ನಾಲ್ಕು ಗೋಡೆಯ ಜಗತ್ತಿನಿಂದ ಹೊರಬಂದ ಹಾಸಿಗೆ ಹಿಡಿದವರು: ಹೊರಪ್ರಪಂಚದ ವಿಹಾರಕ್ಕೆ ಫುಲ್ ಖುಷ್
ಮಂಗಳೂರು, ನವೆಂಬರ್ 07: ಮರದಿಂದ ಬಿದ್ದು, ಬೆನ್ನು ಮೂಳೆ ಮುರಿದುಕೊಂಡು, ಬಾವಿಗೆ ಬಿದ್ದು ಕೈಕಾಲು ಸ್ವಾಧೀನ ಕಳೆದುಕೊಂಡು ಹಲವಾರು ವರ್ಷಗಳಿಂದ ಹಾಸಿಗೆ ಹಿಡಿದವರು ಹಲವು ವರ್ಷಗಳ ನಂತರ ಹೊರ ಜಗತ್ತು ನೋಡಿದ್ದಾರೆ.
ತಮ್ಮ ದೈನಂದಿನ ಕೆಲಸಕ್ಕೂ ಮತ್ತೊಬ್ಬರನ್ನು ಅವಲಂಬಿಸುವ ಇವರು ಹೊರಪ್ರಪಂಚ ನೋಡಿ ವರುಷಗಳು ಹಲವಾರು ಸಂದವು. ಹೀಗೆ ಹಾಸಿಗೆ ಹಿಡಿದವರಿಗೆ ಒಂದು ದಿನದ ಮಟ್ಟಿಗೆ ಹೊರಪ್ರಪಂಚದ ಬೆಳಕು ತೋರಿಸಲು ಮುಂದಾದವರು ಕೋಸ್ಟಲ್ ಫ್ರೆಂಡ್ಸ್ ಎಂಬ ಸಮಾಜ ಸೇವಾ ಸಂಸ್ಥೆ.

ದ.ಕ.ಜಿಲ್ಲೆಯ ಪೆರ್ನೆ, ಕಲ್ಲಾಪು, ಕುತ್ತಾರ್, ತೊಕ್ಕೊಟ್ಟು ಹಾಗೂ ಉಳ್ಳಾಲದ ಹಾಸಿಗೆ ಹಿಡಿದ ಒಟ್ಟು ಆರು ಮಂದಿಗೆ ಕುಟುಂಬ ಸಹಿತ ಒಂದು ದಿನದ ಸಾಂತ್ವನ ಸಂಚಾರವನ್ನು ಈ ಸಂಸ್ಥೆ ಒದಗಿಸಿದೆ. ಬೆಳಗ್ಗೆ ಪಿಲಿಕುಳ ನಿಸರ್ಗಧಾಮ, ಮಧ್ಯಾಹ್ನದ ಬಳಿಕ ತಣ್ಣೀರುಬಾವಿ ಬೀಚ್, ಸಂಜೆಯಾಗುತ್ತಿದ್ದಂತೆ ಮಾಲ್ಗೆ ಸುತ್ತಾಡಿಸಿದ್ದಾರೆ.
ಬೆಳಗ್ಗೆ ಬಿಎಂಎಸ್ ಹೋಟೆಲ್ನಲ್ಲಿ ಚಹಾ ಸೇವನೆ ಬಳಿಕ ಪಿಲಿಕುಳ ನಿಸರ್ಗಧಾಮದಲ್ಲಿ ಜೈವಿಕ ಉದ್ಯಾನವನ, ವಿಜ್ಞಾನ ಕೇಂದ್ರ, ಬೋಟಿಂಗ್ ಮಾಡಿಸಿ ಮಧ್ಯಾಹ್ನದ ಊಟದ ಮಾಡಿಸಲಾಗಿದೆ. ಬಳಿಕ ತಣ್ಣೀರುಬಾವಿ ಬೀಚ್ ಗೆ ಕರೆದೊಯ್ದು ಅಲ್ಲಿ ಟ್ರೀಪಾರ್ಕ್ ತೋರಿಸಿ, ಸಮುದ್ರ ವಿಹಾರ ಮಂಡಿಸಲಾಯಿತು.

ಬಳಿಕ ನಗರದ ಫಿಝಾ ನೆಕ್ಸೆಸ್ ಮಾಲ್ಗೆ ಕರೆದೊಯ್ದು ಮಾಲ್ನಲ್ಲಿ ಸುತ್ತಾಡಿಸಲಾಯಿತು. ಜೊತೆಗೆ ಆರು ಕುಟುಂಬಕ್ಕೂ ತಲಾ ಐದು ಸಾವಿರ ರೂಪಾಯಿ ನೀಡಿ ಶಾಪಿಂಗ್ ಕೂಡಾ ಮಾಡಿಸಲಾಯಿತು. ಬಳಿಕ ಎಲ್ಲರನ್ನೂ ಅವರವರ ಮನೆಗೆ ಕಳಿಸಲಾಯಿತು.
ಇಷ್ಟೆಲ್ಲಾ ಸುತ್ತಾಟದ ವೇಳೆ ಎದ್ದೇಳಲು ಆಗದವರನ್ನು ಹಾಸಿಗೆಯಲ್ಲಿಯೇ ಮಲಗಿಸಿಯೇ ಎತ್ಕೊಂಡು ಕೊಂಡೊಯ್ಯಲಾಗಿದೆ. ಕುಳಿತುಕೊಳ್ಳಲು ಆಗುವವರನ್ನು ವ್ಹೀಲ್ ಚೇರ್ನಲ್ಲಿ ಕರೆದೊಯ್ಯಲಾಗಿದೆ. ಪ್ರತ್ಯೇಕ ಆರು ಆ್ಯಂಬುಲೆನ್ಸ್ ಗಳಲ್ಲಿ ಎಲ್ಲಾ ಕಡೆಗಳಲ್ಲಿ ಸುತ್ತಾಡಿಸಿದ್ದು, ಹಾಸಿಗೆ ಹಿಡಿದ ಓರ್ವನ ಸಹಾಯಕ್ಕೆ ಐದಾರು ಮಂದಿ ಸ್ವಯಂಸೇವಕರು ಕೈಜೋಡಿಸಿದ್ದಾರೆ. ಜೊತೆಗಿಬ್ಬರು ನರ್ಸ್ಗಳು ಸಹ ಇದ್ದರು. ಮೇಲ್ಛಾವಣಿ, ನಾಲ್ಕು ಗೋಡೆಗಳೇ ತಮ್ಮ ಪ್ರಪಂಚವಾಗಿದ್ದ ಈ ಆರು ಮಂದಿ ಕೋಸ್ಟಲ್ ಫ್ರೆಂಡ್ಸ್ ಸಂಸ್ಥೆಯ ಮಾನವೀಯ ಕಳಕಳಿಯಿಂದ ಹೊರಪ್ರಪಂಚದ ಸಂಪರ್ಕವನ್ನೇ ಕಾಣುವಂತಾಯಿತು.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications