ಕಾಮತರ ಎಳನೀರು 'ಮಲಾಯಿ ಐಸ್ ಕ್ರೀಮ್'ಗೆ ಮಾರು ಹೋದ ಮಂಗಳೂರಿಗರು
Recommended Video

ಮಂಗಳೂರು, ಫೆಬ್ರವರಿ 13: ಬಾಯಾರಿದಾಗ ಎಳನೀರು ಸಿಕ್ಕಿದರೆ ಅದಕ್ಕೆ ಸಾಟಿಯಾಗುವಂಥ ಪಾನೀಯ ಇನ್ನೊಂದಿಲ್ಲ. ಇದೇ ಎಳನೀರಿಗೆ ಮಂಗಳೂರಿನ ನಿವೃತ್ತ ಇಂಜಿನಿಯರ್ ಹೊಸ ಸ್ವಾದ ನೀಡಿದ್ದಾರೆ. ಎಳನೀರಿನ ಗಂಜಿಗೆ ಐಸ್ ಕ್ರೀಮ್ ಬೆರೆಸಿ ತಯಾರು ಮಾಡುವ ಈ ಹೊಸ ತಿನಿಸಿನ ರುಚಿಗೆ ಮಂಗಳೂರಿಗರೇ ಫಿದಾ ಆಗಿದ್ದಾರೆ.
ಇದರ ರುಚಿ ಅಂತಿಂಥ ರುಚಿಯಲ್ಲ. ನೀವೆಲ್ಲೂ ಕಂಡಿರದ ರುಚಿರುಚಿಯಾದ ಮಲಾಯಿ ಐಸ್ ಕ್ರೀಮ್ ಇದು. ಮಂಗಳೂರಿನ ಪುಟ್ಟ ಅಂಗಡಿಯಲ್ಲಿ ಈ ಐಸ್ ಕ್ರೀಂ ರೆಡಿಯಾಗುತ್ತದೆ. ಸ್ಟ್ರಾಬೆರಿ, ಚಾಕ್ಲೇಟ್, ಪೈನಾಪಲ್, ಮೂಸಂಬಿ ಹೀಗೆ ಹತ್ತಕ್ಕೂ ಮಿಕ್ಕಿದ ಫ್ಲೇವರ್ ಗಳಲ್ಲಿ ತಯಾರಿಸೋ ಮಲಾಯಿ ಐಸ್ ಕ್ರೀಮ್ ರುಚಿ ಒಮ್ಮೆ ನೋಡಿದರೆ ಸಾಕು ಎಂಥವರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.
ಈ ಐಸ್ ಕ್ರೀಂ ರುಚಿಗೆ ಮಾರು ಹೋದ ಜನರು ಇದೀಗ ಮಂಗಳೂರಿನ ಬೀದಿಯಲ್ಲಿರುವ ಈ ಪುಟ್ಟ ಅಂಗಡಿಯನ್ನು ಹುಡುಕಿಕೊಂಡು ಬರುತ್ತಿದ್ದಾರೆ.

ಎಲ್ಲಿದೆ?
ಮಂಗಳೂರು ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಪಕ್ಕದಲ್ಲಿಯೇ ಇರುವ ಈ ಎಳನೀರಿನ ಪುಟ್ಟ ಅಂಗಡಿಗೆ ಜನರು ನಾ ಮುಂದು ತಾ ಮುಂದು ಎಂದು ದಾಂಗುಡಿ ಇಡುತ್ತಿದ್ದಾರೆ. ಸ್ಥಳದಲ್ಲಿಯೇ ಎಳನೀರು ಕತ್ತರಿಸಿ, ನೀರು ಕುಡಿಯೋಕೆ ಕೊಟ್ಟು ಅದರಲ್ಲಿರುವ ಗಂಜಿಗೆ ಬಾಳೆಹಣ್ಣು, ಐಸ್ ಕ್ರೀಮ್ ಮತ್ತು ಫ್ಲೇವರ್ ಮಿಕ್ಸ್ ಮಾಡಿ ತಯಾರಿಸೋ ಈ ಉಪ ಉತ್ಪನ್ನದ ರುಚಿಯೇ ಅತಿ ವಿಶಿಷ್ಟ; ಸ್ವಾದಿಷ್ಟ.

ಐಸ್ ಕ್ರೀಂ ಮಾಡೋಕೆ ಬಂದ್ರು ಎಂಜಿನಿಯರ್
ಇಷ್ಟಕ್ಕೂ ಹೀಗೆ ಎಳನೀರು ಕಡಿದು ಮಲಾಯಿ ಐಸ್ ಕ್ರೀಂ ರೆಡಿ ಮಾಡುತ್ತಿರುವ ಈ ವ್ಯಕ್ತಿ ಕಡಿಮೆ ಆಸಾಮಿಯೇನಲ್ಲ. ಎಂ. ಸೀತಾರಾಮ ಕಾಮತರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದವರು. ದೇಶದ ವಿವಿಧ ಕಂಪನಿಗಳಲ್ಲಿ ಇಂಜಿನಿಯರ್ ಆಗಿ ದುಡಿದವರು. ಅಷ್ಟೇ ಅಲ್ಲ, ಮಂಗಳೂರಿನ ಹೆಸರಾಂತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹತ್ತು ವರ್ಷಗಳ ಕಾಲ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.

ಎಳನೀರು ನೆಚ್ಚಿಕೊಂಡ ಕಾಮತರು
ಆದರೆ ವೈಯಕ್ತಿಕ ಕಾರಣದಿಂದ ಇಂಜಿನಿಯರ್ ವೃತ್ತಿಗೆ ಇತಿಶ್ರೀ ಹಾಕಿದ್ದ ಸೀತಾರಾಮ ಕಾಮತರು ನೆಚ್ಚಿಕೊಂಡಿದ್ದು ಎಳನೀರನ್ನು. ಎಳನೀರು ಕಡಿದು ಅದರಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಉದ್ಯೋಗ ಆರಂಭಿಸಿದರು.

ಸ್ಥಳದಲ್ಲೇ ರೆಡಿ
ಇವರು ಬಾಳೆಹಣ್ಣು, ಡ್ರೈ ಫ್ರುಟ್ಸ್ ಮತ್ತು ವಿವಿಧ ಫ್ಲೇವರ್ ಬಳಸಿಕೊಂಡು ಎಳನೀರ ಮಲಾಯಿ ಐಸ್ ಕ್ರೀಮ್ ತಯಾರಿಸುವುದೇ ವಿಶಿಷ್ಟವಾಗಿರುತ್ತದೆ. ಇದನ್ನು ಆಗಿಂದಾಗಲೇ ತಿಂದರಷ್ಟೇ ಹೆಚ್ಚು ರುಚಿ.

ಎಲ್ಲಿಲ್ಲದ ಬೇಡಿಕೆ
ಇನ್ನು ಈ ಎಳನೀರು ಮಲಾಯಿ ಐಸ್ ಕ್ರೀಮ್ ಸವಿಯಲು ಮಂಗಳೂರಿನವರು ಮಾತ್ರ ಅಲ್ಲ, ವಿದೇಶಗಳಲ್ಲಿ ನೆಲೆಸಿರುವವರೂ ಮಂಗಳೂರಿಗೆ ಭೇಟಿ ನೀಡಿದಾಗ ತಪ್ಪದೇ ಸೀತಾರಾಮ್ ಅವರ ಪುಟ್ಟ ಅಂಗಡಿಗೆ ಭೇಟಿ ನೀಡುತ್ತಾರೆ. ಹಲವರು ಊರಿಗೆ ಬಂದಾಗ ಮಲಾಯಿ ಐಸ್ ಕ್ರೀಮ್ ಟೇಸ್ಟ್ ನೋಡದೆ ತೆರಳುವುದಿಲ್ಲ.

ಎಳನೀರಿಗೆ ಹೊಸ ರೂಪ
ಎಳನೀರನ್ನು ಹೇಗೆಲ್ಲಾ ಬಳಸಬಹುದು ಎಂಬುದಕ್ಕೆ ಸೀತಾರಾಮ ಕಾಮತರ 'ಮಲಾಯಿ ಐಸ್ ಕ್ರೀಂ' ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಕೇವಲ 60 ರೂಪಾಯಿಗೆ ಸ್ಥಳದಲ್ಲಿಯೇ ತಯಾರಿಸಿ ಕೊಡುವ ಈ ಮಲಾಯಿ ಐಸ್ ಕ್ರೀಂ, ಆರೋಗ್ಯಕ್ಕೂ ಉತ್ತಮ. ಇದನ್ನು ಇನ್ನಷ್ಟು ಉನ್ನತೀಕರಿಸಿ ಮಾರುಕಟ್ಟೆಗೆ ತರುವಂತಾದರೆ, ಎಳನೀರಿನ ಬೇಡಿಕೆ ಇಮ್ಮಡಿಯಾಗುವುದರಲ್ಲಿ ಎರಡು ಮಾತಿಲ್ಲ.
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ












Click it and Unblock the Notifications