ಕೊಂಡೆವೂರಿನಲ್ಲಿ ಲೋಕ ಕಲ್ಯಾಣಕ್ಕಾಗಿ ವಿಶ್ವಜಿತ್ ಅತಿರಾತ್ರ ಸೋಮಯಾಗ
ಮಂಗಳೂರು, ಫೆಬ್ರವರಿ 22: ದಟ್ಟ ಕಾನನದ ನಡುವೆ ಅಲ್ಲೊಂದು ಋಷಿ ಮುನಿಗಳ ಕುಟೀರ. ಅಲ್ಲಿ ಕೇಳಿ ಬರುತ್ತಿರುವ ಮಂತ್ರ ಘೋಷಗಳ ಸದ್ದು. ಪೂರ್ಣಾಹುತಿ ಸಂಧರ್ಭ ಮುಗಿಲು ಮುಟ್ಟಿದ ಅಗ್ನಿ ಜ್ವಾಲೆ. ಇಂತಹದೊಂದು ಕಾಲ್ಪನಿಕ ದೃಶ್ಯಗಳು ನಾವು ಪುರಾಣಗಳನ್ನು ಓದುವಾಗ ಕಣ್ಣ ಮುಂದೆ ಬರುತ್ತವೆ. ಆದರೆ ಇದು ಈ ಆಧುನಿಕ ಯುಗದಲ್ಲಿ ಕಂಡುಬಂದ ದೃಶ್ಯ ಎಂದರೆ ನಂಬಲು ಕಷ್ಟ ಅಲ್ಲವೇ?.
ಆದರೆ ಇಂತಹ ದೃಶ್ಯ ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿರುವ ಕಾಸರಗೋಡುವಿನ ಕೊಂಡೆವೂರಿನಲ್ಲಿ ಕಂಡುಬಂದಿದೆ. ಉಪ್ಪಳ ಸಮೀಪದ ಕೊಂಡವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ವಿಶ್ವಜಿತ್ ಅತಿರಾತ್ರ ಸೋಮಯಾಗ ನಡೆದಿದೆ.
ಸೋಮಯಾಗ ಅನ್ನುವಂತಹದು ಸರ್ವ ಶ್ರೇಷ್ಠವಾಗಿದ್ದು. ಯಜ್ಞ ಪರಂಪರೆಯಲ್ಲೇ ಅತ್ಯುನ್ನತ ಸ್ಥಾನ ಈ ಸೋಮಯಾಗಕ್ಕೆ ನೀಡಲಾಗಿದೆ.

ಫೆಬ್ರವರಿ18 ರಿಂದ ಆರಂಭವಾದ ಯಾಗ 24ನೇ ತಾರೀಖಿನವರೆಗೆ ನಡೆಯುತ್ತದೆ. ಕೊಂಡೆವೂರು ಮಠದ ಸ್ವಾಮಿಗಳಾದ ಶ್ರೀ ಯೋಗಾನಂದ ಸ್ವರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಯಾಗ ನಡೆಯುತ್ತಿದೆ. ವಿಶೇಷವೇನೆಂದರೆ ಯಾಗದಲ್ಲಿ ಕುದುರೆ,ಕಪ್ಪೆ,ಆಮೆ,ಆಡು,11 ತಿಂಗಳ ಸ್ವದೇಶಿ ತಳಿಯ ಹಸುವಿನ ಹೆಣ್ಣು ಕರು ಕೂಡ ಪಾಲ್ಗೊಳ್ಳುತ್ತವೆ.
ಕೇವಲ ಸೋಮರಸ ಮಾತ್ರವಲ್ಲದೆ, ಮಳೆ ಮತ್ತು ಬಿಸಿಲು ಒಟ್ಟಿಗೆ ಬಂದಾಗ ಸಂಗ್ರಹಿಸಿದ ನೀರು, ಇಬ್ಬನಿಯ ನೀರು, ಕೆರೆಯ ಪಾಚಿ, ಎಲ್ಲಾ ಪುಣ್ಯ ನದಿಗಳ ನೀರನ್ನು ಈ ಯಾಗದಲ್ಲಿ ಉಪಯೋಗಿಸಲಾಗುತ್ತದೆ.

ಅತಿ ವಿರಳವಾಗಿ ನಡೆಯುವ ಸೋಮಯಾಗದಲ್ಲಿ ಪ್ರತಿದಿನ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಋಷಿ ಮುನಿಗಳ ಕಾಲದಲ್ಲಿ ನಡೆಯುವ ಯಾಗಗಳಂತೆಯೇ , ಆಧುನಿಕ ಕಾಲದಲ್ಲೂ ಯಾಗ ನಡೆಯುತ್ತಿದ್ದು, ಯಾಗದಲ್ಲಿ ಪಾಲ್ಗೊಂಡು ಜನ ಕೃತಾರ್ಥರಾಗುತ್ತಿದ್ದಾರೆ. ಒಟ್ಟಿನಲ್ಲಿ ಕೇರಳದ ದೇವರ ನಾಡಿನಲ್ಲಿ ಲೋಕಕಲ್ಯಾಣಕ್ಕಾಗಿ ನಾ ಭೂತೂ ನಾ ಭವಿಷ್ಯತಿ ಎಂಬಂತೆ ಮಹಾ ಯಾಗ ನಡೆದಿದ್ದು, ಹಲವು ಅಪರೂಪ ವಿಶೇಷತೆಗಳಿಗೆ ಜನ ಸಾಕ್ಷಿಯಾಗಿದ್ದಾರೆ.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications