ವಾಯುಸೇನೆ ವಿಮಾನದಲ್ಲಿದ್ದರೆ ಮಂಗಳೂರ ಸೈನಿಕ?
ಮಂಗಳೂರು, ಜುಲೈ, 23: ನಾಪತ್ತೆಯಾದ ವಾಯುಸೇನೆ ವಿಮಾನದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಏಕನಾಥ್ ಶೆಟ್ಟಿ ಎಂಬ ವ್ಯಕ್ತಿಯೊಬ್ಬರು ಇದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ಆದರೆ ಈ ಕುರಿತು ಭಾರತೀಯ ಸೇನೆಯಿಂದ ಯಾವುದೇ ರೀತಿಯ ಅಧಿಕೃತ ಹೇಳಿಕೆ ಲಭ್ಯವಾಗಿಲ್ಲ. ಏಕನಾಥ್ ಶೆಟ್ಟಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.[ತಾಂತ್ರಿಕ ದೋಷಗಳಿದ್ದರೂ ವಿಮಾನ ಟೇಕಾಫ್ ಆಗಿತ್ತೆ?]

ವಿಮಾನ ಟೇಕಾಫ್ ಆಗುವ ಮುನ್ನ ತಮ್ಮ ಮನೆಗೆ ಕರೆ ಮಾಡಿ, ತಾನು ಈ ವಿಮಾನದಲ್ಲಿ ಇರುವುದಾಗಿ ಅವರು ತಮ್ಮ ಪತ್ನಿಗೆ ತಿಳಿಸಿದ್ದರು. ಗುರುವಾಯನಕೆರೆ ಮೂಲದ 48 ವರ್ಷದ ಏಕನಾಥ ಶೆಟ್ಟಿಯವರು ಸೇನೆಯಿಂದ ನಿವೃತ್ತರಾದ ಬಳಿಕವೂ ಸೇವೆಯಲ್ಲಿ ಮುಂದುವರಿದ್ದರು. ಮನೆಯವರು ಶೆಟ್ಟಿ ಅವರನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ.[29 ಜನರಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ]

ಶುಕ್ರವಾರ ಬೆಳಗ್ಗೆ ಚೆನ್ನೈನ ತಾಂಬರಮ್ ಹೊರಟಿದ್ದ ವಿಮಾನ ಬಂಗಾಳ ಕೊಲ್ಲಿ ಮೇಲೆ ಹಾರುತ್ತಿದ್ದಾಗ ನಾಪತ್ತೆಯಾಗಿದೆ. ನಿನ್ನೆ ಬೆಳಗ್ಗೆಯಿಂದ ಆ ಹಿಂದೆ ಕಂಡು ಕೇಳರಿಯದ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದರೂ ವಾಯುಪಡೆಯ ಈ ವಿಮಾನ ಪತ್ತೆಯಾಗಿಲ್ಲ. ಆರು ಜನ ಸಿಬ್ಬಂದಿ ಸೇರಿದಂತೆ ಸುಮಾರು 29 ಜನರಿದ್ದ ವಿಮಾನ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.












Click it and Unblock the Notifications