ಮಂಗಳೂರಿನಲ್ಲಿ ತಲೆ ಎತ್ತಲಿದೆ 200 ಕೋಟಿ ವೆಚ್ಚದ ಕಾರಾಗೃಹ
ಮಂಗಳೂರಿನ ಮುಡಿಪು ಕುರ್ನಾಡು ಗ್ರಾಮದ 68 ಎಕರೆ ಸ್ಥಳದಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಾರಾಗೃಹ ನಿರ್ಮಾಣಗೊಳ್ಳಲಿದೆ ಎಂದು ಬಂಧೀಖಾನೆ ಡಿಜಿಪಿ ಸತ್ಯನಾರಾಯಣ ರಾವ್ ಹೇಳಿದ್ದಾರೆ.
ಮಂಗಳೂರು, ಮೇ 3: ಮಂಗಳೂರಿನ ಮುಡಿಪು ಕುರ್ನಾಡು ಗ್ರಾಮದ 68 ಎಕರೆ ಸ್ಥಳದಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಾರಾಗೃಹ ನಿರ್ಮಾಣಗೊಳ್ಳಲಿದೆ ಎಂದು ಬಂಧೀಖಾನೆ ಡಿಜಿಪಿ ಸತ್ಯನಾರಾಯಣ ರಾವ್ ಹೇಳಿದ್ದಾರೆ.
ಬೆಂಗಳೂರಿಗೆ ಸಮಾನಾಂತರವಾಗಿ ಮಂಗಳೂರು ಜೈಲನ್ನು ಪರಿಗಣಿಸಲಾಗಿದೆ. ಮಂಗಳೂರು ಕೇಂದ್ರ ಕಾರಾಗೃಹವನ್ನು ಶೀಘ್ರವೇ ಮಂಗಳೂರು ಹೊರವಲಯದ ಕುರ್ನಾಡು ಗ್ರಾಮಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದರು.

ಇದೇ ವೇಳೆ 12.5 ಲಕ್ಷ ರೂ. ವೆಚ್ಚದಲ್ಲಿ ಮಂಗಳೂರು ಜೈಲಿಗೆ ನಿರ್ಮಿಸಲಾಗುವ ನೂತನ ಪ್ರವೇಶದ್ವಾರಕ್ಕೆ ಡಿಜಿಪಿ ಸತ್ಯನಾರಾಯಣ ರಾವ್ ಶಿಲಾನ್ಯಾಸ ನೆರವೇರಿಸಿದರು.

ಕೈದಿಗಳ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ, ಕೈದಿಗಳ ಸಂಬಂಧಿಕರಿಗೆ ಅನುಕೂಲತೆ ಕಲ್ಪಿಸುವುದಕ್ಕಾಗಿ ಮಂಗಳೂರು ಸಬ್ ಜೈಲಿನಲ್ಲಿ ನಿರ್ಮಿಸಲಾಗಿರುವ 17.5 ಲಕ್ಷ ರೂ. ವೆಚ್ಚದ ಸಂದರ್ಶಕರ ಗ್ಯಾಲರಿಯನ್ನು ಅವರು ಇದೇ ವೆಳೆ ಉದ್ಘಾಟಿಸಿದರು.












Click it and Unblock the Notifications