ಡಿ.ವಿ.ಸದಾನಂದ ಗೌಡ ಸಹೋದರಿ ಸಾವಿತ್ರಿ ನಿಧನ
ಮಂಗಳೂರು, ಅ.8 : ಕೇಂದ್ರ ರೈಲ್ವೇ ಸಚಿವ ಡಿ.ವಿ. ಸದಾನಂದ ಗೌಡ ಅವರ ಸಹೋದರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯೆ ಸಾವಿತ್ರಿ ಶಿವರಾಮ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಬುಧವಾರ ಬೆಳಗ್ಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
ಕ್ಯಾನ್ಸರ್ನಿಂದ
ಬಳಲುತ್ತಿದ್ದ
ಸಾವಿತ್ರಿ
ಶಿವರಾಮ್
(53)
ಅವರನ್ನು
ಮಂಗಳೂರಿನ
ಕೆಎಂಸಿ
ಆಸ್ಪತ್ರೆಗೆ
ದಾಖಲು
ಮಾಡಲಾಗಿತ್ತು.
ಆದರೆ,
ಚಿಕಿತ್ಸೆ
ಫಲಕಾರಿಯಾಗದೆ
ಮಂಗಳವಾರ
ಸಂಜೆ
ಮೃತಪಟ್ಟಿದ್ದಾರೆ.
ಅವರ
ಪಾರ್ಥೀವ
ಶರೀರವನ್ನು
ಪುತ್ತೂರು
ಗೌಡ
ಸಮುದಾಯ
ಭವನದಲ್ಲಿ
ಕೆಲ
ಕಾಲ
ಸಾರ್ವಜನಿಕ
ದರ್ಶನಕ್ಕೆ
ಇಡಲಾಗಿತ್ತು.
ಬಳಿಕ
ಈಶ್ವರಮಂಗಲದ
ಅವರ
ಮನೆಗೆ
ತೆಗೆದುಕೊಂಡು
ಹೋಗಲಾಗಿದ್ದು,
ಇಂದು
ಅಂತ್ಯಕ್ರಿಯೆ
ನಡೆಯಲಿದೆ.
ಸಾವಿತ್ರಿ ಶಿವರಾಮ್ ಪತಿ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿದ್ದಾರೆ. ಪುತ್ರಿಯರಾದ ಸ್ನೇಹ ಮತ್ತು ಸುಶ್ಮಾ , ತಾಯಿ, ಸದಾನಂದ ಗೌಡ ಸಹಿತ 4 ಸಹೋದರರು, ಓರ್ವ ಸಹೋದರಿ ಮತ್ತು ಅಪಾರ ಬಂಧುಮಿತ್ರರನ್ನು ಸಾವಿತ್ರಿ ಶಿವರಾಮ್ ಅಗಲಿದ್ದಾರೆ. ಸಾವಿತ್ರಿ ಶಿವರಾಂ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕ್ಯಾ ಗಣೇಶ್ ಕಾರ್ಣಿಕ್, ಮಾಜಿ ಶಾಸಕ ಕೆ.ಮೋನಪ್ಪ ಭಂಡಾರಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯರು : ಸಾವಿತ್ರಿ ಶಿವರಾಮ್ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ 2009 ರಿಂದ 2011ರ ವರೆಗೆ ಕಾರ್ಯನಿರ್ವಹಿಸಿದ್ದರು. ಬೆಳೆಂದೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಸದಸ್ಯರಾಗಿದ್ದರು. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]