ಧರ್ಮಸ್ಥಳ ದೀಪೋತ್ಸವದಲ್ಲಿ ಬರೋಡ ಬಲೂನಗಳದ್ದೇ ಕಾರುಬಾರು
ಉಜಿರೆ, ನವೆಂಬರ್ 16 : ಧರ್ಮಸ್ಥಳದಲ್ಲಿ ದೀಪೋತ್ಸವ ಪ್ರಾರಂಭವಾಗಿದೆ. ಅಲ್ಲಿ ಬರೋಡಾ ಬಲೂನ್ಗಳು ಜನರನ್ನು ಆಕರ್ಷಿಸುತ್ತಿವೆ. ಸಾಮಾನ್ಯವಾಗಿ ಪೇಟೆಯಲ್ಲಿ ಸಿಗುವ ಬಲೂನ್ಗಳಿಗಿಂತ ಇವು ದೊಡ್ಡಗಾತ್ರದವು.
ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ
ಧರ್ಮಸ್ಥಳದ ಮುಖ್ಯದ್ವಾರದದಿಂದ ಹಲವು ಕಡೆ ಕೈಯಲ್ಲಿ ದೊಡ್ಡದಾದ ಬಣ್ಣ ಬಣ್ಣದ ಬಲೂನ್ಗಳನ್ನು ಹಿಡಿದು ಬರೋಡಾದ ವ್ಯಾಪಾರಿಗಳು ಜನರನ್ನು ಆಕರ್ಷಿಸುತ್ತಿದ್ದಾರೆ. ಸಾಮಾನ್ಯವಾಗಿ ಜಾತ್ರೆಯ ಸಂದರ್ಭದಲ್ಲಿ ಬಣ್ಣದ ಪುಟ್ಟ ಬಲೂನ್ಗಳು ಕಾಣಸಿಗುತ್ತವೆ. ಆದರೆ ಇವರು ಪ್ಲಾಸ್ಟಿಕ್ನಲ್ಲಿ ದೊರೆಯುವ ಬಲೂನ್ಗಳಿಗಿಂತಲೂ ದೊಡ್ಡ ಬಲೂನ್ ಹಿಡಿದು ಮಾರಾಟ ಮಾಡುತ್ತಿದ್ದಾರೆ. ಬಲೂನ್ಗಳ ಗಾತ್ರಕ್ಕೆ ಮರುಳಾಗಿ ಜನರು ಕೊಂಡುಕೊಳ್ಳುತ್ತಿದ್ದಾರೆ.

ಗುಜರಾತಿನ ಬರೋಡಾದ ವ್ಯಾಪಾರಿಯೊಬ್ಬರು ಈ ಬಲೂನ್ಗಳನ್ನು ಏಳು ಜನರಿಗೆ ಕೊಟ್ಟು ಮಾರುವಂತೆ ಕಳುಹಿಸಿದ್ದಾರೆ. ಏಳು ಜನರ ಈ ತಂಡದವರು ಗುಜರಾತಿ ಮಿಶ್ರಿತ ಹಿಂದಿ ಮಾತನಾಡುತ್ತಾರೆ. ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿ ಬಲೂನ್ಗಳ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ತಮ್ಮ ಊರು ಬಿಟ್ಟು ಬೇರೆ ರಾಜ್ಯಕ್ಕೆ ಬಂದು ವ್ಯಾಪಾರ ಮಾಡುತ್ತಿರುವ ಇವರ ಮೂಲ ಕಸುಬು ಬಲೂನು ಮಾರಾಟವಲ್ಲ. ಬರೋಡಾದಲ್ಲಿ ಒಬ್ಬರ ಕೈ ಕೆಳಗೆ ಕೆಲಸ ಮಾಡುವವರು. ಬಟ್ಟೆ ಹೊಲಿಯುವುದು, ಹಾಳಾದ ಪ್ಲಾಸ್ಟಿಕ್ ಬಕೆಟ್ಗಳ ರಿಪೇರಿ ಇಂತಹ ಕೆಲಸಗಳನ್ನು ನಿರ್ವಹಿಸುವರರು. ಬಲೂನ್ ಮಾರಾಟದಲ್ಲಿ ದುಡಿದ ಹಣವೂ ಇವರ ಕೈ ಸೇರುವುದಿಲ್ಲ. ಬಂದ ಹಣವನ್ನೆಲ್ಲ ತಮ್ಮ ಮಾಲೀಕನಿಗೆ ಕೊಟ್ಟು, ಆತ ನೀಡಿದ ಹಣದಲ್ಲಿ ಜೀವನ ಸಾಗಿಸುತ್ತಾರೆ.
ದಿನದ ಊಟಕ್ಕಾಗಿ ಮಾಲೀಕನ ಮುಂದೆ ನಿಲ್ಲುವ ಈ ಜನರು, ಗೊತ್ತುಗುರಿಯಿಲ್ಲದ ಊರಿನಲ್ಲಿ ದುಡಿಮೆ ಮಾಡುತ್ತಿದ್ದಾರೆ. ಬಂದ ಹಣದಲ್ಲಿ ಎಷ್ಟು ಪಾಲು ತಮಗೆ ಸಿಗುತ್ತದೆ ಎಂದ ಯೋಚನೆಯೂ ಇಲ್ಲದೆ ಬಿಸಿಲು, ಛಳಿಯಲ್ಲಿ ಬಲೂನ್ಗಳ ಮಾರಾಟದಲ್ಲಿ ತೊಡಗಿದ್ದಾರೆ.

10 ರೂ. 100 ರೂ. ಬಲೂನ್ ಮಾರಾಟ ಮಾಡುತ್ತಿರುವ ಇವರು ತೀರಾ ಹಿಂದುಳಿದ ವರ್ಗದಿಂದ ಬಂದವರು. 20 ದಿನಗಳ ಕಾಲ ಶಾಲೆ ರಜೆಯಿರುವುದರಿಂದ ತಾವೂ ಅಪ್ಪ ಅಮ್ಮನ ಜೊತೆ ಮಾರಾಟ ಮಾಡಲು ಬಂದಿದ್ದೇವೆ .ಪ್ರತಿ ನಿತ್ಯ ಸುಮಾರು 500 ರೂ. ಸಂಪಾದಿಸುತ್ತೇನೆ. ಎನ್ನುವುದು 15 ವರ್ಷದ ಬಾಲಕ ಮಲೀಂದರ್ ನ ಮಾತು. ಶಾಲೆ ರಜೆಯಿರುವ ಸಮಯ ಇವರಿಗೆ ದುಡಿಮೆಯ ಕಾಲ.
ಕರ್ನಾಟಕದ ಪುಟ್ಟಗ್ರಾಮದಲ್ಲಿ ನಡೆಯುತ್ತಿರುವ ಉತ್ಸವದ ಮಾತು ಬೇರೆ ರಾಜ್ಯದ ಗ್ರಾಮಗಳನ್ನು ತಲುಪುತ್ತಿದೆ. ಲಕ್ಷಾಂತರ ಜನ ಸೇರುವ ದೀಪೋತ್ಸವ ಕೇವಲ ಇಲ್ಲಿನ ಜನರಿಗೆ ಮಾತ್ರ ಮಹತ್ವವಾಗದೇ, ದೇಶದ ಹಲವಾರು ಭಾಗಗಳ ಜನರಿಗೂ ಜೀವನ ಕಟ್ಟಿಕೊಳ್ಳುವ ಅವಕಾಶವಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications