ಕಾಮತರ ಎಳನೀರು 'ಮಲಾಯಿ ಐಸ್ ಕ್ರೀಮ್'ಗೆ ಮಾರು ಹೋದ ಮಂಗಳೂರಿಗರು
Recommended Video

ಮಂಗಳೂರು, ಫೆಬ್ರವರಿ 13: ಬಾಯಾರಿದಾಗ ಎಳನೀರು ಸಿಕ್ಕಿದರೆ ಅದಕ್ಕೆ ಸಾಟಿಯಾಗುವಂಥ ಪಾನೀಯ ಇನ್ನೊಂದಿಲ್ಲ. ಇದೇ ಎಳನೀರಿಗೆ ಮಂಗಳೂರಿನ ನಿವೃತ್ತ ಇಂಜಿನಿಯರ್ ಹೊಸ ಸ್ವಾದ ನೀಡಿದ್ದಾರೆ. ಎಳನೀರಿನ ಗಂಜಿಗೆ ಐಸ್ ಕ್ರೀಮ್ ಬೆರೆಸಿ ತಯಾರು ಮಾಡುವ ಈ ಹೊಸ ತಿನಿಸಿನ ರುಚಿಗೆ ಮಂಗಳೂರಿಗರೇ ಫಿದಾ ಆಗಿದ್ದಾರೆ.
ಇದರ ರುಚಿ ಅಂತಿಂಥ ರುಚಿಯಲ್ಲ. ನೀವೆಲ್ಲೂ ಕಂಡಿರದ ರುಚಿರುಚಿಯಾದ ಮಲಾಯಿ ಐಸ್ ಕ್ರೀಮ್ ಇದು. ಮಂಗಳೂರಿನ ಪುಟ್ಟ ಅಂಗಡಿಯಲ್ಲಿ ಈ ಐಸ್ ಕ್ರೀಂ ರೆಡಿಯಾಗುತ್ತದೆ. ಸ್ಟ್ರಾಬೆರಿ, ಚಾಕ್ಲೇಟ್, ಪೈನಾಪಲ್, ಮೂಸಂಬಿ ಹೀಗೆ ಹತ್ತಕ್ಕೂ ಮಿಕ್ಕಿದ ಫ್ಲೇವರ್ ಗಳಲ್ಲಿ ತಯಾರಿಸೋ ಮಲಾಯಿ ಐಸ್ ಕ್ರೀಮ್ ರುಚಿ ಒಮ್ಮೆ ನೋಡಿದರೆ ಸಾಕು ಎಂಥವರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.
ಈ ಐಸ್ ಕ್ರೀಂ ರುಚಿಗೆ ಮಾರು ಹೋದ ಜನರು ಇದೀಗ ಮಂಗಳೂರಿನ ಬೀದಿಯಲ್ಲಿರುವ ಈ ಪುಟ್ಟ ಅಂಗಡಿಯನ್ನು ಹುಡುಕಿಕೊಂಡು ಬರುತ್ತಿದ್ದಾರೆ.

ಎಲ್ಲಿದೆ?
ಮಂಗಳೂರು ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಪಕ್ಕದಲ್ಲಿಯೇ ಇರುವ ಈ ಎಳನೀರಿನ ಪುಟ್ಟ ಅಂಗಡಿಗೆ ಜನರು ನಾ ಮುಂದು ತಾ ಮುಂದು ಎಂದು ದಾಂಗುಡಿ ಇಡುತ್ತಿದ್ದಾರೆ. ಸ್ಥಳದಲ್ಲಿಯೇ ಎಳನೀರು ಕತ್ತರಿಸಿ, ನೀರು ಕುಡಿಯೋಕೆ ಕೊಟ್ಟು ಅದರಲ್ಲಿರುವ ಗಂಜಿಗೆ ಬಾಳೆಹಣ್ಣು, ಐಸ್ ಕ್ರೀಮ್ ಮತ್ತು ಫ್ಲೇವರ್ ಮಿಕ್ಸ್ ಮಾಡಿ ತಯಾರಿಸೋ ಈ ಉಪ ಉತ್ಪನ್ನದ ರುಚಿಯೇ ಅತಿ ವಿಶಿಷ್ಟ; ಸ್ವಾದಿಷ್ಟ.

ಐಸ್ ಕ್ರೀಂ ಮಾಡೋಕೆ ಬಂದ್ರು ಎಂಜಿನಿಯರ್
ಇಷ್ಟಕ್ಕೂ ಹೀಗೆ ಎಳನೀರು ಕಡಿದು ಮಲಾಯಿ ಐಸ್ ಕ್ರೀಂ ರೆಡಿ ಮಾಡುತ್ತಿರುವ ಈ ವ್ಯಕ್ತಿ ಕಡಿಮೆ ಆಸಾಮಿಯೇನಲ್ಲ. ಎಂ. ಸೀತಾರಾಮ ಕಾಮತರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದವರು. ದೇಶದ ವಿವಿಧ ಕಂಪನಿಗಳಲ್ಲಿ ಇಂಜಿನಿಯರ್ ಆಗಿ ದುಡಿದವರು. ಅಷ್ಟೇ ಅಲ್ಲ, ಮಂಗಳೂರಿನ ಹೆಸರಾಂತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹತ್ತು ವರ್ಷಗಳ ಕಾಲ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.

ಎಳನೀರು ನೆಚ್ಚಿಕೊಂಡ ಕಾಮತರು
ಆದರೆ ವೈಯಕ್ತಿಕ ಕಾರಣದಿಂದ ಇಂಜಿನಿಯರ್ ವೃತ್ತಿಗೆ ಇತಿಶ್ರೀ ಹಾಕಿದ್ದ ಸೀತಾರಾಮ ಕಾಮತರು ನೆಚ್ಚಿಕೊಂಡಿದ್ದು ಎಳನೀರನ್ನು. ಎಳನೀರು ಕಡಿದು ಅದರಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಉದ್ಯೋಗ ಆರಂಭಿಸಿದರು.

ಸ್ಥಳದಲ್ಲೇ ರೆಡಿ
ಇವರು ಬಾಳೆಹಣ್ಣು, ಡ್ರೈ ಫ್ರುಟ್ಸ್ ಮತ್ತು ವಿವಿಧ ಫ್ಲೇವರ್ ಬಳಸಿಕೊಂಡು ಎಳನೀರ ಮಲಾಯಿ ಐಸ್ ಕ್ರೀಮ್ ತಯಾರಿಸುವುದೇ ವಿಶಿಷ್ಟವಾಗಿರುತ್ತದೆ. ಇದನ್ನು ಆಗಿಂದಾಗಲೇ ತಿಂದರಷ್ಟೇ ಹೆಚ್ಚು ರುಚಿ.

ಎಲ್ಲಿಲ್ಲದ ಬೇಡಿಕೆ
ಇನ್ನು ಈ ಎಳನೀರು ಮಲಾಯಿ ಐಸ್ ಕ್ರೀಮ್ ಸವಿಯಲು ಮಂಗಳೂರಿನವರು ಮಾತ್ರ ಅಲ್ಲ, ವಿದೇಶಗಳಲ್ಲಿ ನೆಲೆಸಿರುವವರೂ ಮಂಗಳೂರಿಗೆ ಭೇಟಿ ನೀಡಿದಾಗ ತಪ್ಪದೇ ಸೀತಾರಾಮ್ ಅವರ ಪುಟ್ಟ ಅಂಗಡಿಗೆ ಭೇಟಿ ನೀಡುತ್ತಾರೆ. ಹಲವರು ಊರಿಗೆ ಬಂದಾಗ ಮಲಾಯಿ ಐಸ್ ಕ್ರೀಮ್ ಟೇಸ್ಟ್ ನೋಡದೆ ತೆರಳುವುದಿಲ್ಲ.

ಎಳನೀರಿಗೆ ಹೊಸ ರೂಪ
ಎಳನೀರನ್ನು ಹೇಗೆಲ್ಲಾ ಬಳಸಬಹುದು ಎಂಬುದಕ್ಕೆ ಸೀತಾರಾಮ ಕಾಮತರ 'ಮಲಾಯಿ ಐಸ್ ಕ್ರೀಂ' ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಕೇವಲ 60 ರೂಪಾಯಿಗೆ ಸ್ಥಳದಲ್ಲಿಯೇ ತಯಾರಿಸಿ ಕೊಡುವ ಈ ಮಲಾಯಿ ಐಸ್ ಕ್ರೀಂ, ಆರೋಗ್ಯಕ್ಕೂ ಉತ್ತಮ. ಇದನ್ನು ಇನ್ನಷ್ಟು ಉನ್ನತೀಕರಿಸಿ ಮಾರುಕಟ್ಟೆಗೆ ತರುವಂತಾದರೆ, ಎಳನೀರಿನ ಬೇಡಿಕೆ ಇಮ್ಮಡಿಯಾಗುವುದರಲ್ಲಿ ಎರಡು ಮಾತಿಲ್ಲ.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price












Click it and Unblock the Notifications