ಕೋರ್ಟ್ ಆದೇಶ ಉಲ್ಲಂಘನೆ ದೇಶ ವಿರೋಧಿ ಚಟುವಟಿಕೆ: ಶೋಭಾ

ಮಂಗಳೂರು, ಜೂ. 1: "ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬಳಕೆ ನಿರ್ಬಂಧಿಸಿರುವ ಹೈಕೋರ್ಟ್ ಆದೇಶ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇದು ದೇಶ ವಿರೋಧಿ ಚಟುವಟಿಕೆಗಳಿಗೆ ಕಾರಣವಾಗಬಹುದು" ಎಂದು ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, "ತರಗತಿಯಲ್ಲಿ ಹಿಜಾಬ್‌ಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಈಗಾಗಲೇ ಹೇಳಿದೆ. ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ಈ ದೇಶದ ಕಾನೂನನ್ನು ಗೌರವಿಸಬೇಕು. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಏಕೆಂದರೆ ಅದು ಸಮಾಜ ವಿರೋಧಿ ಮತ್ತು ದೇಶ ವಿರೋಧಿ ಚಟುವಟಿಕೆಗಳಿಗೆ ಕಾರಣವಾಗುತ್ತದೆ" ಎಂದರು.

 ಎಲ್ಲರೂ ಸಮವಸ್ತ್ರವನ್ನು ಪಾಲಿಸಬೇಕು

ಎಲ್ಲರೂ ಸಮವಸ್ತ್ರವನ್ನು ಪಾಲಿಸಬೇಕು

ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನ 12 ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ನಂತರ ಸಚಿವರು ಹೇಳಿಕೆ ನೀಡಿದ್ದಾರೆ. ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಎಲ್ಲರೂ ಸಮವಸ್ತ್ರವನ್ನು ಪಾಲಿಸಬೇಕು ಎಂದು ಮಾರ್ಚ್ 15 ರಂದು ತನ್ನ ಆದೇಶ ನೀಡಿತ್ತು.

 ವಿವಾದ ಸರಿಪಡಿಸಲು ಎಲ್ಲರೂ ನಿರ್ಧರಿಸಲಿ

ವಿವಾದ ಸರಿಪಡಿಸಲು ಎಲ್ಲರೂ ನಿರ್ಧರಿಸಲಿ

ಮಂಗಳೂರು ಮಳಲಿ ಮಸೀದಿ ಪುರಾತನ ಹಿಂದೂ ದೇಗುಲ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ, "ಹಿಂದೂಗಳಿಗೆ ಸೇರಿದ ಸ್ಥಳಗಳನ್ನು ಹಿಂತಿರುಗಿಸಲು ಮತ್ತು ವಿವಾದ ಸರಿಪಡಿಸಲು ಎಲ್ಲರೂ ನಿರ್ಧರಿಸಿದರೆ ಪ್ರತಿಯೊಬ್ಬರೂ ಒಟ್ಟಿಗೆ ವಾಸಿಸಬಹುದು. ಈಗಿನ ತಲೆಮಾರಿಗೆ ಗೊತ್ತಿಲ್ಲದಿದ್ದರೂ ಹಿಂದೆ ಅನೇಕ ದೇವಾಲಯಗಳು ನಾಶವಾಗಿವೆ. ಪುರಾತನ ಶಾಸ್ತ್ರದ ಉತ್ಖನನ ಸತ್ಯವನ್ನು ಹೊರತಂದರೆ ವಿಷಯಗಳನ್ನು ಸರಿಪಡಿಸಲು ಸಾಧ್ಯವಿದೆ. ಎರಡೂ ಸಮುದಾಯಗಳು ಒಟ್ಟಾಗಿ ಪರಿಹಾರವನ್ನು ಕಂಡುಕೊಂಡರೆ ಸಮಸ್ಯೆಗೆ ಪರಿಹಾರವನ್ನು ಸೌಹಾರ್ದಯುತವಾಗಿ ಬಗೆಹರಿಸಬಹುದು" ಎಂದು ಹೇಳಿದರು.

 ಮುಸ್ಲಿಂ ಆಕ್ರಮಣಕಾರರ ದಾಳಿಯ ಕಾರಣಗಳನ್ನು ತಿಳಿಯಿರಿ

ಮುಸ್ಲಿಂ ಆಕ್ರಮಣಕಾರರ ದಾಳಿಯ ಕಾರಣಗಳನ್ನು ತಿಳಿಯಿರಿ

ಪಠ್ಯಪುಸ್ತಕಗಳ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶೋಭಾ ಕರಂದ್ಲಾಜೆ, "ವಿವಾದಾತ್ಮಕವಲ್ಲದ ವ್ಯಕ್ತಿಗಳನ್ನು ಮಾತ್ರ ಪಠ್ಯಪುಸ್ತಕ ಸಮಿತಿಯಲ್ಲಿ ಸೇರಿಸಲು ಮತ್ತು ಪ್ರತಿಯೊಬ್ಬರು ಒಪ್ಪುವಂತಹ ಪಾಠಗಳನ್ನು ಸೇರಿಸಲು ಸರ್ಕಾರ ಯೋಚಿಸಬೇಕು. ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿ ಮತ್ತು ಇತಿಹಾಸ, ಪೂರ್ವಜರ ನೋವುಗಳು ಮತ್ತು ಬ್ರಿಟಿಷ್ ಆಡಳಿತಗಾರರು ಮತ್ತು ಮುಸ್ಲಿಂ ಆಕ್ರಮಣಕಾರರ ದಾಳಿಯ ಕಾರಣಗಳನ್ನು ತಿಳಿಯಬೇಕು. ಮೊಹಮ್ಮದ್ ಘಜ್ನಿ ಭಾರತದ ಮೇಲೆ 17 ಬಾರಿ ಏಕೆ ದಾಳಿ ನಡೆಸಿದ್ದಾನೆ. ಈ ವಿಷಯಗಳನ್ನು ನಮ್ಮ ಮಕ್ಕಳಿಗೆ ಹೇಳಬೇಕು. ಇಂದು ನಮ್ಮ ಮಕ್ಕಳಿಗೆ ನಮ್ಮ ಇತಿಹಾಸದ ಬಗ್ಗೆ ಮಾಹಿತಿ ಕೊರತೆ ಇದೆ. ನಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾಹಿತಿ ಸಂಪೂರ್ಣವಾಗಿ ಇಲ್ಲ" ಎಂದು ಶೋಭಾ ಕರಂದ್ಲಾಜೆ ಹೇಳಿದರು.

 ಕಠಿಣ ಕಾನೂನಿನ ಅಗತ್ಯ; ಶೋಭಾ ಕರಂದ್ಲಾಜೆ

ಕಠಿಣ ಕಾನೂನಿನ ಅಗತ್ಯ; ಶೋಭಾ ಕರಂದ್ಲಾಜೆ

ಕರಾವಳಿ ಕರ್ನಾಟಕದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣ ಹಾಗೂ ಬಜರಂಗದಳದ ಪ್ರತಿಭಟನೆ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ, "ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ತರಬೇಕು. ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನಿನ ಅಗತ್ಯವನ್ನು ನಾನು ಹಿಂದೆಯೇ ಹೇಳಿದ್ದೆ ಮತ್ತು ಇಂದು ಪುನರುಚ್ಚರಿಸುತ್ತಿದ್ದೇನೆ" ಎಂದು ಶೋಭಾ ಕರಂದ್ಲಾಜೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+