Get Updates
Get notified of breaking news, exclusive insights, and must-see stories!

ಸಿ. ಟಿ. ರವಿ ಕುಲ, ಗೋತ್ರ ಇಲ್ಲದ ಮನುಷ್ಯ; ರಮಾನಾಥ್ ರೈ

ಮಂಗಳೂರು, ಏಪ್ರಿಲ್ 19; " ಸಿ. ಟಿ. ರವಿ ಒಬ್ಬ ಕುಲ, ಗೋತ್ರ ಇಲ್ಲದ ಮನುಷ್ಯ. ತನ್ನ ಕುಲ ಗೋತ್ರ ಯಾವುದು ಅಂತಾ ಅವನಿಗೆ ಗೊತ್ತಿಲ್ಲ. ಸಿ. ಟಿ. ರವಿ ಮಾತಿಗೆ ಅಷ್ಟು ಮಹತ್ವ ಇಲ್ಲ" ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ರಮಾನಾಥ್ ರೈ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಿ. ಟಿ. ರವಿ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.

ಸಿ. ಟಿ. ರವಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಿರುದ್ಧ ಟೀಕೆಯನ್ನು ನಡೆಸಿದ್ದರು. " ಸಿ. ಟಿ. ರವಿ ಯಾವುದೋ ಪ್ರಚೋದನೆ ಮಾಡಿ, ರಾಜಕಾರಣ ಮಾಡಿಕೊಂಡು ಯಾವುದೋ ಸ್ಥಾನ ಮಾನಕ್ಕೆ ಬಂದಿರಬಹುದು. ಜನಸೇವೆ ಮಾಡಿ ಅವರು ಸ್ಥಾನ ಮಾನಕ್ಕೆ ಬಂದವರಲ್ಲ" ಎಂದು ಆರೋಪಿಸಿದರು.

Ramanath Rai Verbal Attack On CT Ravi

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ ರಮಾನಾಥ್ ರೈ, "ಒಬ್ಬರು ಕಾಂಗ್ರೆಸ್ ಮುಳುಗುವ ಹಡಗು ಅಂತಾ ಹೇಳುತ್ತಾರೆ. ಆದರೆ ಹಾಗೆ ಹೇಳಿರುವವರ ಅಜ್ಜ-ಪಿಜ್ಜನು ಕೂಡಾ ಕಾಂಗ್ರೆಸ್ ನಲ್ಲಿ ಇದ್ದಿರಬಹುದು. ಇವರ ಅಜ್ಜ-ಪಿಜ್ಜ ಕೂಡಾ ಕಾಂಗ್ರೆಸ್ ಹಡಗಿನಲ್ಲಿಯೇ ಕೂತು ಬಂದಿರಬಹುದು" ಎಂದರು.

"ನಮ್ಮ ಪಕ್ಷದ ಬಗ್ಗೆ ಚಿಂತೆ ಮಾಡೋದು ಬೇಡ. ನಮ್ಮ ಹಡಗಿನಲ್ಲಿ ನೀರು ತುಂಬಿದೆ. ನಮ್ಮ ಮನೆ ಹೇಗಿರಬೇಕೆಂದು ಎನ್ನೋದು ನಮಗೆ ಬಿಟ್ಟಿರೋದು. ಉಳಿದವರು ಚಿಂತೆ ಮಾಡುವ ಅವಶ್ಯಕತೆ ಇಲ್ಲ" ಅಂತಾ ರಮಾನಾಥ್ ರೈ ವಾಗ್ದಾಳಿ ನಡೆಸಿದರು.

"ಸರ್ಕಾರ ಕೊರೊನಾ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಕೇವಲ ಬಾಯಿ ಮಾತಿನ ಉಪಚಾರದಿಂದ ಕೊರೊನಾ‌ ನಿಯಂತ್ರಣ ಆಗಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ಎಡವಿದ್ದಾರೆ" ಎಂದು ಆರೋಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+