Ullal JDS Candidate: ಪಕ್ಷದ ಮುಖಂಡರಿಗೆ ತಿಳಿಸದೆ ನಾಮಪತ್ರ ಹಿಂಪಡೆದ ಉಳ್ಳಾಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ
ಮಂಗಳೂರು, ಎಪ್ರಿಲ್, 24: ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ಗಾಗಿ ನಾಮಪತ್ರ ಸಲ್ಲಿಸಿದ್ದ ಎಸ್ಎಸ್ಎಫ್ ಮುಖಂಡ ಅಲ್ತಾಫ್ ಕುಂಪಲ ಅವರು ಪಕ್ಷದ ಮುಖಂಡರಿಗೆ ಮಾಹಿತಿ ನೀಡದೆ ಏಪ್ರಿಲ್ 21ರಂದು ನಾಮಪತ್ರ ಹಿಂಪಡೆದಿದ್ದಾರೆ.
ಅಲ್ಲದೆ ಜೆಡಿಎಸ್ ಮುಖಂಡರ ಆರೋಪದ ಮೇರೆಗೆ ಕುಂಪಲ ಅವರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ತಾಫ್ ಕುಂಪಲ ಹಲವು ವರ್ಷಗಳಿಂದ ಎಸ್ಎಸ್ಎಫ್ನಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗಷ್ಟೇ ಜೆಡಿಎಸ್ಗೆ ಸೇರ್ಪಡೆಗೊಂಡ ಅವರು ಉಳ್ಳಾಲದಿಂದ ಸ್ಪರ್ಧಿಸಲು ಶಾಸಕ ಬಿ.ಎಂ.ಫಾರೂಕ್ ಅವರನ್ನು ಒಪ್ಪಿಸಿ ಬಿ ಫಾರಂ ಪಡೆದರು.

ಅಲ್ತಾಫ್ ಅವರು ಉಳ್ಳಾಲ ನಗರ ಪಾಲಿಕೆಯ ಜೆಡಿ(ಎಸ್) ಕೌನ್ಸಿಲರ್ ಹಾಗೂ ಪಕ್ಷದ ಇತರ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಪ್ರಚಾರ ಕಾರ್ಯದಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಬಳಿಕ ಪಕ್ಷದ ಮುಖಂಡರಿಗೆ ತಿಳಿಸದೇ ಏಪ್ರಿಲ್ 21ರಂದು ಅಲ್ತಾಫ್ ನಾಮಪತ್ರ ಹಿಂಪಡೆದಿದ್ದಾರೆ.
ಈ ಕುರಿತು ಏಪ್ರಿಲ್ 22ರಂದು ಸೂಚನಾ ಫಲಕದಲ್ಲಿ ಮಾಹಿತಿ ಹಾಕಲಾಗಿದ್ದು, ನೋಟಿಸ್ ಓದಿದ ಸ್ಥಳೀಯರು ಜೆಡಿಎಸ್ ಮುಖಂಡರಿಗೆ ವಿಷಯ ತಿಳಿಸಿದ್ದಾರೆ. ಮುಖಂಡರು ಅಲ್ತಾಫ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರ ಮೊಬೈಲ್ ಫೋನ್ ಅನ್ನು ಎರಡು ದಿನಗಳ ಕಾಲ ಸ್ವಿಚ್ ಆಫ್ ಮೋಡ್ನಲ್ಲಿ ಇರಿಸಲಾಗಿದೆ ಎನ್ನುವ ಸುಳಿವು ಸಿಕ್ಕಿದೆ.












Click it and Unblock the Notifications