ಲಕ್ಷದೀಪೋತ್ಸವ ವಿಶೇಷ: ದೇಶಿ ಉಪ್ಪಿನಕಾಯಿಯ ಪರವಾದ ಅಲೆ
ಧರ್ಮಸ್ಥಳದ ಲಕ್ಷ ದೀಪೋತ್ಸವದ ಮಳಿಗೆಗಳ ಸಾಲಿನಲ್ಲಿ ಒಂದು ಮಳಿಗೆಗೆ ಭೇಟಿ ನೀಡಿದವರೆಲ್ಲಾಉಪ್ಪಿನಕಾಯಿಯ ಸ್ಯಾಂಪಲ್ಲನ್ನು ಗಮನಿಸುತ್ತಿದ್ದರು. ಒಂದಷ್ಟು ರುಚಿ ನೋಡಿ ಅದನ್ನು ಖರೀದಿಸುವುದಕ್ಕೆ ಮುಂದಾಗುತ್ತಿದ್ದರು. ರಾಸಾಯನಿಕಗಳ ಬಳಕೆಯಿಲ್ಲದೇ ಸಿದ್ಧಪಡಿಸಿದ ಈ ದೇಶಿ ಉಪ್ಪಿನಕಾಯಿಯ ಕಡೆಗೆ ದೌಡಾಯಿಸುತ್ತಿದ್ದರು.
ದೇಶೀ ಖಾದ್ಯಕ್ಕೆಆದ್ಯತೆ ನೀಡಬೇಕಾದ ಅಗತ್ಯವನ್ನು ಮನಗಾಣಿಸುವ ಈ ದೃಶ್ಯ ಕಂಡು ಬಂದದ್ದು ಲಕ್ಷದೀಪೋತ್ಸವದ ಮಳಿಗೆಯಲ್ಲಿ. ಮಂಗಳೂರಿನ ಕಂಕನಾಡಿಯ ಶ್ಯಾಮಲಾ ಶಣೈ ತಮ್ಮ ವ್ಯಾಪಾರ ವಹಿವಾಟಿನ ಮೂಲಕ ದೇಶೀ ಖಾದ್ಯಗಳ ಪರವಾದ ಅಲೆಯನ್ನು ಮೂಡಿಸಿದ್ದರು.
ಮೂರು ದಶಕಗಳಿಂದ ಉಪ್ಪಿನಕಾಯಿ ವ್ಯಾಪಾರ
ಕಳೆದ 35 ವರ್ಷಗಳಿಂದ ಉಪ್ಪಿನಕಾಯಿ ವ್ಯಾಪಾರವನ್ನುನಡೆಸುತ್ತಿರುವ ಇವರು ಹದಿನಾಲ್ಕು ಬಗೆಯ ರುಚಿ ರುಚಿಯ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ಇವುಗಳನ್ನು ತಯಾರಿಸಲು ಪ್ರಾರಂಭಿಸಿದ ದಿನದಿಂದಲೂ ಒಂದೇ ದರವನ್ನು ನಿಗದಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಉಪ್ಪಿನಕಾಯಿಯನ್ನು ಕೆಜಿಗೆ 200 ರೂ.ಗಳಂತೆ ಮಾರುತ್ತಾರೆ.

ಇವರ ಈ ಜೀವನ ಪ್ರಾರಂಭವಾದದ್ದು ಹಪ್ಪಳ ತಯಾರಿಸುವುದರಿಂದ. ಈಗ ಸಂಡಿಗೆ, ಉಪ್ಪಿನಕಾಯಿ, ಸಾಂಬಾರ್ ಪುಡಿ, ಕಷಾಯದ ಪುಡಿ ಹಾಗೂ ಆರೋಗ್ಯಕರ ಪಾನೀಯಗಳನ್ನು ತಯಾರಿಸುತ್ತಾರೆ. ಈ ಪಾನೀಯಗಳೂ ಸಹ ಯಾವುದೇ ರಾಸಾಯನಿಕ ಮಿಶ್ರಿತವಲ್ಲ. ಜೇನು, ಸಕ್ಕರೆ. ನನ್ನಾರೆ ಬೇರನ್ನು ಸೇರಿಸಿ ಪಾನೀಯಗಳನ್ನು ತಯಾರಿಸುತ್ತಾರೆ.ಇವುಗಳೂ ಇಲ್ಲಿ ಮಾರಾಟಕ್ಕೆ ಲಭ್ಯವಿದ್ದವು.
ಇವರ ಪತಿ ಶ್ರೀನಿವಾಸ ಶಣೈ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬ ಮಗಳ ಇಬ್ಬರು ಗಂಡು ಮಕ್ಕಳನ್ನು ಇವರೇ ಓದಿಸುತ್ತಿದ್ದಾರೆ. ಒಬ್ಬ ಎಂಟನೆಯತರಗತಿ, ಇನ್ನೊಬ್ಬ ಒಂಭತ್ತನೆಯ ತರಗತಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿತಮ್ಮ ಮೊಮ್ಮಕ್ಕಳನ್ನು ಓದಿಸುತ್ತಿದ್ದಾರೆ. ತಮ್ಮ ಸಂಸಾರವೊಂದೇ ಅಲ್ಲದೆ, ತಮ್ಮ ಮಗಳ, ಮೊಮ್ಮಕ್ಕಳ ಜೀವನವನ್ನೂ ನಡೆಸಿಕೊಂಡು ಹೋಗುತ್ತಿದ್ದಾರೆ. ಐದು ಜನರ ಜೀವನ ಉಪ್ಪಿನಕಾಯಿ ವ್ಯಾಪಾರದಿಂದ ಸಾಗುತ್ತಿದೆ.

ಈಗ ಇವರಿಗೆ 60 ವರ್ಷ ವಯಸ್ಸು. ಇಂತಹ ಉತ್ಸವ, ಜಾತ್ರೆಗಳಲ್ಲಿ ಅಂಗಡಿಯನ್ನಿಟ್ಟುಕೊಂಡುರುಚಿರುಚಿಯಾದ ಉಪ್ಪಿನಕಾಯಿಗಳನ್ನು ಮಾರುತ್ತಾರೆ. ಪ್ರಿಯಾ ಹೋಮ್ ಪ್ರೊಡಕ್ಟ್ಎನ್ನುವುದು ಬ್ರಾಂಡ್ ಹೆಸರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications