ಸಿಎಂ ಬೊಮ್ಮಾಯಿ ಪರ ನಿಂತು ಕೇರಳಿಗರಿಗೆ ಯು.ಟಿ.ಖಾದರ್ ಫುಲ್ ಕ್ಲಾಸ್
ಮಂಗಳೂರು, ಆಗಸ್ಟ್ 13: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕೇರಳ ಗಡಿ ಭೇಟಿ ರದ್ದಾದ ವಿಚಾರದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಅವರು ಕೇರಳದ ಕೆಲವು ಸಂಘಟನೆಗಳಿಗೆ ಫುಲ್ ಕ್ಲಾಸ್ ನೀಡುವ ಮೂಲಕ, ರಾಜಕೀಯ ಬೇರೆ, ರಾಜ್ಯದ ವಿಚಾರ ಬೇರೆ ಎಂದು ಸಾರಿದ್ದಾರೆ.
ಎರಡು ದಿನಗಳ ಮುಖ್ಯಮಂತ್ರಿಗಳ ಕರಾವಳಿ ಜಿಲ್ಲೆಗಳ ಪ್ರವಾಸದ (ದಕ್ಷಿಣ ಕನ್ನಡ, ಉಡುಪಿ) ಅಂತಿಮ ಚರಣವಾಗಿ, ಸಿಎಂ ಬೊಮ್ಮಾಯಿ, ಕೇರಳ ಜಿಲ್ಲೆಗೆ ಹೊಂದಿಕೊಂಡಿರುವಂತಹ ಗಡಿಗಳಿಗೆ ಭೇಟಿ ನೀಡಬೇಕಿತ್ತು. ಆದರೆ, ಅದು ರದ್ದಾಗಿತ್ತು.
ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಖ್ಯಮಂತ್ರಿಗಳ ಭೇಟಿಗೆ ಸಜ್ಜಾಗಿತ್ತು, ಸೂಕ್ತ ಬಂದೋಬಸ್ತ್ ಮಾಡಿತ್ತು. ಆದರೆ, ಉಡುಪಿ ಜಿಲ್ಲೆಯ ಭೇಟಿಯ ವೇಳೆ, ಗುಪ್ತಚರ ಇಲಾಖೆಯ ಮಾಹಿತಿ ಬಂದ ನಂತರ, ಸಿಎಂ ಈ ಕಾರ್ಯಕ್ರಮವನ್ನು ರದ್ದು ಪಡಿಸಿದ್ದರು.
ಕರ್ನಾಟಕದ ಸಿಎಂ ಹೆದರಿ ಗಡಿ ಭೇಟಿಯನ್ನು ರದ್ದು ಮಾಡಿದ್ದಾರೆ ಎನ್ನುವ ಸಂದೇಶಗಳು ಸಾಮಾಜಿಕ ತಾಣದಲ್ಲಿ ಹರಿದಾಡಲಾರಂಭಿಸಿದ್ದವು. ಇದಕ್ಕೆ, ಖಡಕ್ ತಿರುಗೇಟು ನೀಡಿರುವ ಖಾದರ್, ಅವರು ನಮ್ಮ ಮುಖ್ಯಮಂತ್ರಿಗಳು, ನಮ್ಮ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಗಡಿ ಭೇಟಿ ರದ್ದಾದ ಹಿನ್ನಲೆಯಲ್ಲಿ ಉಡುಪಿಯಲ್ಲೇ ಸಿಎಂ ಉಳಿದಿದ್ದರು
ಎರಡು ದಿನಗಳ ದಕ್ಷಿಣ ಕನ್ನಡ, ಉಡುಪಿ ಪ್ರವಾಸದ ವೇಳೆ, ಮೊದಲ ದಿನ ಮಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ವಾಸ್ತವ್ಯ ಹೂಡಬೇಕಾಗಿತ್ತು. ಆದರೆ, ಗಡಿ ಭೇಟಿ ರದ್ದಾದ ಹಿನ್ನಲೆಯಲ್ಲಿ ಉಡುಪಿಯಲ್ಲೇ ಸಿಎಂ ಉಳಿದಿದ್ದರು. ಕೇರಳದ ಕೆಲವು ಸಂಘಟನೆಗಳು ಗಡಿ ಭೇಟಿಯ ವೇಳೆ (ತಲಪಾಡಿ ಗಡಿ) ಸಿಎಂ ವಿರುದ್ದ ಪ್ರತಿಭಟನೆ ನಡೆಸಲು ಮುಂದಾಗಿದ್ದವು. ಈ ಪ್ರತಿಭಟನೆಯ ಬಗ್ಗೆ ಗುಪ್ತಚರ ಇಲಾಖೆ, ಸಿಎಂ ಕಚೇರಿಗೆ ಮಾಹಿತಿಯನ್ನು ನೀಡಿತ್ತು. (ಗುಪ್ತಚರ ಇಲಾಖೆ ಸಿಎಂ ಸುಪರ್ದಿಯಲ್ಲೇ ಇದೆ)

ಕೇರಳದಿಂದ ಬರುವವರಿಗೆ ನೆಗೆಟೀವ್ ವರದಿ ಕಡ್ಡಾಯ ಎನ್ನುವ ರೂಲ್ಸ್
ಕೇರಳದಿಂದ ಬರುವವರಿಗೆ ನೆಗೆಟೀವ್ ವರದಿ ಕಡ್ಡಾಯ ಎನ್ನುವ ರೂಲ್ಸ್ ಅನ್ನು ಬೊಮ್ಮಾಯಿ ಸರಕಾರ ತಂದಿತ್ತು. ಇದು ಗಡಿ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು, ಆದರೆ ಸಿಎಂ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಹಾಗಾಗಿ, ಬೊಮ್ಮಾಯಿಯವರು ಗಡಿ ಭೇಟಿಗೆ ಬಂದಾಗ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಕೇರಳದ ಕೆಲವು ಸಂಘಟನೆಗಳು ಮುಂದಾಗಿದ್ದವು. ಆದರೆ, ಸಿಎಂ ಭೇಟಿ ರದ್ದಾದ ಹಿನ್ನಲೆಯಲ್ಲಿ, 'ಕರ್ನಾಟಕದ ಸಿಎಂ ನಮಗೆ ಹೆದರಿ ಇಲ್ಲಿಗೆ ಬರಲಿಲ್ಲ' ಎಂದು ಸಾಮಾಜಿಕ ತಾಣದಲ್ಲಿ ಈ ಸಂಘಟನೆಗಳು ವ್ಯಂಗ್ಯವಾಡಿದ್ದವು.

ಬಸವರಾಜ ಬೊಮ್ಮಾಯಿಯವರು ನಮ್ಮ ಮುಖ್ಯಮಂತ್ರಿಗಳು
ಈ ಬಗ್ಗೆ ಪ್ರತಿಕ್ರಿಯಿಸಿರುವ ಯು.ಟಿ.ಖಾದರ್, "ಕೇರಳದಲ್ಲಿ ತೊಂಬತ್ತು ಪರ್ಸೆಂಟ್ ಜನ ಒಳ್ಳೆಯವರು, ಈ ರೀತಿಯ ಐದೋ, ಹತ್ತೋ ಪರ್ಸೆಂಟ್ ಜನಗಳು/ಸಂಘಟನೆಗಳು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿಯವರು ನಮ್ಮ ಮುಖ್ಯಮಂತ್ರಿಗಳು, ನಮ್ಮ ರಾಜ್ಯದ ಜನತೆಯ ಆರೋಗ್ಯದ ದೃಷ್ಟಿಯಿಂದ ಸೂಕ್ತವಾದ ಕ್ರಮಗಳನ್ನು ಅವರು ತೆಗೆದುಕೊಳ್ಳುತ್ತಾರೆ"ಎಂದು ಕೇರಳದ ಸಂಘಟನೆಗಳಿಗೆ ತಿರುಗೇಟು ನೀಡಿದ್ದಾರೆ.

ಅವರು ನಮ್ಮ ಸಿಎಂ, ಅವರಿಗೆ ಅವಮಾನ ಮಾಡಿದರೆ ನಮಗೆ ಸಹಿಸಲು ಸಾಧ್ಯವಿಲ್ಲ
"ಕೇರಳದ ಸಂಘಟನೆಗಳ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ಅವರು ನಮ್ಮ ಸಿಎಂ, ಅವರಿಗೆ ಅವಮಾನ ಮಾಡಿದರೆ ನಮಗೆ ಸಹಿಸಲು ಸಾಧ್ಯವಿಲ್ಲ. ಕರ್ನಾಟಕ ಮತ್ತು ಕೇರಳದವರು ಗಡಿಯಲ್ಲಿ ಸಹೋದರರ ರೀತಿಯಲ್ಲಿ ಬದುಕುತ್ತಿದ್ದೇವೆ. ಈ ಸೌಹಾರ್ದಯುತ ವಾತಾವರಣವನ್ನು ಹಾಳು ಮಾಡುವ ಪ್ರಯತ್ನವನ್ನು ಮಾಡಬೇಡಿ" ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
-
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್











Click it and Unblock the Notifications