ಇನ್ನು ಮುಂದೆ ಕಡಲಿನ ಅಬ್ಬರಕ್ಕೆ ಸಿಲುಕಿದವರ ರಕ್ಷಣೆಗೆ ಬರಲಿದೆ ರೋಬೋ
ಮಂಗಳೂರು, ಜುಲೈ 24: ಕಡಲಿನ ಸೆಳೆತಕ್ಕೆ ಒಳಗಾಗಿ ಅಪಾಯದಲ್ಲಿರುವವರನ್ನು ಎಳೆತರಲು ರೋಬೋಟ್ ಒಂದನ್ನು ಸಿದ್ಧಪಡಿಸಲಾಗಿದೆ. ಮಂಗಳೂರಿನ ಕಡಲ ಕಿನಾರೆಯಲ್ಲಿ ಇದರ ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದೆ.
ಬೆಂಗಳೂರಿನ ಸಿಟಿ ಕಂಟ್ರೋಲ್ ಟೆಕ್ನಾಲಜಿ ಸಂಸ್ಥೆ ಈ ರೋಬೋಟನ್ನು ಬಳಕೆಗೆ ತರಲು ಪ್ರಯೋಗ ನಡೆಸಿದೆ. ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಒಷನ್ ಟೆಕ್ನಾಲಜಿ ಸಂಸ್ಥೆ ಈ ರೋಬೋಟನ್ನು ಸಿದ್ದಪಡಿಸಿದೆ.
ಮಳೆಗಾಲ ಆರಂಭವಾಯಿತೆಂದರೆ ಸಾಕು ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಳ್ಳುತ್ತದೆ . ಈ ಸಂದರ್ಭದಲ್ಲಿ ಎಚ್ಚರಿಕೆ ನಿರ್ಲಕ್ಷಿಸಿ ನೀರಿಗಿಳಿಯುವ ಹಲವಾರು ಮಂದಿ ಅಪಾಯಕ್ಕೆ ಸಿಲುಕುತ್ತಾರೆ. ಸೂಕ್ತ ಸಮಯದಲ್ಲಿ ರಕ್ಷಣೆ ಸಿಗದೆ ಕಡಲ ಆರ್ಭಟಕ್ಕೆ ಹಲವಾರು ಪ್ರಾಣಗಳೂ ಬಲಿಯಾಗುತ್ತದೆ. ಇಂತಹ ಸಂದರ್ಭಲ್ಲಿ ಅವರ ರಕ್ಷಣೆಗೆಂದೇ ರೋಬೋಟೊಂದನ್ನು ಸಿದ್ಧಪಡಿಸಲಾಗಿದೆ .

ರಾಜ್ಯದ ಕರಾವಳಿಯ ಕಡಲ ತೀರ ಇಂದು ಹೊಸ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ನೀರಿನಲ್ಲಿ ಅಪಾಯದಲ್ಲಿ ಸಿಲುಕಿದ್ದವರನ್ನು ರಕ್ಷಿಸುವ ಹೊಸ ಉಪಕರಣ ನೀರಿಗಿಳಿದಿದೆ. ಬೆಂಗಳೂರಿನ ಸಿಟಿ ಕಂಟ್ರೋಲ್ ಟೆಕ್ನಾಲಜಿ ಸಂಸ್ಥೆ ಈ ಉಪಕರಣವನ್ನು ತಯಾರಿಸಿದ್ದು ರಿಮೋಟ್ ಕಂಟ್ರೋಲ್ ಮುಖಾಂತರ ಅಪಾಯದಲ್ಲಿದ್ದ ಜನರ ಬಳಿ ಈ ರೋಬೋ ಚಲಿಸುತ್ತದೆ.
Robo coastal observer ಹೆಸರಿನ ಈ ಯಂತ್ರ ಸಂಪೂರ್ಣ ಬ್ಯಾಟರಿ ಚಾಲಿತವಾಗಿದ್ದು, ರಿಮೋಟ್ ಕಂಟ್ರೋಲರ್ ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ.
ಮಂಗಳೂರಿನ ಸುಲ್ತಾನ್ ಬತ್ತೇರಿ ಎಂಬಲ್ಲಿ ಸಮುದ್ರ ಹಾಗು ನದಿ ಸಂಗಮದ ಸ್ಥಳದಲ್ಲಿ ಇದರ ಯಶಸ್ವಿ ಪ್ರಯೋಗ ನಡೆಸಲಾಗಿದೆ. ನದಿ, ಸರೋವರ, ಕೊಳ ಮತ್ತು ಸಮುದ್ರದ ನೀರಿನಲ್ಲಿ ಈ ರೋಬೋ ಕೊಸ್ಟಲ್ ಒಬ್ಸರ್ವರ್ ಯಂತ್ರವನ್ನು ಬಳಸಬಹುದಾಗಿದೆ.

ಈ ರೋಬೋಟ್ ಸಂಗ್ರಹಿಸಿದ ಡೇಟಾವನ್ನು ಸ್ಯಾಟಲೈಟ್ ಟೆಲಿಮೆಟ್ರಿ ಮೂಲಕ ಪ್ರಸಾರ ಮಾಡೋ ಸಾಮರ್ಥ್ಯ ಕೂಡ ಹೊಂದಿದೆ. ಕರಾವಳಿಯಲ್ಲಿ ಆಗುವ ಮಾಲಿನ್ಯ, ಕಡಲಲ್ಲಾಗುವ ಉಪ್ಪಿನಂಶದ ವ್ಯತ್ಯಾಸ ಸೇರಿದಂತೆ ಇತರ ಬೆಳವಣಿಗೆಗಳ ಬಗ್ಗೆಯೂ ಮಾಹಿತಿಯನ್ನೂ ಈ ಯಂತ್ರ ನೀಡುತ್ತದೆ.
ಅಲ್ಲದೆ ಕ್ಯಾಮರಾವನ್ನು ಅಳವಡಿಸಿರುವ ಕಾರಣ ಕರಾವಳಿ ಕಣ್ಗಾವಲಾಗಿ ಈ ಉಪಕರಣವನ್ನು ಬಳಸಬಹುದಾಗಿದೆ. ಇಡೀ ವ್ಯಕ್ತಿಯ ದೇಹದ ತೂಕವನ್ನು ಹೊರುವ ಸಾಮರ್ಥ್ಯ ಈ ಯಂತ್ರ ಹೊಂದಿದ್ದು, ಅಪಾಯದಲ್ಲಿ ಸಿಲುಕಿದ ವ್ಯಕ್ತಿಯನ್ನು ದಡಕ್ಕೆ ಹೊತ್ತು ತರುವ ಸಾಮರ್ಥ್ಯ ಈ ರೋಬೋಟ್ ಹೊಂದಿದೆ.

ಈ ರೀತಿಯ ರೋಬೋಟ್ ಗಳನ್ನು ಇತರ ದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿವೆ . ಆದರೆ ನಮ್ಮ ಕರಾವಳಿಯ ಕಡಲಿನ ಆಳೆತ್ತರದ ಅಲೆಗಳ ಮೇಲೆ ಇದರ ಪ್ರಯೋಗ ಯಶಸ್ವಿಯಾಗ ಬೇಕಿದೆ. ಮಳೆಗಾಲದಲ್ಲಿ ಕಡಲ ಪ್ರಕ್ಷುಬ್ದ ವಾತಾವರಣದಲ್ಲಿ ಇದರ ಪ್ರಯೋಗ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಈ ರೋಬೋಟ್ ತುರ್ತು ಸಂದರ್ಭದಲ್ಲಿ ಬಳಕೆಗೆ ಬರಲಿದೆ.
ಪ್ರಯೋಗ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಭಾರತೀಯ ತಟರಕ್ಷಣಾ ಪಡೆ ಈ ರೋಬೋಟನ್ನು ಬಳಕೆಗೆ ತರಲಿದೆ.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications