ಸೊಳ್ಳೆಗಳಿಗೆ ಯಮಪಾಶ, ಮಂಗಳೂರಿನ ಈ ಮೋಝಿಕ್ವಿಟ್
ಮಂಗಳೂರು, ಜೂ. 08 : ಸೊಳ್ಳೆ ಹಾವಳಿಯಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಪಡುತ್ತಾರೆ. ಮಲೇರಿಯಾ, ಚಿಕನ್ ಗುನ್ಯಾ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳಿಗೆ ಸೊಳ್ಳೆಗಳು ಕಾರಣವಾಗಿವೆ. ಸೊಳ್ಳೆಗಳನ್ನು ಸರ್ವನಾಶ ಮಾಡಲು ಮಂಗಳೂರಿನ ವ್ಯಕ್ತಿಯೊಬ್ಬರು ಹೊಸತೊಂದು ಆವಿಷ್ಕಾರ ಮಾಡಿದ್ದಾರೆ. ಈ ಆವಿಷ್ಕಾರ ಫಲವನ್ನು ನೀಡಿದೆ.
ಕಾಯಿಲ್, ಲಿಕ್ವಿಡ್ಗಳನ್ನು ಹಾಕಿ ಸೊಳ್ಳೆಗಳನ್ನು ಓಡಿಸುವುದನ್ನು ನೋಡಿದ್ದೀರಿ. ಆದರೆ ಈ ಹೊಸ ಯಂತ್ರ ಸೊಳ್ಳೆಗಳನ್ನು ಕೊಲ್ಲುತ್ತದೆ. ಅಲ್ಲದೇ ಇದಕ್ಕೆ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಿಲ್ಲ. ಕೇವಲ ಕರೆಂಟ್ ಇದ್ದರೆ ಸಾಕು ಈ ಯಂತ್ರ ಸೊಳ್ಳೆಗಳನ್ನು ಸರ್ವನಾಶ ಮಾಡುತ್ತದೆ.

ಸೊಳ್ಳೆಗಳನ್ನು ಕೊಲ್ಲುವ ಈ ಯಂತ್ರದ ಹೆಸರು 'ಮೋಝಿಕ್ವಿಟ್'. ಮಂಗಳೂರಿನ ಇಗ್ನೇಶಿಯಸ್ ಓರ್ವಿನ್ ನೊರೋನ್ಹಾ ಇದನ್ನು ಆವಿಷ್ಕಾರ ಮಾಡಿದ್ದಾರೆ. 12 ವರ್ಷಗಳ ಸಂಶೋಧನೆ ನಂತರ 'ಮೋಝಿಕ್ವಿಟ್'ಯಂತ್ರ ಸಿದ್ಧಗೊಂಡಿದೆ. [ಸೊಳ್ಳೆಗೆ ಹೆದರಿ ಸಭಾಪತಿಗೆ ಪತ್ರ ಬರೆದ ವಿಮಲಾಗೌಡ]
ಬಿ.ಕಾಂ ಓದಿದ್ದ ಓರ್ವಿನ್ ನೊರೋನ್ಹಾ ಸೌದಿ ಅರೇಬಿಯಾದಲ್ಲಿ ಅಗ್ನಿ ನಿರೋಧಕ ಮತ್ತು ವಿವಿಧ ರಾಸಾಯನಿಕ ಉತ್ಪಾದನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಭಾರತಕ್ಕೆ ವಾಪಸ್ ಬಂದ ಬಳಿಕ ಅವರು ಸೊಳ್ಳೆಗಳ ನಿಮೂರ್ಲನೆಗಾಗಿ ಸಂಶೋಧನೆ ನಡೆಸಿ, ಮೋಝಿಕ್ವಿಟ್ ಯಂತ್ರವನ್ನು ಆವಿಷ್ಕರಿಸಿದ್ದಾರೆ.
10 ಕೋಟಿ ಸೊಳ್ಳೆ ಕೊಂದಿದೆ : ಮೋಝಿಕ್ವಿಟ್ ಯಂತ್ರವನ್ನು ಪಶು ಸಂಗೋಪನಾ ಸಚಿವ ಟಿ.ಬಿ ಜಯಚಂದ್ರ ಅವರು ನೋಡಿದ್ದರು. ಪರೀಕ್ಷಾರ್ಥವಾಗಿ ಬೀದರ್ ಪಶು ವಿವಿಯ ದನದ ಕೊಟ್ಟಿಗೆಯಲ್ಲಿ ಈ ಯಂತ್ರವನ್ನು ಇಡಲಾಗಿತ್ತು. ಮೂರು ತಿಂಗಳಿನಲ್ಲಿ ಈ ಯಂತ್ರ 10 ಕೋಟಿ ಸೊಳ್ಳೆಗಳನ್ನು ಕೊಂದು ತಿಂದಿದೆ. ಸೊಳ್ಳೆಗಳನ್ನು ಸಾಯಿಸಿದ್ದರಿಂದ ಪಶು ವಿವಿಯ ಹಸುಗಳ ತೂಕ ಹೆಚ್ಚಾಗುವ ಜೊತೆಗೆ ಹಾಲಿನ ಇಳುವರಿಯೂ ಹೆಚ್ಚಾಗಿದೆಯಂತೆ.

ಈ ಯಂತ್ರದ ಕೆಲಸ ಹೇಗೆ? : ಮೋಝಿಕ್ವಿಟ್ ಯಂತ್ರದಲ್ಲಿ ಫ್ಯಾನ್ ಆಳವಡಿಸಲಾಗಿದೆ. ಇದರಿಂದ ಸೊಳ್ಳೆಗಳು ಸಾಯುತ್ತದೆ. ಸೊಳ್ಳೆಗಳು ಯಂತ್ರದ ಬಳಿ ಬರುವುದಕ್ಕೆ ರಕ್ತದ ರೀತಿಯ ವಸ್ತುವನ್ನು ಬಳಸಲಾಗಿದೆ. ಈ ಯಂತ್ರದ ಬಳಕೆಗಾಗಿ ಓರ್ವಿನ್ ಪೇಟೆಂಟ್ ಪಡೆದಿದ್ದಾರೆ.
ಈ ಮೋಝಿಕ್ವಿಟ್ ಎರಡೂ ರೂಪದಲ್ಲಿದ್ದು ಲಭ್ಯವಿದೆ ಸಣ್ಣ ಯಂತ್ರದ ಬೆಲೆ 1500 ರೂ., ದೊಡ್ಡ ಯಂತ್ರದ ಬೆಲೆ 2990 ರೂ. ಆಗಿದೆ. ವಿಶೇಷವೆಂದರೆ ಈ ಯಂತ್ರ ಆರೋಗ್ಯ ಸಚಿವ ಯು.ಟಿ. ಖಾದರ್ ಮನೆಯಲ್ಲೂ ಇದೆ. ಹೆಚ್ಚಿನ ಮಾಹಿತಿಗಾಗಿ ಇಗ್ನೇಶಿಯಸ್ ಓರ್ವಿನ್ ನೊರೋನ್ಹಾ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ : 98866 75656
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications