ಧರ್ಮಸ್ಥಳದಲ್ಲಿ ಎಂದಿರನ್ ಭವಿಷ್ಯ
ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ 'ಎಂದಿರನ್' ನನ್ನು ಕಂಡು ಜನ ಮಾರುಹೋಗುತ್ತಿದ್ದಾರೆ. ಈ ಎಂದಿರನ್ ಓಡಾಡೋದಿಲ್ಲ. ನಿಂತಲ್ಲೇ ನೀವೇನು, ನೀವು ಹೇಗೆ, ನಿಮ್ಮ ಕನಸುಗಳೇನು, ನೀವು ಭವಿಷ್ಯದಲ್ಲಿ ಏನಾಗುತ್ತೀರಾ ಅನ್ನೋದನ್ನ ಸ್ಪಷ್ಟವಾಗಿ ಹೇಳುತ್ತಾನೆ.
ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ
ರೋಬೋಟ್ ರೂಪದಲ್ಲಿ ಮುಂದೇನಾಗಬಹುದು ಎಂಬ ವಿವರಗಳನ್ನು ನೀಡುತ್ತಾನೆ. ತಮಿಳಿನ "ಎಂದಿರನ್" ಸಿನಿಮಾದಲ್ಲಿ ರಜನೀಕಾಂತ್ ಅವರ ರೋಬೋಟ್ ರೂಪವನ್ನು ನೆನಪಿಸುವಂತಿರುವ ಈತ ಯಾಂತ್ರಿಕ ಭಾಷೆಯಲ್ಲಿ ಗಮನ ಸೆಳೆಯುತ್ತಿದ್ದಾನೆ.

ಜನರು ಅರೇ! ಹೌದಲ್ಲ ನನ್ನ ಬಗ್ಗೆ ಸರಿಯಾಗಿ ಹೇಳುತ್ತಿದ್ದಾನೆ ಎನ್ನತ್ತಾ ಇವನ ಪ್ರತಿಭೆ ಕಂಡು ಮೂಗ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ. ತಮ್ಮ ಜೊತೆ ಇರುವವರಿಗೂ ನೀವು ಒಂದು ಬಾರಿ ಕೇಳಿ ನೋಡಿ ಅಂತ ಸಲಹೆ ನೀಡುತ್ತಿದ್ದಾರೆ.
ವ್ಯಾಪಾರಿ ಮಳಿಗೆಗಳು, ಅಂಗಡಿ ಮುಂಗಟ್ಟುಗಳಿಂದ ರಂಗೇರಿರುವ ಧರ್ಮಸ್ಥಳದಲ್ಲಿ ಈ ಒಂಟಿ ರೋಬೋಟ್ ಭವಿಷ್ಯ ಧ್ವನಿ ಆಕರ್ಷಿಸುತ್ತಿದೆ. ಚಿಕ್ಕಮಕ್ಕಳೂ ಕೂಡ ರೋಬೋಟ್ ಭವಿಷ್ಯ ಕೇಳಲು ಕಾತುರರಾಗಿರುವುದು ಕಂಡುಬಂತು. ಬಣ್ಣಬಣ್ಣದ ಲೈಟಿಂಗ್ ಜೊತೆಗೆ ಎಂದಿರನ್ ಹೆಚ್ಚು ಕಂಗೊಳಿಸುತ್ತಿತ್ತು.

ಈ ಕಂಪ್ಯೂಟರ್ ಮಾನವ ಬೆಂಗಳೂರಿನವನು. ಜನಾರ್ಧನನ್ ಮತ್ತು ಮಂಜುಳಾ ದಂಪತಿಗಳ ಬದುಕಿನ ಆಧಾರ ಸ್ತಂಭ. ಸುಮಾರು ೨೦ ವರ್ಷಗಳಿಂದ ಈ ದಂಪತಿ ಈ ರೋಬೋಟ್ ಜೊತೆಗೆ ಲಕ್ಷದೀಪೋತ್ಸವಕ್ಕೆ ಬರುತ್ತಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ಹಲವು ಕಡೆಗೆ ಜಾತ್ರೆ, ಉತ್ಸವಗಳಲ್ಲಿ ರೋಬೋಟ್ ಜೊತೆ ಸುತ್ತಿ ಬದುಕು ಕಟ್ಟಿಕೊಂಡಿದ್ದಾರೆ.
ರೋಬೋಟ್ ಭವಿಷ್ಯ ಪೀಳಿಗೆಯಿಂದ ಪೀಳಿಗೆಗೆ ಬಂದ ಕುಲಕಸುಬು. ತಾತ ಮುತ್ತಾತರ ಕಾಲದಿಂದಲೂ ಇದೇ ವೃತ್ತಿ ಮಾಡುತ್ತಾ ಬಂದಿದ್ದಾರೆ. ನಾನು, ನನ್ನ ಪತ್ನಿ ಕೂಡ ಇದೇ ವೃತ್ತಿಯಲ್ಲಿ ಮುಂದುವರಿದೆವು. ಇದು ಬಿಟ್ಟು ಬೇರೆ ಕೆಲಸ ನಮಗೆ ಗೊತ್ತಿಲ್ಲ. ದಿನಕ್ಕೆ ಐನೂರರಿಂದ ಎಂಟುನೂರು ರೂಪಾಯಿಗಳವರೆಗೂ ಆದಾಯವಾಗುತ್ತದೆ. ನಮಗೆ ಅನ್ನ ಕೊಟ್ಟ ಸಾಹುಕಾರ ಇವನು ಎಂದು ರೋಬೋಟ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ ಜನಾರ್ಧನನ್.
೨೦ ರೂಪಾಯಿ ಕೊಟ್ಟರೆ ರೋಬೋಟ್ ಮೂಲಕ ಭವಿಷ್ಯದ ವಿವರಗಳು ಹೊರಹೊಮ್ಮುತ್ತವೆ. ಹೆಡ್ಫೋನನ್ನು ಹಾಕಿಕೊಂಡಾಗ ನಮ್ಮ ಮೈಂಡ್, ಬಾಡಿ ಟೆಂಪ್ರೇಚರ್ ಸ್ಕ್ಯಾನ್ ಆಗಿ, ಅದು ಕಂಪ್ಯೂಟರ್ಗೆ ಈಗಾಗಲೇ ಫೀಡ್ ಮಾಡಿರೋ ವಿವರಗಳ ಜೊತೆ ಹೋಲಿಕೆ ಮಾಡುತ್ತದೆ. ಆ ಮೂಲಕ ರೋಬೋಟ್ ಭವಿಷ್ಯ ನುಡಿಯುತ್ತದೆ.
ಲಕ್ಷದೀಪೋತ್ಸವದಲ್ಲಿ ಜನರನ್ನು ತನ್ನತ್ತ ಸೆಳೆಯುತ್ತಿರುವ ಈ ಮಾಡರ್ನ್ ಜ್ಯೋತಿಷಿಗೆ ಈಗ ೨೫ ವರ್ಷದ ಸಂಭ್ರಮ. ೧೯೯೨ರಲ್ಲಿ ಜನಾರ್ಧನನ್ ಈ ಕಂಪ್ಯೂಟರ್ ಮಾನವನನ್ನು ಚೆನ್ನೈನಿಂದ ೧ ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದರು. ಅಲ್ಲಿಂದ ಜೀವನದ ಸಂಗಾತಿಯಾಗಿ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದಾನೆ. ಅವನಿಗೆ ಹುಷಾರು ತಪ್ಪಿದಾಗಲೆಲ್ಲಾ ಹತ್ತು ಸಾವಿರದವರೆಗೂ ಖರ್ಚಾಗುತ್ತದೆ. ಕಂಪ್ಯೂಟರ್ ಸಿಸ್ಟಮ್ಗೆ ವೈರಸ್ ದಾಳಿಯಾದಾಗ, ವಯರ್ಗಳು ತುಂಡಾದಾಗಲೆಲ್ಲಾ ರಿಪೇರಿ ಮಾಡಲು ಅವನ ತವರೂರು ಚೆನ್ನೈಗೆ ಹೋಗಬೇಕು ಎನ್ನುತ್ತಾರೆ ಮಂಜುಳಾ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications