ಮಂಗಳೂರಿನಲ್ಲಿ ವೃದ್ಧ ವಿಧವೆಯರಿಗೆ ಆಶಾಕಿರಣ
ಮಂಗಳೂರು, ಮಾ.25: ಎಸ್ತಾರ್ ಮಿನಿಸ್ಟ್ರಿ ಎಂದು ಕರೆಯಲ್ಪಡುವ ಇಲ್ಲಿನ ಗ್ರೇಸ್ ಮಿನಿಸ್ಟ್ರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಶಕ್ತ, ಆರ್ಥಿಕವಾಗಿ ದುರ್ಬಲರಾದ ವಯೋವೃದ್ಧ ವಿಧವೆ, ವಿಧುರರ ಶಿಬಿರ ನಡೆಸಲಾಯಿತು.
ಈ ವಯೋವೃದ್ಧ ಶಿಬಿರದಲ್ಲಿ ಸುಮಾರು 120ಕ್ಕೂ ಅಧಿಕ ವೃದ್ಧ ವಿಧವೆ ಹಾಗೂ ವಿಧುರರಿಗೆ ಆರ್ಥಿಕ ನೆರವು, ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಗ್ರೇಸ್ ಮಿನಿಸ್ಟ್ರಿ ಸಂಸ್ಥೆ ವತಿಯಿಂದ ನೀಡುತ್ತಿರುವ ಈ ಕೊಡುಗೆ ಸಣ್ಣ ಪ್ರಮಾಣದಾಗಿದ್ದರೂ ಆರ್ಥಿಕವಾಗಿ ದುರ್ಬಲರಾಗಿರುವ ವಯೋವೃದ್ಧ ವಿಧವೆ, ವಿಧುರರಿಗೆ ಮಾನಸಿಕ ಸ್ಥೈರ್ಯ ನೀಡುವಲ್ಲಿ ಸಫಲವಾಗಿದೆ. ಅಷ್ಟರಮಟ್ಟಿಗೆ ನಮ್ಮ ಶ್ರಮ ಸಾರ್ಥಕವಾಗಿದೆ ಎಂದು ಗ್ರೇಸ್ ಮಿನಿಸ್ಟ್ರಿ ದತ್ತಿ ಸಂಸ್ಥೆಯ ನಿರ್ದೇಶಕರಾದ ಡಾ. ಜಿ ಆಂಡ್ರ್ಯೂ ರಿಚರ್ಡ್ ಹಾಗೂ ಹನ್ನಾ ರಿಚರ್ಡ್ ಅವರು ಒನ್ ಇಂಡಿಯಾ ಪ್ರತಿನಿಧಿಗೆ ಹೇಳಿದ್ದಾರೆ. ವಯೋವೃದ್ಧ ವಿಧವೆ, ವಿಧುರರ ಶಿಬಿರದ ಚಿತ್ರಗಳನ್ನು ಮುಂದೆ ನೋಡಿ.. ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ವಯೋವೃದ್ಧ ವಿಧವೆ, ವಿಧುರರ ಶಿಬಿರ
ವಯೋವೃದ್ಧ ಶಿಬಿರದಲ್ಲಿ ಸುಮಾರು 120ಕ್ಕೂ ಅಧಿಕ ವೃದ್ಧ ವಿಧವೆ ಹಾಗೂ ವಿಧುರರಿಗೆ ಆರ್ಥಿಕ ನೆರವು, ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ವಿಧವೆ, ವಿಧುರರಿಗೆ ಮಾನಸಿಕ ಸ್ಥೈರ್ಯ
ಗ್ರೇಸ್ ಮಿನಿಸ್ಟ್ರಿ ಸಂಸ್ಥೆ ವತಿಯಿಂದ ನೀಡುತ್ತಿರುವ ಈ ಕೊಡುಗೆ ಸಣ್ಣ ಪ್ರಮಾಣದಾಗಿದ್ದರೂ ಆರ್ಥಿಕವಾಗಿ ದುರ್ಬಲರಾಗಿರುವ ವಯೋವೃದ್ಧ ವಿಧವೆ, ವಿಧುರರಿಗೆ ಮಾನಸಿಕ ಸ್ಥೈರ್ಯ ನೀಡುವಲ್ಲಿ ಸಫಲವಾಗಿದೆ.
ವಯೋವೃದ್ಧ ವಿಧವೆ, ವಿಧುರರ ಶಿಬಿರದ ಚಿತ್ರ
ಗ್ರೇಸ್ ಮಿನಿಸ್ಟ್ರಿ ದತ್ತಿ ಸಂಸ್ಥೆಯ ನಿರ್ದೇಶಕರಾದ ಡಾ. ಜಿ ಆಂಡ್ರ್ಯೂ ರಿಚರ್ಡ್ ಹಾಗೂ ಹನ್ನಾ ರಿಚರ್ಡ್
ವೃದ್ಧ ವಿಧವೆಯರಿಗೆ ಆಶಾಕಿರಣ
ವಯೋವೃದ್ಧ ವಿಧವೆ, ವಿಧುರರ ಶಿಬಿರದ ಚಿತ್ರಗಳನ್ನು ಮುಂದೆ ನೋಡಿ.. ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು.