ಮಂಗಳೂರು: ಇನ್ಶೂರೆನ್ಸ್ ಹಣಕ್ಕಾಗಿ ಬಾರ್ಜ್ ಮುಳುಗಿಸುವ ಸಂಚು?
ಮಂಗಳೂರು, ಜೂನ್ 5: ಮಂಗಳೂರಿನ ಉಳ್ಳಾಲದಲ್ಲಿ ಅಪಘಾತಕ್ಕೀಡಾಗಿ ಬಾರ್ಜ್ ಮುಳುಗಡೆಯಾಗುತ್ತಿದೆ. ಇದೀಗ ಈ ಬಾರ್ಜ್ ಮುಳುಗಡೆ ಹಿಂದೆ ಸಂಚು ನಡೆದಿದೆಯಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಶನಿವಾರ ಉಳ್ಳಾಲ ಸಮುದ್ರದಲ್ಲಿ ಬಾರ್ಜೊಂದು ಅಪಘಾತಕ್ಕೀಡಾಗಿತ್ತು. ಬಾರ್ಜಿನ ಆಂಕರ್ ತುಂಡಾಗಿ ಮುಳುಗಲು ಆರಂಭಿಸಿತ್ತು. ಇದರಿಂದ ಬಾರ್ಜ್ ನಲ್ಲಿದ್ದ 27 ಸಿಬ್ಬಂದಿಗಳ ಜೀವ ಅಪಾಯಕ್ಕೆ ಸಿಲುಕಿತ್ತು. ನಂತರ ಕೋಸ್ಟ್ ಗಾರ್ಡ್ ಪಡೆಯವರು ಸಿಬ್ಬಂದಿಗಳನ್ನು ರಕ್ಷಿಸಿದ್ದರು.[ಉಳ್ಳಾಲದಲ್ಲಿ ಹಡಗು ದುರಂತ; 33 ಜನರು ಅಪಾಯದಲ್ಲಿ]

ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಬಂದರು ಪೊಲೀಸರು ಪ್ರತ್ಯೇಕ ತನಿಖೆ ನಡೆಸಿದ್ದು, ಬಾರ್ಜನ್ನು ನೀರಿನಲ್ಲಿ ಮುಳುಗಿಸುವ ಹುನ್ನಾರ ನಡೆದಿತ್ತು ಎಂದು ಹೇಳಲಾಗಿದೆ. ಬಾರ್ಜ್ 35 ವರ್ಷ ಹಳೆಯದಾಗಿತ್ತು. ಇದನ್ನು ಧರ್ತಿ, ಚೌಹಾಣ್ ಕಂಪೆನಿ ಬಾಡಿಗೆಗೆ ಪಡೆದುಕೊಂಡಿತ್ತು. ಹಡಗು ಮುಳುಗಿದರೆ ಇನ್ಶೂರೆನ್ಸ್ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಹಡಗನ್ನು ಮುಳುಗಿಸಲು ಮುಂದಾಗಿದ್ದರು ಎನ್ನಲಾಗಿದೆ.[27 ಜನರ ಜೀವ ಉಳಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ಖಾದರ್ ಅಭಿನಂದನೆ]
1982ರಲ್ಲಿ ಎನ್.ವಿ ನೆದರ್ ಲ್ಯಾಂಡ್ಸ್ ಎಂಬ ಕಂಪೆನಿ ಈ ಬಾರ್ಜನ್ನು ತಯಾರಿಸಿತ್ತು. ಮೇ 26ರಂದೇ ಕಡಲ್ಕೊರೆತ ತಡೆ ಕಾಮಗಾರಿ ಮುಗಿದ ಬಳಿಕ ಬಾರ್ಜ್ ಮುಂಬೈಗೆ ಪ್ರಯಾಣ ಬೆಳೆಸಬೇಕಿತ್ತು. ಹೀಗಿದ್ದೂ ಬಾರ್ಜ್ ಇಲ್ಲೇ ಇದ್ದಿದ್ದು ಏಕೆ ಎಂಬ ಅನುಮಾನಗಳೂ ಕಾಡುತ್ತಿವೆ.[ದುರಂತಕ್ಕೀಡಾಗಿದ್ದ ಬಾರ್ಜ್ ಮೇಲೆತ್ತಲು ತಜ್ಞರ ತಂಡ ಮಂಗಳೂರಿಗೆ]
ಬಾರ್ಜ್ ಮುಳುಗಿಸುವ ಮೂಲಕ 27 ಜನರ ಜೀವದ ಜತೆಗೇ ಕಂಪೆನಿ ಚೆಲ್ಲಾಟವಾಡಿತಾ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.












Click it and Unblock the Notifications