ಮೂಡಬಿದಿರೆಯಲ್ಲಿ ಕುಸಿಯುತ್ತಿರುವ ಅಂತರ್ಜಲ, ಬೇಸಿಗೆ ಭೀಕರ
ಮಂಗಳೂರು, ಮಾರ್ಚ್ 04 : ಮೂಡಬಿದಿರೆಯಲ್ಲಿ ಈ ಬಾರಿಯ ಬೇಸಿಗೆಯಲ್ಲಿ ತ್ವರಿತ ಗತಿಯಲ್ಲಿ ಅಂತರ್ಜಲ ಕುಸಿಯುತ್ತಿದ್ದು, ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆ ಕಂಡುಬಂದಿದೆ.
ಇಲ್ಲಿ ಗುರುತಿಸಲಾದ 18 ನೀರಿನಾಶ್ರಯ ನವೀಕರಿಸಿದಲ್ಲಿ ಈ ವರ್ಷ ನೀರಿನ ಸಮಸ್ಯೆ ಅಸಂಭವ ಎಂದು ಸ್ಥಳೀಯ ತಜ್ಞರ ಸಮಿತಿಯೊಂದು ಹೇಳಿದೆ.
ಇದಕ್ಕೆ ಪೂರಕವಾಗಿ ಮುರಳಿಕೃಷ್ಣ, ಪಿ.ಕೆ. ಥಾಮಸ್ ಮತ್ತು ಮಕ್ಬಲ್ ಹುಸೇನರಂತಹ ಯುವ ನಾಯಕರು ಮುಂದಾಳತ್ವ ವಹಿಸಿರುವ ಈ ಸಮಿತಿಯು ಪಟ್ಟಣದಲ್ಲಿ ಸುತ್ತಲ ಪ್ರದೇಶದಲ್ಲಿ ಪಾಳು ಬಿದ್ದಿರುವ 18 ನೀರಿನಾಶ್ರಯ ಗುರುತಿಸಿದೆ.

ಈ ಬಗ್ಗೆ ಒನ್ಇಂಡಿಯಾ ಕನ್ನಡಕ್ಕೆ ಮಾಹಿತಿ ನೀಡಿದ ಮುರಳಿಕೃಷ್ಣ, ಸುಮಾರು 600 ವರ್ಷ ಇತಿಹಾಸ ಹೊಂದಿರುವ 'ಮೊಹಲ್ಲ ಕೆರೆ'ಯನ್ನು ಪುನರುಜ್ಜೀವನಗೊಳಿಸಿದ್ದಲ್ಲಿ ಸುತ್ತಲ ಪ್ರದೇಶಕ್ಕೆ ಸಾಕಷ್ಟು ನೀರು ದೊರಕಲಿದೆ. ಮೂಡಬಿದಿರೆ ಪಟ್ಟಣ ಪಂಚಾಯತ್ ಮನಸ್ಸು ಮಾಡಿದರೆ ಕೆರೆ ಅಭಿವೃದ್ದಿ ಖಂಡಿತವಾಗಿಯೂ ಸಾಧ್ಯವಿದೆ ಎಂದರು.
ಮೊಹಲ್ಲ ವಾರ್ಡಿನಲ್ಲಿ ಕೆರೆ, ಬಸದಿ, ಅಂಕಸಾಲೆ ಮತ್ತು ಮೊಹಲ್ಲ ಕೆರೆ ಇದೆ. ಇವು ಉತ್ತಮ ನೀರಿನ ತಾಣಗಳಾಗಿದ್ದು, ಪುನರುಜ್ಜೀವನಗೊಳಬೇಕಿದೆ ಎಂದು ಕಡಲ ಕೆರೆಯಲ್ಲಿ ಜಲಾಶಯ ನವೀಕರಣ ಯೋಜನೆಯ ರೂವಾರಿ ಡಾ. ಸೋನ್ಸ್ ಹೇಳಿದರು.
''ರೋಟರಿ ಕ್ಲಬ್ ಆಫ್ ಮೂಡಬಿದಿರೆ ರೋಟರಿ ಪ್ರದೇಶಾಭಿವೃದ್ದಿಗೆ 7000 ಡಾಲರ್ ದೇಣಿಗೆ ನೀಡಿದೆ. ಈ ಹಣವನ್ನು ಪಟ್ಟಣದ ಕೆರೆ ಕಟ್ಟೆಗಳ ನವೀಕರಣಕ್ಕೆ ಬಳಕೆಯಾಗಬಹುದು ಎಂದು ರೋಟರಿ ಕ್ಲಬ್ನ ಪದಾಧಿಕಾರಿ ಮೊಹಮ್ಮದ್ ಶೆರೀಫ್ ವಿಶ್ವಾಸ ವ್ಯಕ್ತಪಡಿಸಿದರು.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications