ಮಂಗಳೂರು: 150 ಲಂಗೂರ್ ಗಳನ್ನು ತಿಂದು ತೇಗಿದ ಬೇಟೆಗಾರರು
ಮಂಗಳೂರು, ಅಕ್ಟೋಬರ್ 25: ಲಂಗೂರ್ ಅಥವಾ ಮುಸುವ ಇತ್ತೀಚಿನ ದಿನಗಳಲ್ಲಿ ಅವನತಿಯ ಅಂಚಿಗೆ ಸರಿಯುತ್ತಿದೆ. ಮಾನವನ ಮಾಂಸದ ಲಾಲಸೆಗೆ ಈ ಲಂಗೂರ್ ಗಳು ಬಲಿಯಾಗುತ್ತಿವೆ.
ಕಾಡುಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ನಾಡು ಸೇರುತ್ತಿರುವ ಈ ಲಂಗೂರ್ ಗಳು ಬೇಟೆಗಾರರ ಗುರಿಗೆ ಸಿಕ್ಕಿ ಸಾಯುತ್ತಿವೆ. ಹೀಗೆ ಆಹಾರ ಅರಸಿ ನಾಡಿಗೆ ಬಂದ ಲಂಗೂರ್ ಗಳ ಕುಟುಂಬವನ್ನೇ ಕೊಂದು ತಿಂದು ತೇಗಿದ ಘಟನೆ ಬೆಳ್ತಂಗಡಿಯಲ್ಲಿ ಬೆಳಕಿಗೆ ಬಂದಿದೆ.
ಪಶ್ಚಿಮ ಘಟ್ಟದ ಕೆಲವು ಭಾಗಗಳಲ್ಲಿ ಕಂಡು ಬರುವ ಈ ಲಂಗೂರ್ ಅಥವಾ ಮುಸುವಗಳ ಕುಟುಂಬವೊಂದು ಇತ್ತೀಚೆಗೆ ಬೆಳ್ತಂಗಡಿ ತಾಲ್ಲೂಕಿನ ಪದ್ಮುಂಜ ಎಂಬಲ್ಲಿಗೆ ಕೆಲ ತಿಂಗಳ ಹಿಂದೆ ವಲಸೆ ಬಂದಿದ್ದವು. ಇಲ್ಲಿನ ಮಲೆಂಗಲ್ಲು ಕಾಡಿನಲ್ಲಿ 150 ಕ್ಕೂ ಹೆಚ್ಚು ಮುಸುವಗಳು ಬೀಡು ಬಿಟ್ಟಿದ್ದವು.

ದೇವರಕಾಡಲ್ಲಿ ನೆಲೆನಿಂತಿದ್ದ ಲಂಗೂರ್ ಗಳು
ಪದ್ಮುಂಜ ದಲ್ಲಿ ಉಮಾಮಹೇಶ್ವರ ದೇವಸ್ಥಾನದವಿರುವುದರಿಂದ ಈ ಕಾಡಿಗೆ ದೇವರ ಕಾಡು ಎಂಬ ಹೆಸರೂ ಇದೆ. ಕೃಷಿಕರಿಗೇನು ತೊಂದರೆ ನೀಡದ ಈ ಪ್ರಾಣಿಗಳು ಕಾಡಿನ ಮರದಲ್ಲಿರುವ ಹೂ, ಹಣ್ಣು, ಬಳ್ಳಿಗಳನ್ನಷ್ಟೇ ತಿಂದು ಬದುಕುತ್ತಿದ್ದವು .

ಮುಸುವಗಳ ಮಾರಣಹೋಮ
ಮುಸುವಗಳ ದೊಡ್ಡ ಹಿಂಡು ದೇವರ ಕಾಡಿನಲ್ಲಿರೋದನ್ನು ಅರಿತ ಬೇಟೆಗಾರರು ದೇವರ ಕಾಡಲ್ಲಿ ಮುಸುವ ಗಳ ಮಾರಣಹೋಮ ನಡೆಸಿದ್ದಾರೆ. ಮುಸುವಗಳನ್ನು ಸಿಕ್ಕ ಸಿಕ್ಕಲ್ಲಿ ಗುಂಡು ಹೊಡೆದು ಮಂಸಮಾಡಿ ತಿಂದು ತೇಗಿದ್ದಾರೆ. ಬೇಟೆಗಾರರ ಅಮಾನುಷ ಕೃತ್ಯದ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಅರಣ್ಯ ಇಲಾಖೆ ಮಾತ್ರ ಕಣ್ಣಿದ್ದೂ ಕುರುಡಾಗಿ ಕುಳಿತಿದೆ.

150ರಲ್ಲಿ ಉಳಿದಿದ್ದು ಬೆರಳೆಣಿಕೆ
ಈ ದೇವರ ಕಾಡಿನಲ್ಲಿ 150 ರಷ್ಟಿದ್ದ ಮುಸುವಗಳ ಹಿಂಡಿನಲ್ಲಿ ಈಗ ಉಳಿದುಕೊಂಡಿರೋದು ಕೇವಲ ಬೆರಳೆಣಿಕೆಯ ಲಂಗೂರ್ ಗಳು ಮಾತ್ರ. ಅವುಗಳಿಗೂ ಬೇಟೆಗಾರರು ಈಗ ಸ್ಕೆಚ್ ಹಾಕಿದ್ದಾರೆ. ಹೀಗೆ ದೇವರ ಕಾಡಿಗೆ ನೆಮ್ಮದಿಯನ್ನರಿಸಿ ಬಂದ ಲಂಗೂರ್ ಗಳಿಗೆ ಈಗ ನಿಲ್ಲಲು ನೆಲೆಯಿಲ್ಲದಂತಾಗಿದೆ. ಬೇಟೆಗಾರರ ಬಂದೂಕಿನ ನಳಿಗೆಗೆ ಮುಸುವ ಸಂತತಿಯೇ ನಾಶವಾಗಿದೆ.

ಮಾನವನ ಕ್ರೂರ ಕೃತ್ಯಕ್ಕೆ ಬಲಿ
ಈ ನಡುವೆ ಮುಸುವ ಒಂದು ಗುಂಡೇಟಿನಿಂದ ಗಾಯಗೊಂಡು ಜನವಸತಿ ಪ್ರದೇಶಕ್ಕೆ ಬಂದು ಬಿದ್ದಿದೆ. ಕಾಡಿನಲ್ಲಿ ಮರದಲ್ಲಿ ಅತ್ತಿಂದ ಇತ್ತ ಹಾರುತ್ತಿದ್ದ ಮುಸುವ ಮಾನವನ ಕ್ರೂರ ಕೃತ್ಯಕ್ಕೆ ಬಲಿಯಾಗಿ ಸೊಂಟದ ಭಾಗವನ್ನೇ ಕಳೆದುಕೊಂಡಿದೆ. ಸ್ಥಳಿಯರು ಗಾಯಗೊಂಡಿದ್ದ ಆ ಮುಸುವವನ್ನು ಆರೈಕೆ ಮಾಡಿ ಈಗ ಆಸ್ಪತ್ರೆ ಗೆ ಸಾಗಿಸಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications