ಹುಡುಗಿಯರ ಫೋಟೋ ತೋರಿಸಿ ವಂಚನೆ, ಇಬ್ಬರ ಬಂಧನ
ಮಂಗಳೂರು, ಆಗಸ್ಟ್ ೦7 : ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹುಡುಗಿಯರ ಫೋಟೋ ತೋರಿಸಿ ವಂಚಿಸುತ್ತಿದ್ದ ಇಬ್ಬರನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ.
ಎಕ್ಕೂರಿನ ಕುಲದೀಪ್, ಫರಂಗಿಪೇಟೆಯ ಕೀರ್ತನ್ ಬಂಧಿತ ಆರೋಪಿಗಳು. ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹುಡುಗಿಯರ ಫೋಟೋ ತೋರಿಸಿ ಆಮಿಷ ಒಡ್ಡುತ್ತಿದ್ದ ಎನ್ಆರ್ಐ ತಂಡವು ಹೆಚ್ಚಾಗಿ ಶ್ರೀಮಂತರನ್ನು ಟಾರ್ಗೆಟ್ ಮಾಡಿ ಹಣ ಪೀಕುತ್ತಿದ್ದರು.

ತಾವು ಫಾರಿನ್ ಏಜನ್ಸಿ ಅಂತಾ ಹೇಳಿಕೊಂಡು ಆನ್ ಲೈನಲ್ಲಿ ಹಣ ಕಳುಹಿಸಲು ಹೇಳುತ್ತಿದ್ದರು. ಮುಂಗಡವಾಗಿ ಆಗಿ 300 ಡಾಲರ್(ಅಂದಾಜು 31 ಸಾವಿರ ರು.) ಪೂರೈಸಿದರೆ ಸಪ್ಲೈ ಮಾಡುವ ಭರವಸೆ ನೀಡುತ್ತಿದ್ದರಿಂದ ಕೆಲವರು ಹಣ ಕಳಿಸುತ್ತಿದ್ದರು.
ಒಂದಷ್ಟು ಹಣ ಪಾವತಿಸಿದ ಬಳಿಕ ಸಂಪರ್ಕ ಕಡಿತಗೊಳಿಸಿ ಮೋಸ ಮಾಡುತ್ತಿದ್ದರು. ಒಂದೂವರೆ ವರ್ಷದಿಂದ ಈ ಮೋಸದ ಜಾಲ ನಡೆಯುತ್ತಿದ್ದರೂ ಮರ್ಯಾದೆಗೆ ಅಂಜಿ ಯಾರೂ ದೂರು ನೀಡಿರಲಿಲ್ಲ.
ಈ ತಂಡದಲ್ಲಿ ಇನ್ನೂ ಮೂವರಿದ್ದು ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಕ್ಷಾ ಚಾಲಕ ಸಾವು: ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿ ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟು ಮೂರು ಮಂದಿ ಗಾಯಗೊಂಡ ಘಟನೆ ಮಂಗಳೂರಿನಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ನಗರದ ಜ್ಯೋತಿ ವೃತ್ತದಲ್ಲಿ ಈ ಘಟನೆ ನಡೆದಿದ್ದು ರೀಕ್ಷಾ ಪಾರ್ಕ್ ನಲ್ಲಿ ನಿಲ್ಲಿಸಿದ್ದ ಆಟೋಗಳಿಗೆ ಅತಿ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.
ಈ ಸಂದರ್ಭದಲ್ಲಿ ಮೂರು ಮಂದಿ ಆಟೋ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಪಕ್ಕದಲ್ಲೇ ಇರುವ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು . ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಟೋ ಚಾಲಕ ಪ್ರವೀಣ್ ಮೃತಪಟ್ಟಿದ್ದಾರೆ.












Click it and Unblock the Notifications