ಕರ್ನಾಟಕದಲ್ಲಿ 50 ಲಕ್ಷ ಸದಸ್ಯತ್ವ, ಕಾಂಗ್ರೆಸ್ ಗುರಿ
ಮಂಗಳೂರು, ಜ.5 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರವನ್ನು ಸಿದ್ಧಪಡಿಸಿದೆ. ಫೆಬ್ರವರಿ 15ರೊಳಗೆ 50 ಲಕ್ಷ ಸದಸ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ. ಇದು ಅಮಿತ್ ಶಾ ಬೆಂಗಳೂರು ಭೇಟಿಯ ಪರಿಣಾಮ ಎಂದರೂ ಅಚ್ಚರಿಪಡಬೇಕಾಗಿಲ್ಲ.
ಕಾಂಗ್ರೆಸ್
ನಾಯಕ
ಮತ್ತು
ವಿಧಾನಪರಿಷತ್
ಸದಸ್ಯ
ಐವಾನ್
ಡಿಸೋಜಾ
ಅವರು
ಸದಸ್ಯತ್ವ
ಅಭಿಯಾನದ
ಕುರಿತು
ಸೋಮವಾರ
ಮಂಗಳೂರಿನಲ್ಲಿ
ಮಾಹಿತಿ
ನೀಡಿದ್ದು,
ಪಕ್ಷ
ನಡೆಸುತ್ತಿರುವ
ಸದಸ್ಯತ್ವ
ಅಭಿಯಾನ
ಡಿಸೆಂಬರ್ಗೆ
ಅಂತ್ಯಗೊಳ್ಳಬೇಕಿತ್ತು.
ಸದ್ಯ
ಅದನ್ನು
ಫೆಬ್ರವರಿ
15ರವರೆಗೆ
ವಿಸ್ತರಣೆ
ಮಾಡಲಾಗಿದೆ
ಎಂದು
ಹೇಳಿದ್ದಾರೆ.
[ಕಾಂಗ್ರೆಸ್
ಮುಕ್ತ
ಕರ್ನಾಟಕಕ್ಕೆ
ಅಮಿತ್
ಶಾ
ಕರೆ]
ಮೊದಲು ಪಕ್ಷ ಪ್ರತಿ ಬೂತ್ನಲ್ಲಿ 50 ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವ ಗುರಿಯನ್ನು ಹೊಂದಿತ್ತು. ಸದ್ಯ, ಅದನ್ನು 100ಕ್ಕೆ ಹೆಚ್ಚಿಸಲಾಗಿದ್ದು, ಫೆಬ್ರವರಿ 15ರೊಳಗೆ 50 ಲಕ್ಷ ಸದಸ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. [ಕಾಂಗ್ರೆಸ್ ಮುಕ್ತ ಕರ್ನಾಟಕ : ಯಾರು, ಏನು ಹೇಳಿದರು?]
ಬಿಜೆಪಿಯಂತೆ ಮಿಸ್ ಕಾಲ್ ನೀಡಿದವನ್ನು ಪಕ್ಷದ ಸದಸ್ಯರಾಗಿ ಮಾಡಿಕೊಳ್ಳುವುದಿಲ್ಲ ಎಂದು ಲೇವಡಿ ಮಾಡಿದ ಐವಾನ್ ಡಿಸೋಜಾ ಅವರು, ಕಾಂಗ್ರೆಸ್ ಪಕ್ಷ ಪ್ರತಿ ಮನೆಗೆ ಭೇಟಿ ನೀಡಿ ಸದಸ್ಯರನ್ನು ನೇಮಕ ಮಾಡಿಕೊಳ್ಳಲಿದೆ ಎಂದು ಹೇಳಿದರು.
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಗ್ರಾಮೀಣ ಭಾಗದಲ್ಲಿ ಹೆಚ್ಚು ಸದಸ್ಯರನ್ನು ನೇಮಕ ಮಾಡಿಕೊಳ್ಳುವತ್ತ ಗಮನಹರಿಸಿದೆ ಎಂದು ಹೇಳಿದ ಐವಾನ್ ಡಿಸೋಜಾ ಅವರು, ಪಕ್ಷ ಸಂಘಟನೆ ಮಾಡಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಶನಿವಾರ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು ಮತ್ತು ಕರ್ನಾಟಕದಲ್ಲಿ 1 ಕೋಟಿ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಉದ್ದೇಶವಿದೆ ಎಂದು ಹೇಳಿದ್ದರು. ಸದ್ಯ ಕಾಂಗ್ರೆಸ್ ಇದಕ್ಕೆ ಪ್ರತ್ಯುತ್ತರ ನೀಡಲು ಸಜ್ಜಾಗಿದೆ.