ಕತ್ತೆಗೊಂದು ಕಾಲ; ಕತ್ತೆ ಹಾಲಿಗೆ ಭಾರೀ ಡಿಮಾಂಡ್!
ಮಂಗಳೂರು, ಜೂ 9: 'ಅತ್ತೆ ಗೊಂದು ಕಾಲ..ಕತ್ತೆಗೊಂದು ಕಾಲ' ಎನ್ನುವುದು ಗಾದೆ. ಈಗ ಕತ್ತೆಗೂ ಕಾಲ ಬಂದಿದೆ. ಎಲ್ಲರ ಬೈಗುಳ ಕೇಳುತ್ತಿದ್ದ ಕತ್ತೆಗಳಿಗೆ ಫಾರಂ ಆರಂಭಿಸಲಾಗಿದೆ. ಕತ್ತೆ ಹಾಲಿಗೆ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಕತ್ತೆಯ ಹಾಲು ಮತ್ತು ಕತ್ತೆಯ ಮೂತ್ರ ಹಲವು ರೋಗಗಳಿಗೆ ರಾಮಬಾಣವಾಗಿದ್ದು, ಮಂಗಳೂರಿನಲ್ಲಿ ರಾಜ್ಯದ ಮೊದಲ ಕತ್ತೆಯ ಸಾಕಾಣಿಕಾ ಕೇಂದ್ರ ಆರಂಭವಾಗಿದೆ.
ಮಂಗಳೂರು ಹೊರವಲಯದ ಕೊಣಾಜೆ ಬಳಿಯ ಇರಾದಲ್ಲಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಕತ್ತೆ ಸಾಕಾಣಿಕಾ ಕೇಂದ್ರ ಆರಂಭವಾಗಿದೆ. ದೇಶದಲ್ಲಿ ಎರಡನೇ ಕತ್ತೆ ಫಾರ್ಮ್ ಇದಾಗಿದ್ದು, ಅಳಿವಿನಂಚಿನಲ್ಲಿರುವ ಕತ್ತೆಗಳನ್ನು ಮತ್ತೆ ಬದುಕಿಸಬೇಕು ಮತ್ತು ಅದರ ಭರಪೂರ ಪ್ರಯೋಜನಗಳನ್ನು ಜನರು ತಿಳಿದುಕೊಳ್ಳಬೇಕು ಅನ್ನುವ ಉದ್ದೇಶದಿಂದ ಕೃಷಿ ವಿವಿಯ ಡಾ. ಶ್ರೀನಿವಾಸ ಗೌಡ ಗರಡಿಯಲ್ಲಿ ಐದು ಮಂದಿ ಉತ್ಸಾಹಿ ಐಟಿ ಉದ್ಯೋಗಿಗಳು ಕೊಣಾಜೆ ಬಳಿಯ ಇರಾದಲ್ಲಿ ಕತ್ತೆ ಸಾಕಾಣಿಕಾ ಕೇಂದ್ರ ಸಿದ್ಧಗೊಳಿಸಿದ್ದಾರೆ.

ಕೃಷಿ ಕಾರ್ಯಕ್ಕೆ ಧುಮುಕಿದ ಶ್ರೀನಿವಾಸ ಗೌಡ
ಕೊರೋನಾ ಕಾಲದಲ್ಲಿ ತನ್ನ ಐಟಿ ಉದ್ಯೋಗಕ್ಕೆ ಕತ್ತರಿ ಬಿದ್ದಾಗ ಬೆಂಗಳೂರಿನ ಜೆಪಿ ನಗರದಲ್ಲಿ ನೆಲೆಸಿದ್ದ ಶ್ರೀನಿವಾಸ ಗೌಡರು ತಡ ಮಾಡಲಿಲ್ಲ. ಏನಾದರು ಕೃಷಿ ಮಾಡಬೇಕು ಎಂಬ ಆಸಕ್ತಿ, ಯೋಚನೆ ಹೊಂದಿದ್ದ ಗೌಡರು, ತನ್ನ ಐವರು ಸ್ನೇಹಿತರ ಜೊತೆ ಸೇರಿ ನೇರವಾಗಿ ಕೃಷಿ ಕಾರ್ಯಕ್ಕೆ ಧುಮುಕಿದ್ದರು. ಸ್ನೇಹಿತರ ಸಲಹೆಯಂತೆ ಕೊಣಾಜೆ ಬಳಿಯ ಇರಾದಲ್ಲಿ 2.35 ಎಕರೆ ಜಾಗವನ್ನು ಲೀಸ್ ಪಡೆದು ಕುರಿ ಮತ್ತು ಆಡು ಸಾಕಣೆ ಆರಂಭಿಸಿದ್ದರು. ಎರಡು ವರ್ಷಗಳ ದುಡಿಮೆಯ ಬಳಿಕ ಇದೀಗ ಅಪರೂಪದ ಕೆಲಸಕ್ಕೆ ಕೈಹಾಕಿದ್ದಾರೆ.
ಆಕಳು, ಮೇಕೆ ಮತ್ತು ಎಮ್ಮೆಯ ಹಾಲು ಸೇರಿದಂತೆ ಕೆಲವು ಸಾರಿ ಒಂಟೆಯ ಹಾಲು ಸಿಗುವುದು ಸಾಮಾನ್ಯ ಮಾತಾಗಿದೆ. ಆದರೆ ಮಂಗಳೂರಿನಲ್ಲಿ ಇದೀಗ ಕತ್ತೆಯ ಹಾಲು ಮನೆ ಬಾಗಿಲಿಗೆ ಸರಬರಾಜು ಮಾಡಲಾಗುತ್ತಿದೆ. ಹಾಲಿನ ಮಾರಾಟದ ಜೊತೆಗೆ ಅದರಲ್ಲಿ ಅಡಗಿರುವ ಔಷಧೀಯ ಗುಣಗಳು, ಪೌಷ್ಠಿಕಾಂಶ ಮತ್ತು ಸೌಂದರ್ಯ ವರ್ಧಕದ ಬಗ್ಗೆ ಅರಿವು ಮೂಡಿಸುವ ಯತ್ನ ನಡೆಸಲಾಗುತ್ತಿದೆ ಎಂದು ಕತ್ತೆ ಮಾಲೀಕ ಶ್ರೀನಿವಾಸಗೌಡ ತಿಳಿಸಿದ್ದಾರೆ.

ಮಧುಮೇಹ, ರಕ್ತಹೀನತೆ, ಅಲರ್ಜಿ ಇತ್ಯಾದಿ ಚರ್ಮ ರೋಗಗಳಿಗೂ ರಾಮಬಾಣ
ಗುಜರಾತ್ ಮತ್ತು ಆಂಧ್ರಪ್ರದೇಶದಿಂದ 20 ಕತ್ತೆಗಳನ್ನು ತಂದು ಅದೇ ಎರಡೂವರೆ ಎಕರೆ ಜಾಗದಲ್ಲಿ ಪ್ರತ್ಯೇಕ ಕೊಟ್ಟಿಗೆ ಮಾಡಿದ್ದಾರೆ. ಅವರು ಹೇಳುವ ಪ್ರಕಾರ, ಕತ್ತೆ ಹಾಲಿನಲ್ಲಿ ಅತಿ ಹೆಚ್ಚು ಪ್ರೋಟೀನ್ ಇದ್ದು, ಮಕ್ಕಳಲ್ಲಿ ಬುದ್ಧಿಶಕ್ತಿ ಬೆಳೆಯಲು, ಅಪೌಷ್ಟಿಕತೆಯಿಂದ ನರಳುವ ಮಕ್ಕಳಿಗೆ ಇದನ್ನು ಕುಡಿದರೆ ಅತ್ಯಂತ ಸಹಕಾರಿಯಂತೆ. ಮಧುಮೇಹ, ರಕ್ತಹೀನತೆ, ಅಲರ್ಜಿ ಇತ್ಯಾದಿ ಚರ್ಮ ರೋಗಗಳಿಗೂ ರಾಮಬಾಣವಂತೆ. ಹಾಲಿನಲ್ಲಿ ಅತಿ ಹೆಚ್ಚು ರೋಗ ನಿರೋಧಕ ಗುಣಗಳಿರುವುದರಿಂದ ಇದನ್ನು ವಾರಕ್ಕೊಮ್ಮೆ ಹತ್ತು ಎಂ.ಎಲ್ ನಷ್ಟು ಕುಡಿಯಲು ಬಳಸಿದರೆ, ಮೂರು ತಿಂಗಳಲ್ಲಿ ದೇಹದಲ್ಲಿರುವ ಸಾಮಾನ್ಯ ರೋಗಗಳು ವಾಸಿಯಾಗುವುದಂತೆ.
ಸೋಮಾರಿಗಳನ್ನು ಕತ್ತೆಗಳಿಗೆ ಹೋಲಿಕೆ ಮಾಡುವುದು ಸಾಮಾನ್ಯ. ಆದರೆ, ಕತ್ತೆಗಳ ಪ್ರಯೋಜನಗಳ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಈ ಹಿಂದೆ ಭಾರದ ವಸ್ತುಗಳು, ಬಟ್ಟೆಗಳ ಹೊರಲು ಮಾತ್ರವೇ ಕತ್ತೆಗಳನ್ನು ಬಳಕೆ ಮಾಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಟೆಕ್ನಾಲಜಿ, ವಾಷಿಂಗ್ ಮಷಿನ್ ಗಳು ಬಂದ ಹಿನ್ನೆಲೆಯಲ್ಲಿ ಕತ್ತೆಗಳಿಗೆ ಬೆಲೆಯಿಲ್ಲದಂತಾಗಿತ್ತು. ಇದೀಗ ಮತ್ತೆ ಕತ್ತೆಗಳಿಗೂ ಉತ್ತಮ ಕಾಲ ಬಂದಿದೆ.

ಪ್ಯಾಕೆಟಿಗೆ 150 ರೂಪಾಯಿ ದರ ನಿಗದಿ
ಭರಪೂರ ಪ್ರಯೋಜನೆಗಳನ್ನು ಜನರು ತಿಳ್ಕೋಬೇಕು ಅನ್ನುವ ಉದ್ದೇಶದಿಂದ ಕೃಷಿ ವಿವಿಯ ಡಾ.ಶ್ರೀನಿವಾಸ ಗೌಡ ಅವರ ಗರಡಿಯಲ್ಲಿ ಐದು ಮಂದಿ ಉತ್ಸಾಹಿ ಐಟಿ ಉದ್ಯೋಗಿಗಳು ಕೊಣಾಜೆ ಬಳಿಯ ಇರಾದಲ್ಲಿ ಕತ್ತೆ ಫಾರ್ಮ್ ರೆಡಿ ಮಾಡಿದ್ದಾರೆ.
ಕತ್ತೆ ಹಾಲು, ಕತ್ತೆ ಹಾಲು ಮನುಷ್ಯನ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತಿದ್ದು, ಕತ್ತೆಯ ಹಾಲಿಗೆ ದೇಶ ಹಾಗೂ ವಿದೇಶಗಳಿಂದ ಬೇಡಿಕೆಗಳು ಹೆಚ್ಚಾಗತೊಡಗಿವೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡಿರುವ ಡಾ.ಶ್ರೀನಿವಾಸ ಗೌಡರ ಮಾರ್ಗದರ್ಶನದಲ್ಲಿ ಹಾಲನ್ನು ಸಣ್ಣ ಸಣ್ಣ ಪ್ಯಾಕೆಟ್ ಮಾಡಿ ಮಂಗಳೂರಿನಲ್ಲಿ ಸ್ಥಳೀಯವಾಗಿ ಮಾರಲು ರೆಡಿ ಮಾಡುತ್ತಿದ್ದಾರೆ. ಅಂದಹಾಗೆ, ವಿದೇಶಿ ಮಾರುಕಟ್ಟೆಯಲ್ಲಿ ಕತ್ತೆ ಹಾಲಿಗೆ 5ರಿಂದ 7 ಸಾವಿರ ರೂ. ದರವಿದ್ದು, ಇಲ್ಲಿನ ಐಸಿರಿ ಫಾರ್ಮ್ ನಿಂದ ಸಣ್ಣ ಪ್ಯಾಕೆಟ್ ರೂಪದಲ್ಲಿ ಕೊಡಲಾಗುತ್ತಿದೆ. 30 ಎಂ.ಎಲ್, 50 ಎಂ.ಎಲ್, 100, 200 ಎಂಎಲ್ ಹೀಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲು ಪ್ಯಾಕೆಟ್ ಮಾಡಲಾಗಿದೆ. 30 ಎಂ.ಎಲ್. ಪ್ಯಾಕೆಟಿಗೆ 150 ರೂಪಾಯಿ ದರ ವಿಧಿಸಲಾಗಿದೆ.

ಕತ್ತೆ ಮಾಂಸಕ್ಕಾಗಿ ಕಳ್ಳಸಾಗಣೆಗೆ ಕ್ರಮ ಅಗತ್ಯ
ಶ್ರೀನಿವಾಸ ಗೌಡರ ಕತ್ತೆ ಸಾಕಾಣೆ ಕೇಂದ್ರ ಭಾರತ ದೇಶದ ಎರಡನೇಯ ಕೇಂದ್ರವಾಗಿದ್ದು, ಮೊದಲನೇಯದ್ದು ಕೇರಳದ ಎರ್ನಾಕುಲಂನಲ್ಲಿದೆ. ಕತ್ತೆ ಅಳಿವಿನ ಅಂಚಿನಲ್ಲಿರುವ ಪ್ರಾಣಿಯಾಗಿದ್ದು, ಮುಂದಿನ ಜನಾಂಗ ನೋಡಲೂ ಸಿಗುವುದು ಅಪರೂಪ. ಅದನ್ನು ಉಳಿಸುವ ಪ್ರಯತ್ನ ಮಾಡುತ್ತೇವೆ. 2012ರ ಗಣಿಯು ಪ್ರಕಾರ ದೇಶದಲ್ಲಿ ಕತ್ತೆ ಸಂತತಿ ಮೂರು ಲಕ್ಷಗಳಷ್ಟು ಇದ್ದವು. ಆದರೆ 2019 ರ ಗಣತಿಯ ಪ್ರಕಾರ ಆ ಸಂಖ್ಯೆ 1.26ಲಕ್ಷಕ್ಕೆ ಇಳಿಕೆಯಾಗಿದೆ. ಕತ್ತೆ ಮಾಂಸಕ್ಕಾಗಿ ಕಳ್ಳಸಾಗಣೆಯಾಗುತ್ತಿದೆ.ಇದನ್ನು ಸರ್ಕಾರ ತಡೆಯಬೇಕು ಅಂತಾ ಶ್ರೀನಿವಾಸ ಗೌಡ ಹೇಳಿದ್ದಾರೆ.
ಕತ್ತೆಗಳಿಗೂ ಜೀವನವಿದೆ. ಕತ್ತೆ ಸಾಕಾಣಿಕೆಯಿಂದ ಜನರಿಗೆ ಕತ್ತೆ ಹಾಲು ವಿತರಣೆ ಮಾಡುವ ಉದ್ದೇಶವನನ್ನು ಹೊಂದಿದ್ದೇವೆ. ಕತ್ತೆ ಹಾಲಿನಲ್ಲಿ ಔಷಧೀಯ ಗುಣಗಳಿವೆ, ಸೌಂದರ್ಯವರ್ಧಕ ವಸ್ತುಗಳಿಗೂ ಕತ್ತೆ ಹಾಲನ್ನು ಬಳಕೆ ಮಾಡಲಾಗುತ್ತಿದ್ದು, ಈಗಾಗಲೇ ಇದಕ್ಕಾಗಿ ರೂ ಲಕ್ಷದಷ್ಟು ಆರ್ಡರ್ ಗಳು ಬಂದಿದೆ ಎಂದು ಶ್ರೀನಿವಾಸ್ ಗೌಡ ಹೇಳಿದ್ದಾರೆ.
-
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers












Click it and Unblock the Notifications