ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ‘ಸೆಲ್ಫಿ ಸ್ಟಿಕ್’ ದರ್ಬಾರ್
ಜನರಿಗೆ ಇಂದು ಸೆಲ್ಫಿ ಹುಚ್ಚು ಹೆಚ್ಚಾಗಿರುವುದರಿಂದ ಈ ಸ್ಟಿಕ್ ಗಳಿಗೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಈ ಬಾರಿ ಅತಿಹೆಚ್ಚು ಪ್ರಮಾಣದಲ್ಲಿ ಸೆಲ್ಫೀ ಸ್ಟಿಕ್ ಗಳನ್ನು ಖರೀದಿಸುತ್ತಿರುವುದರಿಂದ ಉತ್ತಮ ವ್ಯಾಪಾರವಾಗುತ್ತಿದೆ,
ಈ ಬಾರಿಯ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಸೆಲ್ಫಿ ಸ್ಟಿಕ್ ಗಳದ್ದೇ ಪ್ರಭಾವಳಿ. ಮಳಿಗೆಗಳಲ್ಲಿ ಲಭ್ಯವಾಗುತ್ತಿರುವ ಅವುಗಳನ್ನು ಖರೀದಿಸಿ ತಮ್ಮ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ. ಮಕ್ಕಳು, ಮಹಿಳೆಯರು ಎನ್ನದೆ ಎಲ್ಲರೂ ಮೊಬೈಲ್ ಜೊತೆ ಒಂದು ಸೆಲ್ಫಿ ಸ್ಟಿಕ್ ಹಿಡಿದು ತಿರುಗಾಡುತ್ತಿದ್ದಾರೆ.
ವ್ಯಾಪಾರಿಗಳು ಸೆಲ್ಫೀ ಸ್ಟಿಕ್ ಗಳನ್ನು ಮಾರುತ್ತಿದ್ದಾರೆ. ಕಳೆದ ಹತ್ತುವರ್ಷಗಳಿಂದ ಲಕ್ಷದೀಪೋತ್ಸವಕ್ಕೆ ಬರುತ್ತಿರುವ ಈ ವ್ಯಾಪಾರಿಗಳು ಪ್ರತೀ ಬಾರಿಯೂ ಹೊಸ ಜಮಾನಕ್ಕೆ ಸರಿಹೊಂದುವ ವಸ್ತುಗಳನ್ನು ಹೊತ್ತು ಬರುತ್ತಾರೆ. ವ್ಯಾಪಾರಕ್ಕಾಗಿ ಮೈಸೂರಿನಿಂದ ಧರ್ಮಸ್ಥಳದತ್ತ ಮುಖ ಮಾಡುವ ಇವರು ಈ ವರ್ಷ ಯುವಜನತೆಯನ್ನು ಕೇಂದ್ರೀಕರಿಸಿಕೊಂಡು ಸೆಲ್ಫಿಸ್ಟಿಕ್ ಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. [ಗ್ಯಾಲರಿ: ಧರ್ಮಸ್ಥಳ ಲಕ್ಷದೀಪೋತ್ಸವ ವೈಭವ]

ಜನರಿಗೆ ಇಂದು ಸೆಲ್ಫಿ ಹುಚ್ಚು ಹೆಚ್ಚಾಗಿರುವುದರಿಂದ ಈ ಸ್ಟಿಕ್ ಗಳಿಗೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಈ ಬಾರಿ ಅತಿಹೆಚ್ಚು ಪ್ರಮಾಣದಲ್ಲಿ ಸೆಲ್ಫೀ ಸ್ಟಿಕ್ ಗಳನ್ನು ಖರೀದಿಸುತ್ತಿರುವುದರಿಂದ ಉತ್ತಮ ವ್ಯಾಪಾರವಾಗುತ್ತಿದೆ, ಹಾಗಾಗಿ ಜನರ ಬೇಡಿಕೆಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಸೆಲ್ಫಿ ಸ್ಟಿಕ್ ಮಳಿಗೆಗಳನ್ನು ತೆರೆಯುತ್ತೇವೆ ಎನ್ನುತ್ತಾರೆ ತಂಡದ ಸದಸ್ಯರು.[ಧರ್ಮಸ್ಥಳದಲ್ಲಿ ಗಮನ ಸೆಳೆದ ದುರ್ಗದ ವೇಷಧಾರಿ]
ಧರ್ಮಸ್ಥಳದ ಮುಖ್ಯ ದ್ವಾರದಿಂದ ಹೀಗೊಮ್ಮೆ ಕಣ್ಣು ಹಾಯಿಸಿದರೆ ಅಲ್ಲಿ ನಮ್ಮನ್ನು ಕೈಬೀಸಿ ಕರೆಯುವ ಬಟ್ಟೆ ಅಂಗಡಿಗಳು, ಫ್ಯಾನ್ಸಿ ವಸ್ತುಗಳು, ವಿವಿಧ ಬಗೆಯ ತಿನಿಸು ಅಂಗಳಗಳು, ವಸ್ತು ಪ್ರದರ್ಶನ ಹೀಗೆ ಎಲ್ಲಿ ನೋಡಿದರೂ ಕೂಡ ಮಳಿಗೆಗಳು ಕಾಣುತ್ತವೆ. ಇಂತಹ ಮಳಿಗೆಗಳಿಗಿಂತಲೂ ಹೆಚ್ಚು ಕಣ್ಣಿಗೆ ಬೀಳುವುದು ಜನರು ಸೆಲ್ಫೀ ಕ್ಲಿಕ್ಕಿಸುವ ದೃಶ್ಯಗಳು. [ಲಕ್ಷದೀಪೋತ್ಸವದಲ್ಲಿ ಕನ್ನಡ ಡಿಂಡಿಮ]

ಮಾರುಕಟ್ಟೆಯಲ್ಲಿ 200 ರಿಂದ 300ರೂ ಕೊಟ್ಟು ಖರೀದಿ ಮಾಡುವ ಬದಲು ಇಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು ಎಂದು ಜನರು ಹರ್ಷವ್ಯಕ್ತಪಡಿಸುತ್ತಿದರು. ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಮಾತ್ರ ಕೇವಲ 100ರೂಗೆ ವಿವಿಧ ವಿನ್ಯಾಸವಿರುವ ಸೆಲ್ಫಿಸ್ಟಿಕ್ ದೊರೆಯುತ್ತಿರುವುದರಿಂದ ಖುಷಿಯಿಂದ ಕೊಂಡುಕೊಳ್ಳುತ್ತಿದ್ದಾರೆ.
50 ಜನರ ತಂಡದೊಂದಿಗೆ ಅಗಮಿಸಿರುವ ಸೆಲ್ಫೀ ಸ್ಟಿಕ್ ವ್ಯಾಪಾರಸ್ಥರು ಹೆಚ್ಚು ಜನತೆ ಹಾಗೂ ಲೈಟಿಂಗ್ ಇದ್ದಲ್ಲಿ ಮಾತ್ರ ಕಾಣಸಿಗುತ್ತಾರೆ. ತಮ್ಮ ಮಾತಿನ ಮೂಲಕವೇ ಜನರನ್ನು ಸೆಳೆಯುತ್ತಾರೆ.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ











Click it and Unblock the Notifications