ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಹಿಂಸಾಚಾರ: ಸಿಸಿಟಿವಿ ದೃಶ್ಯಗಳು ಹೇಳುತ್ತೆ ಹೊಸ ಕಥೆಯೊಂದನ್ನಾ!

|
Google Oneindia Kannada News

Recommended Video

ಮಂಗಳೂರು ಹಿಂಸಾಚಾರದ ಬಗ್ಗೆ ಸಿಸಿಟಿವಿ ದೃಶ್ಯಗಳು ಹೇಳೋ ಕಥೆನೇ ಬೇರೆ | MANGALORE | CAA | NRC |

ಮಂಗಳೂರು, ಡಿ 24: ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ದದ ಪ್ರತಿಭಟನೆ, ಇದ್ದಕ್ಕಿದ್ದಂತೇ, ಗೋಲಿಬಾರ್ ನಲ್ಲಿ ಇಬ್ಬರನ್ನು ಬಲಿತೆಗೆದುಕೊಂಡಿತು ಎಂದರೆ, ಇದರ ಹಿಂದೆ ಷಡ್ಯಂತ್ರವಿತ್ತೇ ಅಥವಾ ಇದೊಂದು ಪೂರ್ವನಿಯೋಜಿತವೇ ಎನ್ನುವ ಸಂಶಯ ಕಾಡುತ್ತಿತ್ತು.

ಈಗ, ಮಂಗಳೂರು ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ಫುಟೇಜ್ ಮತ್ತು ಫೋಟೋಗಳನ್ನು ನೋಡಿದರೆ, ಈ ಸಂಶಯೆಕ್ಕೆ ಪುಷ್ಟಿ ನೀಡುವಂತಿದೆ. ಫುಟೇಜ್ ಪ್ರಕಾರ, ಗೂಡ್ಸ್ ಆಟೋದಲ್ಲಿ ಪ್ರತಿಭಟನಾಕಾರರು ಕಲ್ಲು ತರಿಸಿಕೊಂಡಿದ್ದು ಸ್ಪಷ್ಟವಾಗಿದೆ.

ಸಿಎಎ ವಿರುದ್ಧ ನಡೆದ ಹೋರಾಟದ ಬಗ್ಗೆ ಯಾವುದೇ ಮಾಹಿತಿಗಳಿದ್ದರೆ ಪೊಲೀಸರ ಜೊತೆ ಹಂಚಿಕೊಳ್ಳಬಹುದು. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಪೊಲೀಸರು, ಸಾಮಾಜಿಕ ತಾಣದ ಮೂಲಕ ಮನವಿ ಮಾಡಿದ್ದರು.

ಮಂಗಳೂರು ಗಲಭೆಗೆ ಮೊದಲೇ ನಡೆದಿತ್ತಾ ಪ್ಲಾನ್..? ಸಿಸಿಟಿವಿಯಲ್ಲಿ ಸೆರೆಮಂಗಳೂರು ಗಲಭೆಗೆ ಮೊದಲೇ ನಡೆದಿತ್ತಾ ಪ್ಲಾನ್..? ಸಿಸಿಟಿವಿಯಲ್ಲಿ ಸೆರೆ

ಮಂಗಳೂರು ಗಲಭೆ ವಿಚಾರದಲ್ಲಿ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲೂ ಹಲವು ಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈಮೇಲ್ - [email protected] ಅಥವಾ ವಾಟ್ಸಾಪ್ ಸಂಖ್ಯೆ 9480802327 ಮೂಲಕ ಮಾಹಿತಿ ನೀಡಬಹುದೆಂದು ಮಂಗಳೂರು ಪೊಲೀಸರು ಹೇಳಿದ್ದರು.

ಕಾಂಗ್ರೆಸ್ಸಿನಿಂದ ಏಳೂವರೆ ಲಕ್ಷ

ಕಾಂಗ್ರೆಸ್ಸಿನಿಂದ ಏಳೂವರೆ ಲಕ್ಷ

ಗೋಲೀಬಾರ್ ನಲ್ಲಿ ಮೃತಪಟ್ಟ ಇಬ್ಬರಿಗೆ ರಾಜ್ಯ ಸರಕಾರದಿಂದ ಹತ್ತು ಲಕ್ಷ, ಕಾಂಗ್ರೆಸ್ಸಿನಿಂದ ಏಳೂವರೆ ಲಕ್ಷ ಮತ್ತು ಜೆಡಿಎಸ್ ನಿಂದ ಐದು ಲಕ್ಷ ಪರಿಹಾರ ಪ್ರಕಟಗೊಂಡಿತ್ತು. ಮಂಗಳೂರು ಪೊಲೀಸರು, ಹಿಂಸಾಚಾರದಲ್ಲಿ ತೊಡಗಿದವರನ್ನು 'ದಂಗೆಕೋರರು' ಎಂದು ಕರೆದಿದ್ದಾರೆ.

ಎಲ್ಲರನ್ನೂ ಮುಂದೆ ಬನ್ನಿ ಎಂದು ಪ್ರಚೋದಿಸುತ್ತಿರುವ ವಿಡಿಯೋ

ಎಲ್ಲರನ್ನೂ ಮುಂದೆ ಬನ್ನಿ ಎಂದು ಪ್ರಚೋದಿಸುತ್ತಿರುವ ವಿಡಿಯೋ

ಪೊಲೀಸರತ್ತ ಕಲ್ಲು ತೂರುತ್ತಿದ್ದ ಯುವಕರ ಗುಂಪು, ಎಲ್ಲರನ್ನೂ ಮುಂದೆ ಬನ್ನಿ ಎಂದು ಪ್ರಚೋದಿಸುತ್ತಿರುವ ವಿಡಿಯೋ ಕೂಡಾ ಬಹಿರಂಗಗೊಂಡಿದೆ. ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು, ಟೈರ್ ಸುಡುತ್ತಿದ್ದ ದಂಗೆಕೋರರು, ಅಲ್ಲೇ ನಿಂತಿದ್ದ ಪೊಲೀಸರ ಮೇಲೆ ಅವ್ಯಾಹತವಾಗಿ ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋ ಕೂಡಾ ಇದೆ.

ಮಂಗಳೂರು ಗಲಭೆ; ಪೊಲೀಸರಿಂದ ಫೋಟೋ ಬಿಡುಗಡೆಮಂಗಳೂರು ಗಲಭೆ; ಪೊಲೀಸರಿಂದ ಫೋಟೋ ಬಿಡುಗಡೆ

ಎರಡು ದೊಡ್ಡ ಮರದ ಕೋಲನ್ನು ರಸ್ತೆಗೆ ಅಡ್ಡ

ಎರಡು ದೊಡ್ಡ ಮರದ ಕೋಲನ್ನು ರಸ್ತೆಗೆ ಅಡ್ಡ

ಪೊಲೀಸ್ ವ್ಯಾನ್ ಬರುವುದನ್ನು ಅರಿಯುವ ದಂಗೆಕೋರರು, ಎರಡು ದೊಡ್ಡ ಮರದ ಕಂಬವನ್ನು ರಸ್ತೆಗೆ ಅಡ್ಡಹಾಕಿ, ಪರಾರಿಯಾಗುತ್ತಿರುವ ವಿಡಿಯೋ ಬಿಡುಗಡೆಯಾಗಿದೆ. ವ್ಯಾನ್ ವಾಪಸ್ ತೆರಳುತ್ತಿದ್ದಂತೇ, ಮತ್ತೆ ವಾಪಸ್ ಬಂದು, ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತದೆ.

ಹಿಂಸಾಚಾರ 'ಕಾಂಗ್ರೆಸ್ ಪ್ರಾಯೋಜಿತ'

ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟಿನಿಂದ ಶೇರ್ ಮಾಡಿಕೊಂಡಿರುವ ಬಿಜೆಪಿ ರಾಜ್ಯ ಘಟಕ, ಹಿಂಸಾಚಾರ 'ಕಾಂಗ್ರೆಸ್ ಪ್ರಾಯೋಜಿತ' ಎಂದು ದೂರಿದೆ. ಇದು ಕಾಂಗ್ರೆಸ್ ಪ್ರಾಯೋಜಿತ ಕೃತ್ಯ ಎನ್ನುವುದಕ್ಕೆ ಸಂಶಯ ಏನಾದರೂ ಉಳಿದಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

ಸರ್ಕಾರ ರಾಜಕೀಯ ಮಾಡಲು ಹೋಗುವುದಿಲ್ಲ

ಸರ್ಕಾರ ರಾಜಕೀಯ ಮಾಡಲು ಹೋಗುವುದಿಲ್ಲ

ಸಿಸಿಟಿವಿ ದೃಶ್ಯಗಳನ್ನು ಅವಲೋಕಿಸುವುದಾದರೆ, ಇದೊಂದು ಪೂರ್ವನಿಯೋಜಿತ ಕೃತ್ಯ ಎನ್ನುವುದು ಸ್ಪಷ್ಟವಾಗುತ್ತದೆ. ಸರಕಾರ ಇದರ ತನಿಖೆಯನ್ನು ಸಿಐಡಿಗೆ ವಹಿಸಿದೆ. ಮಂಗಳೂರು ಹಿಂಸಾಚಾರದ ಸಂಬಂಧ ಮಾಜಿ ಸಚಿವ ಯು.ಟಿ.ಖಾದರ್ ಅವರ ವಿರುದ್ದ ಪ್ರಕರಣ ದಾಖಲಾಗಿರುವ ಬಗ್ಗೆ, ಇದರಲ್ಲಿ ಸರ್ಕಾರ ರಾಜಕೀಯ ಮಾಡಲು ಹೋಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟನೆಯನ್ನು ನೀಡಿದ್ದರು.

English summary
Mangaluru Voilence Over CAB/CAA: City Police Released CCTV Footage, Is It Pre Planned
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X