ಮಂಗಳೂರು: ರಂಗಸ್ಥಳದಲ್ಲೇ ಹೃದಯಾಘಾತವಾಗಿ ಯಕ್ಷಗಾನ ಕಲಾವಿದ ನಿಧನ
ಮಂಗಳೂರು, ಡಿಸೆಂಬರ್, 23: ಕಟೀಲು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ಕಲಾವಿದ ಗುರುವಪ್ಪ ಬಾಯಾರು (58) ರಂಗಸ್ಥಳದಲ್ಲೇ ಹೃದಯಾಘಾತವಾಗಿ ನಿಧನರಾಗಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ಕಲಾವಿದ ಹೃದಯಾಘಾತವಾಗಿ ನಿನ್ನೆ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಿನ್ನೆ (ಡಿಸೆಂಬರ್ 22) ಕಟೀಲು ಸರಸ್ವತೀ ಸದನದಲ್ಲಿ ನಡೆಯುತ್ತಿದ್ದ ತ್ರಿಜನ್ಮ ಮೋಕ್ಷ ಯಕ್ಷಗಾನದಲ್ಲಿ ಗುರುವಪ್ಪ ಬಾಯಾರು ಶಿಶುಪಾಲನ ಪಾತ್ರವನ್ನು ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಗುರುವಪ್ಪ ಬಾಯಾರು ಇದ್ದಕ್ಕಿದ್ದಂತೆ ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಪ್ಪ ಬಾಯಾರು ನಿಧನರಾಗಿದ್ದಾರೆ ಎನ್ನುವುದು ತಿಳಿದುಬಂದಿದೆ.
ಪಂಚಭೂತಗಳಲ್ಲಿ ಲೀನವಾದ ಗಾಮಕ ಗಾಯಕ ಹೆಚ್. ಆರ್. ಕೇಶವಮೂರ್ತಿ
ಹೊಸಹಳ್ಳಿಯ
ಎಚ್.ಆರ್.ಕೇಶವಮೂರ್ತಿ
ನಿಧನ
ಇತ್ತೀಚೆಗಷ್ಟೇ
ಗಮಕ
ಗಂಧರ್ವ,
ಪದ್ಮಶ್ರೀ
ಪುರಸ್ಕೃತ
ಶಿವಮೊಗ್ಗದ
ಹೊಸಹಳ್ಳಿಯ
ಎಚ್.ಆರ್.ಕೇಶವಮೂರ್ತಿ
(89)
ಅವರು
ಇಂದು
ನಿಧನರಾಗಿದ್ದರು.
2022ರಲ್ಲಿ
ಕೇಂದ್ರ
ಸರ್ಕಾರ
ಎಚ್.ಆರ್.ಕೇಶವಮೂರ್ತಿ
ಅವರಿಗೆ
ಪದ್ಮಶ್ರೀ
ಪ್ರಶಸ್ತಿ
ನೀಡಿ
ಗೌರವಿಸಿತ್ತು.
ರಾಷ್ಟ್ರಪತಿ
ರಾಮನಾಥ
ಕೋವಿಂದ್
ಅವರು
ಕೇಶವಮೂರ್ತಿ
ಅವರಿಗೆ
ಪದ್ಮಶ್ರೀ
ಪಶ್ರಸ್ತಿ
ನೀಡಿ
ಗೌರವಿಸಿದ್ದರು.
ಪ್ರಧಾನಿ
ನರೇಂದ್ರ
ಮೋದಿ
ಸೇರಿದಂತೆ
ಗಣ್ಯರು
ಇದಕ್ಕೆ
ಸಾಕ್ಷಿಯಾಗಿದ್ದರು.
ಎಚ್.ಆರ್.ಕೇಶವಮೂರ್ತಿ
ಅವರು
ಶಿವಮೊಗ್ಗದ
ಮತ್ತೂರು
ಹೊಸಳ್ಳಿಯ
ರಾಮಸ್ವಾಮಿ
ಶಾಸ್ತ್ರಿ-ಲಕ್ಷ್ಮೀದೇವಮ್ಮ
ದಂಪತಿ
ಪುತ್ರರಾಗಿದ್ದಾರೆ.
ಫೆಬ್ರವರಿ
22,
1934ರಲ್ಲಿ
ಜನಿಸಿದ್ದ
ಅವರು
ಬಾಲ್ಯದಿಂದಲೇ
ಗಮಕ
ಕಲೆಯನ್ನು
ಕರಗತ
ಮಾಡಿಕೊಂಡಿದ್ದರು.
16ನೇ
ವಯಸ್ಸಿನಲ್ಲೇ
ಗ್ರಾಮದ
ವೆಂಕಟೇಶಯ್ಯ
ಅವರ
ಬಳಿ
ಗಮಕ
ವಾಚನ
ಅಧ್ಯಯನವನ್ನು
ಆರಂಭಿಸಿದ್ದರು.
ರಾಮಾಯಣ,
ಮಹಾಭಾರತ,
ಕನ್ನಡ
ಹಾಗೂ
ಸಂಸ್ಕೃತದ
ಕಾವ್ಯಗಳನ್ನು
ಹಲವು
ರಾಗಗಳಲ್ಲಿ
ವಾಚನ
ಮಾಡುವುದನ್ನೂ
ರೂಢಿಸಿಕೊಂಡರು.
ಹಲವೆಡೆ
ಕಾರ್ಯಕ್ರಮಗಳಲ್ಲಿ
ಗಮಕ
ವಾಚನ
ರಾಜ್ಯ,
ದೇಶದ
ಹಲವೆಡೆ
ಕಾರ್ಯಕ್ರಮಗಳಲ್ಲಿ
ಗಮಕ
ವಾಚನ
ಮಾಡಿದ್ದಾರೆ.
100ಕ್ಕೂ
ಹೆಚ್ಚು
ರಾಗಗಳಲ್ಲಿ
ವಾಚನ
ಮಾಡುವ
ಮೂಲಕ
ಶತರಾಗಿ
ಎಂಬ
ಬಿರುದಿಗೂ
ಪಾತ್ರರಾಗಿದ್ದರು.
ಇವರ
ಅದ್ಭುತ
ಕಲೆಗೆ
ಹಲವು
ಪ್ರಶಸ್ತಿಗಳು
ಅರಸಿ
ಬಂದಿವೆ.
ಎಚ್.ಆರ್.ಕೇಶವಮೂರ್ತಿ
ಮತ್ತು
ಡಾ.
ಮತ್ತೂರು
ಕೃಷ್ಣಮೂರ್ತಿ
ಅವರ
ಜೋಡಿ
ಪ್ರಖ್ಯಾತಿ
ಪಡೆದಿತ್ತು.
ಉದಯ
ಟಿವಿಯಲ್ಲಿ
ಇವರು
ನಡೆಸುತ್ತಿದ್ದ
ಕುಮಾರವ್ಯಾಸ
ಭಾರತ
ಕಾರ್ಯಕ್ರಮ
ದೊಡ್ಡ
ಮಟ್ಟದಲ್ಲಿ
ಜನರನ್ನು
ತಲುಪಿತ್ತು.
ಡಾ.ಮತ್ತೂರು
ಕೃಷ್ಣಮೂರ್ತಿ
ಅವರು
ಸಂಸ್ಕೃತ
ಗ್ರಾಮ
ಮತ್ತೂರಿನವರಾಗಿದ್ದಾರೆ.
ಎಚ್.ಆರ್.ಕೇಶವಮೂರ್ತಿ
ಅವರು
ಹೊಸಹಳ್ಳಿಯವರಾಗಿದ್ದಾರೆ.
ಮತ್ತೂರು,
ಹೊಸಹಳ್ಳಿ
ಇವೆರಡು
ಕೂಡ
ಅವಳಿ
ಗ್ರಾಮಗಳಾಗಿವೆ.
ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಪಂಪನ ಮಹಾ ಭಾರತ, ರನ್ನನ ಗಧಾಯುದ್ಧ, ರಘುವಂಶ, ಕುಮಾರಸಂಭವದ ಶ್ಲೋಕಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಅಲ್ಲದೇ ಆರು ದಶಕಗಳ ಕಾಲ ಗಮಕವನ್ನು ದೇಶದೆಲ್ಲೆಡೆ ಪಸರಿಸಿದ್ದಾರೆ. ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು, ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರ ಬಂದಿದೆ. ಕುಮಾರವ್ಯಾಸ ಭಾರತದ 200 ಕ್ಯಾಸೆಟ್ಗಳನ್ನು ಕೂಡ ಹೊರ ತಂದಿದ್ದಾರೆ.