ಕರಾವಳಿಯ ನೆಲದಲ್ಲಿ ತಮಿಳುನಾಡು ಓಲೆಬೆಲ್ಲ
ಮಂಗಳೂರು, ಡಿಸೆಂಬರ್ 7: ತಾಳೆ ಬೆಲ್ಲ ಬಹಳ ಔಷಧೀಯ ಗುಣಗಳನ್ನು ಹೊಂದಿದೆ. ಈ ಕಾರಣದಿಂದಲೇ ಈ ಬೆಲ್ಲವನ್ನು ಅನೇಕ ರೀತಿಯಲ್ಲಿ ಬಳಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತಾಳೆ ಬೆಲ್ಲ ಕೊಂಡುಕೊಳ್ಳಬೇಕೆಂದರೆ ಎಲ್ಲೆಲ್ಲೋ ಹುಡುಕಾಡಬೇಕಾಗಿದೆ. ಆದರೆ ಈಗ ಈ ಹುಡುಕಾಟಕ್ಕೆ ತೆರೆ ಎಳೆಯುವುದಕ್ಕಾಗಿಯೋ ಅನ್ನುವಂತೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಗುಡಿ ಕೈಗಾರಿಕೋದ್ಯಮಿಗಳು ತಾವು ತಯಾರಿಸಿದ ಬೆಲ್ಲದೊಂದಿಗೆ ದ.ಕ, ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ.
ನಗರದ ಕುಲಶೇಖರ, ನಂತೂರು, ಪಡೀಲ್, ಕಣ್ಣೂರು, ಅಡ್ಯಾರು, ಪರಂಗಿಪೇಟೆ ಮುಂತಾದೆಡೆ ಈ ತಾಳೆ ಬೆಲ್ಲ ಮಾರಾಟವಾಗುತ್ತಿದೆ.[ಮೂಡಬಿದ್ರೆ: ಬ್ಲೂಸ್ ಚಾಕಲೇಟಿನಲ್ಲಿ ಸಿಕ್ತು ಜೀವಂತ ಹುಳು]

ತಮಿಳುನಾಡಿನಿಂದ ಬಂದಿರುವ ಔಷಧಿಯ ಗುಣ ಹೊಂದಿರುವ ಈ ತಾಳೆಬೆಲ್ಲಕ್ಕೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಈಗಾಗಲೇ ಅಲಲ್ಲಿ ಅಪರೂಪಕ್ಕೆ ಕಾಣ ಸಿಗುವ ಬೆಲ್ಲವನ್ನು ಖರೀದಿಸುವವರಿದ್ದಾರೆ. ತಮಿಳುನಾಡಿನ ಗುಡಿ ಕೈಗಾರಿಕೋದ್ಯಮಿಗಳು ತಾವು ತಯಾರಿಸಿದ ಸಾಂಪ್ರದಾಯಿಕ ಬೆಲ್ಲ ಮಾತ್ರವಲ್ಲದೆ ಕಾಳು ಮೆಣಸು , ಶುಂಟಿ ಮಿಶ್ರಿತ ಬೆಲ್ಲವನ್ನೂ ನಗರದೆಲ್ಲೆಡೆ ಮಾರಾಟ ಮಾಡುತ್ತಿದ್ದಾರೆ.

ಬೆಲ್ಲ ಸವಿಯ ಬಯಸುವವರು ನೇರವಾಗಿ ,ಮಾರಾಟಗಾರರ ಬಳಿ ಸಾಗಿ ಬೆಲ್ಲ ಖರೀದಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದಲ್ಲದೆ ಈ ಬೆಲ್ಲದ ಮಾರಾಟಗಾರರು ಉಭಯ ಜಿಲ್ಲೆಗಳಲ್ಲಿ ಬೆಲ್ಲ ಮಾರಿ ಲಾಭವನ್ನು ಕಂಡುಕೊಳ್ಳುತ್ತಿದ್ದಾರೆ.

ಓಲೆಬೆಲ್ಲದ ತಯಾರಿಕೆ:
ತಮಿಳುನಾಡಿನ ತಿರುಚಂದೂರು ಅನ್ನುವ ಗ್ರಾಮಕ್ಕೆ ಸೇರಿದ ಗುಡಿ ಕೈಗಾರಿಕೋದ್ಯಮಿಗಳು ಬೆಲ್ಲ ತಯಾರಿಕೆಯಲ್ಲಿ ಅಗ್ರ ಸ್ಥಾನದಲ್ಲಿ ಇದ್ದಾರೆ. ಈ ಬೆಲ್ಲವನ್ನು ತಾಳೆ, ತೆಂಗು, ಈಚಲು ಮರದಿಂದ ಅಲ್ಪ ಪ್ರಮಾಣದಲ್ಲಿ ಸುಣ್ಣ ಬೆರೆಸಿದ ಶೇಂದಿ ತೆಗೆದು ಅದನ್ನು ಮನೆಯಲ್ಲಿ ಬಾಣಲೆಗೆ ಸುರಿದು 4 ರಿಂದ 5 ಗಂಟೆಗಳ ಕಾಲ ಕುದಿಸಾಲಾಗುತ್ತದೆ. ಬಳಿಕ ಅದು ಕಂದು ಬಣ್ಣಕ್ಕೆ ಬದಲಾಯಿಸಿ, ದಪ್ಪವಾದಾಗ ಒಲೆಯಿಂದ ತೆಗೆದು ಬೆಲ್ಲದ ಅಚ್ಚಿಯಲ್ಲಿ ಸುರಿಯಲಾಗುತ್ತದೆ. ಸುಮಾರು 3 ಗಂಟೆಗಳ ಬಳಿಕ ಸೂಕ್ಷ್ಮವಾಗಿ ಬೇರ್ಪಡಿಸಲಾಗುತ್ತದೆ. ಆದರೆ ತಮಿಳುನಾಡಿನಲ್ಲಿ ತಯಾರಿಸಿದ ಬೆಲ್ಲವನ್ನು ತಮಿಳುನಾಡಿಗೆ ಮಾತ್ರ ಸೀಮಿತವಾಗಿಡದೆ ಈ ಕೈಗಾರಿಕೋದ್ಯಮಿಗಳು ವ್ಯಾವಹಾರಿಕ ದೃಷ್ಟಿಯನ್ನು ಬೇರೆ ರಾಜ್ಯಗಳತ್ತ ಹರಿಸಿದ್ದಾರೆ. ಎಲ್ಲೆಲ್ಲಿ ಈ ಬೆಲ್ಲವನ್ನು ಇಷ್ಟ ಪಡುತ್ತಾರೆ ಅಲ್ಲಲ್ಲಿ ವ್ಯವಹಾರ ವಹಿವಾಟುಗಳನ್ನು ವಿಸ್ತರಿಸುತ್ತಾ ಬರುತ್ತಿದ್ದಾರೆ.

-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications