ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಡಹಗಲೇ ತಲವಾರು ಹಿಡಿದು ಗೂಂಡಾಗಿರಿ ಮೆರೆದ ತುಳು ಸಿನಿಮಾ ನಟ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 11: ಚುನಾವಣೆ ಮುಗಿದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಕಾರ್ಯಕರ್ತರ ವೈರತ್ವ ಕೊನೆಗೊಂಡಿಲ್ಲ. ಬಂಟ್ವಾಳದಲ್ಲಿ ತುಳು ಚಿತ್ರ ನಟ ಹಾಗು ಕಾಂಗ್ರೆಸ್ ಕಾರ್ಯಕರ್ತನೊರ್ವ ಹಾಡಹಗಲೇ ತಲವಾರು ಝಳಪಿಸಿ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿರುವ ಘಟನೆ ಇಂದು ನಡೆದಿದೆ.

ಮಾಜಿ ಸಚಿವ ಬಿ.ರಮಾನಾಥ ರೈ‌ ಅವರ ಕಟ್ಟಾ ಬೆಂಬಲಿಗ ಹಾಗೂ ಕಾಂಗ್ರೆಸ್ ಕಾರ್ಯಕರ್ತನೋರ್ವ ಹಾಡುಹಗಲೇ ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳ ಪೇಟೆಯ ನಿತ್ಯಾನಂದ ಮಂದಿರದ ಬಳಿ ನಡೆದಿದೆ. ಸುರೇಂದ್ರ ಬಂಟ್ವಾಳ್ ಎಂಬವರು ತಲವಾರು ಹಿಡಿದು ರಸ್ತೆಯಲ್ಲೇ ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಿದ್ದಾನೆ ಎಂದು ಅರೋಪಿಸಲಾಗಿದೆ. ಸುರೇಂದ್ರ ಬಂಟ್ವಾಳ ಕೆಲವು ತುಳು ಚಿತ್ರ ಗಳಲ್ಲಿ ನಟಿಸಿದ್ದಾರೆ.

ಕಾನತ್ತೂರು ಕ್ಷೇತ್ರದ ಮೊರೆ ಹೋದ ರಮಾನಾಥ್ ರೈ ಕಾನತ್ತೂರು ಕ್ಷೇತ್ರದ ಮೊರೆ ಹೋದ ರಮಾನಾಥ್ ರೈ

ಹಾಡು ಹಗಲೇ ಸುರೇಂದ್ರ ಬಂಟ್ವಾಳ್ ತಲವಾರನ್ನು ಬೀಸಿದ್ದು ಘಟನೆಯಲ್ಲಿ ಗಣೇಶ್ ಮತ್ತು ಪುಷ್ಪರಾಜ್ ಎಂಬವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಹಾಡುಹಗಲೇ ತಲವಾರು ಹಿಡಿದು ತುಳು ಸಿನಿಮಾ ನಟನ ಗೂಂಡಾಗಿರಿ

Tulu actor Surendra Bantwals Rowdysm in Bantwal

ಈ ಮುಂಚೆಯೂ ಸುರೇಂದ್ರ ಬಂಟ್ವಾಳ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತ್ತು. ಇದು ವಿಕೋಪಕ್ಕೆ ತಿರುಗಿ ತಲವಾರು ಕಾಳಗ ನಡೆಯುವ ಮಟ್ಟಿಕೆ ಬೆಳೆದಿದೆ.

English summary
Tulu Actor and congress party activists Surendra Bantwal's rowdysm in Bantwal town. He attacked two BJP activists . They are admitted to hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X