಲ್ವರು ಪೊಲೀಸರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

ಕೊರೊನಾ ಕಾರಣದಿಂದಾಗಿ ಗುರುದ್ವಾರದಲ್ಲಿ ಹೋಲಾ ಮಹೊಲ್ಲಾಗೆ ಅನುಮತಿ ನಿರಾಕರಿಸಲಾಗಿತ್ತು. ಗುರುದ್ವಾರದ ಸಮಿತಿಗೆ ಈ ಕುರಿತು ಮಾಹಿತಿ ನೀಡಿದ್ದು, ಗುರುದ್ವಾರದ ಒಳಗೇ ಆಚರಣೆ ಮಾಡುವುದಾಗಿ ಸಮಿತಿ ತಿಳಿಸಿತ್ತು. ಆದರೆ ಕೆಲವು ಸಿಖ್ ಯುವಕರು ಗುರುದ್ವಾರದ ಗೇಟ್‌ಗಳನ್ನು ಮುರಿದು ಗಲಭೆ ಸೃಷ್ಟಿಸಿದ್ದಾರೆ.

ವೈರಲ್ ವಿಡಿಯೋ; ಕೇಕ್‌ಗಾಗಿ ಜಗಳ, ಜನ ಮಾಡಿದ ರಂಪಾಟ ಅಷ್ಟಿಷ್ಟಲ್ಲ...ವೈರಲ್ ವಿಡಿಯೋ; ಕೇಕ್‌ಗಾಗಿ ಜಗಳ, ಜನ ಮಾಡಿದ ರಂಪಾಟ ಅಷ್ಟಿಷ್ಟಲ್ಲ...

ಸಂಜೆ 4 ಗಂಟೆ ಸಮಯದಲ್ಲಿ ಸಿಖ್ಖರ ಪವಿತ್ರ ಧ್ವಜ ನಿಶಾನ್ ಸಾಹಿಬ್ ಅನ್ನು ಗುರುದ್ವಾರದ ಬಳಿ ತರುತ್ತಿದ್ದಂತೆ ಜನರು ಜಮಾಯಿಸಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದೆ. ಸುಮಾರು 300ರಿಂದ 400 ಯುವಕರು ಗುರುದ್ವಾರದ ಗೇಟ್‌ಗಳನ್ನು ಮುರಿದು ಗಲಾಟೆ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಹಲವು ವಾಹನಗಳು ಜಖಂ ಆಗಿವೆ.

4 Police Personnel Injured After Sikh Youth Broke Gates Of Gurudwara in Nanded

ಈ ಗಲಭೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ನಾಂದೆಡೆ್ ಎಸ್‌ಪಿ ಮಾಹಿತಿ ನೀಡಿದ್ದಾರೆ.

English summary
4 Police personnel injured after some Sikh youth broke gates of Gurudwara in Nanded in maharashtra and allegedly attacked them
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X