ಮಂಗಳೂರು: ಕೆಟಿಎಂ ಏರ್ಪಡಿಸಿದ್ದ ಆರೇಂಜ್ ಡೇ ಸಮಾರಂಭ ಯಶಸ್ವಿ
ಮಂಗಳೂರು, ಸೆಪ್ಟೆಂಬರ್, 28 : ಯುರೋಪಿಯನ್ ರೇಸಿಂಗ್ ನಲ್ಲಿ ಖ್ಯಾತಿ ಪಡೆದ ಕೆಟಿಎಂ (Kraftfahrzeuge Trunkenpolz Mattighofen) ಕಂಪನಿ ಮಂಗಳೂರಿನ ಬೈಕ್ ಪ್ರಿಯರಿಗಾಗಿ ಆರೇಂಜ್ ಡೇ ಕಾರ್ಯಕ್ರಮವನ್ನು ನಗರದ ಹಂಪನಕಟ್ಟೆಯಲ್ಲಿ ಏರ್ಪಡಿಸಿತ್ತು. ಕೆಟಿಎಂ ಮಾಲೀಕರು, ನುರಿತ ತಜ್ಞರು ಬೈಕ್ ಸವಾರಿಗೆ ಆರ್ ಸಿಎಸ್ ನ ಶಕ್ತಿಯುತ ಪ್ರದರ್ಶನ ಮತ್ತು ರೇಸ್ ಪಥದ ಮಹತ್ವವನ್ನು ತಿಳಿಸಲಾಯಿತು.
ನಗರದಲ್ಲಿ ನಡೆದ ಈ ಸಮಾರಂಭದಲ್ಲಿ ಕೋರ್ ರೇಸಿಂಗ್ ಸ್ಪರ್ಧೆಗೆ ತಕ್ಕಂತೆ ವಿನ್ಯಾಸಗೊಳಿದ ದ್ವಿಚಕ್ರವಾಹನ ಹಾಗೂ ಕೆಟಿಎಂ ಪವರ್ ನ ಉಡುಗೆ ತೊಡುಗೆ, ಉಪಹಾರ ಪ್ರದರ್ಶನಕ್ಕಿಡಲಾಗಿತ್ತು. ಇದರಲ್ಲಿ 200ಕ್ಕೂ ಅಧಿಕ ಡ್ಯೂಕ್ ಗ್ರಾಹಕರು, 200 ಆರ್ ಸಿ ಬೈಕ್ ದಾರರು ಇದರಲ್ಲಿ ಪಾಲ್ಗೊಂಡಿದ್ದರು.[ಮಂಗಳೂರು : ಶೀಘ್ರದಲ್ಲೇ ರಸ್ತೆ, ಫುಟ್ಪಾತ್ ಅಭಿವೃದ್ಧಿ]

ಕೆಟಿಎಂ ಭಾರತದ ಮುಖ್ಯಸ್ಥ ಅಮಿತ ನಂದಿ ಮಾತನಾಡಿ, 'ಕೆಟಿಎಂ ಬ್ರ್ಯಾಂಡ್ ಬೈಕ್ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಬೈಕ್ ಸವಾರರ ಮನಗೆದ್ದಿದೆ. ಕೆಟಿಎಂ ಬೈಕ್ ಖರಿದೀಸಿರುವ ಬಹುಮಂದಿ ರೇಸ್ ನಲ್ಲಿ ಪಾಲ್ಗೊಂಡು ಬಹಳಷ್ಟು ರೋಮಾಂಚನ ಅನುಭವಿಸಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ರಾಜ್ಯದ ಪ್ರತಿ ನಗರಗಳಲ್ಲೂ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ' ಎಂದು ಹೇಳಿದರು
ಭಾರತದ ಅಹಮದಾಬಾದ್, ದೆಹಲಿ, ಪುಣೆ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ಮುಂಬೈ, ಕೊಚ್ಚಿ ಇನ್ನು ಕಡೆ ಆರೇಂಜ್ ಡೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಟಿಎಂ ಬ್ರ್ಯಾಂಡ್ ನ ಒಂದು ಅವಿಭಾಜ್ಯ ಅಂಗ ರೇಸಿಂಗ್. ಇದರಿಂದ 14 ಪ್ರತಿಷ್ಠಿತ ಡಾಕರ್ ರ್ಯಾಲಿ ಪ್ರಶಸ್ತಿಗಳು, ವಿವಿಧ ಭಾಗಗಳಲ್ಲಿ 250ಕ್ಕೂ ಹೆಚ್ಚು ವಿಶ್ವಚಾಂಪಿಯನ್ ಶಿಪ್ ಪ್ರಶಸ್ತಿ ಬಂದಿದೆ.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications