ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿಗೆ 'ಎಕ್ಸೆಲೆನ್ಸ್' ಗೌರವ
ಮಂಗಳೂರು, ಫೆಬ್ರವರಿ 11: ನಗರದ ಅತ್ಯಂತ ಹಳೆಯ ಹಾಗು ಪ್ರತಿಷ್ಠಿತ ಸೇಂಟ್ ಆಗ್ನೆಸ್ ಮಹಿಳಾ ಕಾಲೇಜಿಗೆ, ಮಂಗಳೂರು ವಿಶ್ವವಿದ್ಯಾಲಯವು 'ಎಕ್ಸೆಲೆನ್ಸ್ ಕಾಲೇಜ್' ಎಂಬ ಪುರಸ್ಕಾರ ನೀಡಿ ಗೌರವಿಸಿದೆ.
ಈ ಪ್ರತಿಷ್ಠಿತ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಆಗ್ನೆಸ್ ಕಾಲೇಜ್ ಈಗ ರಾಜ್ಯದಲ್ಲೇ ಮೂರನೇ ಕಾಲೇಜ್ ಆಗಿದ್ದು, ಭಾರತದಲ್ಲೇ 18 ಕಾಲೇಜುಗಳ ಪೈಕಿ ಈ ಆಗ್ನೆಸ್ ಕಾಲೇಜು ಕೂಡಾ ಒಂದಾಗಿದೆ.[ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ಪರಿಸರ ಪ್ರೇಮ]

ಈ ಹೊಸ ಗರಿಮೆಯಿಂದ ಈ ಕಾಲೇಜಿಗೆ ಹೊಸ ಪ್ರಯೋಗಾಲಯ, ಯಂತ್ರೋಪಕರಣಗಳಂತಹ ಸೌಲಭ್ಯಗಳನ್ನು ಅಪ್ಗ್ರೇಡ್ ಮತ್ತು ಸೆಮಿನಾರ್ ಕಾರ್ಯಾಗಾರ ವ್ಯವಸ್ಥಿತವಾಗಿ ನಡೆಸಲು ಸಹಕಾರಿಯಾಗಿದೆ. ಈ ಮಾನ್ಯತೆ ದೊರಕಿದ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್ ಎಂ ಜೆಸ್ವಿನ, ಈ "ಎಕ್ಸೆಲೆನ್ಸ್ ಕಾಲೇಜ್" ಎಂಬ ಹೆಗ್ಗಳಿಕೆಗೆ ಪಾತ್ರವಾದ ನಮ್ಮ ಕಾಲೇಜ್ ಇನ್ನು ಮುಂದಿನ ದಿನಗಳಲ್ಲಿ ಯು.ಜಿ.ಸಿ ಮತ್ತು ಪಿ.ಜಿ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸುಧಾರಣೆಯ ಗುರಿಯನ್ನು ಹೊಂದಿದೆ ಎಂದು ಒನ್ ಇಂಡಿಯಾಕ್ಕೆ ಹೇಳಿದರು.
ನಾಕ್ ನಡೆಸಿದ ಮಾನ್ಯತಾ ಪ್ರಕ್ರಿಯೆಯಲ್ಲಿ ಈ ಕಾಲೇಜು 'ಎ' ಗ್ರೇಡ್ ಪಡೆದಿದೆ. ಇದಲ್ಲದೆ 2016 ರಲ್ಲಿ ಯುಜಿಸಿಯಿಂದ 'ಉತ್ಕೃಷ್ಟ ಸಾಧನೆಯ ಸಾಮರ್ಥ್ಯವಿರುವ ಕಾಲೇಜ್' ಎನ್ನುವ ಮಾನ್ಯತೆಯನ್ನು ಪಡೆದ್ದಿದ್ದು ಈಗ ಅದರೊಂದಿಗೆ ಮಂಗಳೂರು ವಿಶ್ವವಿದ್ಯಾಲಯ 'ಎಕ್ಸೆಲೆನ್ಸ್ ಕಾಲೇಜ್' ಎಂದು ಘೋಷಣೆ ಮಾಡಲಾಗಿದೆ.
ಸೇಂಟ್ ಆಗ್ನೆಸ್ ಕಾಲೇಜು ಮಂಗಳೂರು , ಭಾರತದ ಪಶ್ಚಿಮ ಕರಾವಳಿಯ ಮೊದಲ ಕ್ಯಾಥೊಲಿಕ್ ಮಹಿಳೆಯರ ಕಾಲೇಜ್ ಆಗಿದ್ದು ಇದನ್ನು 1921ರಲ್ಲಿ ಮದರ್ ಆಲೋಯ್ಸಿಯ ಸ್ಥಾಪಿಸಿದ್ದಾರೆ.ಇನ್ನು 2021ನೇ ವರ್ಷದಲ್ಲಿ ಶತಮಾನೋತ್ಸವ ಆಚರಿಸಲಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications