ಧರ್ಮಸ್ಥಳ ದೀಪೋತ್ಸವದಲ್ಲಿ ಬರೋಡ ಬಲೂನಗಳದ್ದೇ ಕಾರುಬಾರು
ಉಜಿರೆ, ನವೆಂಬರ್ 16 : ಧರ್ಮಸ್ಥಳದಲ್ಲಿ ದೀಪೋತ್ಸವ ಪ್ರಾರಂಭವಾಗಿದೆ. ಅಲ್ಲಿ ಬರೋಡಾ ಬಲೂನ್ಗಳು ಜನರನ್ನು ಆಕರ್ಷಿಸುತ್ತಿವೆ. ಸಾಮಾನ್ಯವಾಗಿ ಪೇಟೆಯಲ್ಲಿ ಸಿಗುವ ಬಲೂನ್ಗಳಿಗಿಂತ ಇವು ದೊಡ್ಡಗಾತ್ರದವು.
ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ
ಧರ್ಮಸ್ಥಳದ ಮುಖ್ಯದ್ವಾರದದಿಂದ ಹಲವು ಕಡೆ ಕೈಯಲ್ಲಿ ದೊಡ್ಡದಾದ ಬಣ್ಣ ಬಣ್ಣದ ಬಲೂನ್ಗಳನ್ನು ಹಿಡಿದು ಬರೋಡಾದ ವ್ಯಾಪಾರಿಗಳು ಜನರನ್ನು ಆಕರ್ಷಿಸುತ್ತಿದ್ದಾರೆ. ಸಾಮಾನ್ಯವಾಗಿ ಜಾತ್ರೆಯ ಸಂದರ್ಭದಲ್ಲಿ ಬಣ್ಣದ ಪುಟ್ಟ ಬಲೂನ್ಗಳು ಕಾಣಸಿಗುತ್ತವೆ. ಆದರೆ ಇವರು ಪ್ಲಾಸ್ಟಿಕ್ನಲ್ಲಿ ದೊರೆಯುವ ಬಲೂನ್ಗಳಿಗಿಂತಲೂ ದೊಡ್ಡ ಬಲೂನ್ ಹಿಡಿದು ಮಾರಾಟ ಮಾಡುತ್ತಿದ್ದಾರೆ. ಬಲೂನ್ಗಳ ಗಾತ್ರಕ್ಕೆ ಮರುಳಾಗಿ ಜನರು ಕೊಂಡುಕೊಳ್ಳುತ್ತಿದ್ದಾರೆ.

ಗುಜರಾತಿನ ಬರೋಡಾದ ವ್ಯಾಪಾರಿಯೊಬ್ಬರು ಈ ಬಲೂನ್ಗಳನ್ನು ಏಳು ಜನರಿಗೆ ಕೊಟ್ಟು ಮಾರುವಂತೆ ಕಳುಹಿಸಿದ್ದಾರೆ. ಏಳು ಜನರ ಈ ತಂಡದವರು ಗುಜರಾತಿ ಮಿಶ್ರಿತ ಹಿಂದಿ ಮಾತನಾಡುತ್ತಾರೆ. ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿ ಬಲೂನ್ಗಳ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ತಮ್ಮ ಊರು ಬಿಟ್ಟು ಬೇರೆ ರಾಜ್ಯಕ್ಕೆ ಬಂದು ವ್ಯಾಪಾರ ಮಾಡುತ್ತಿರುವ ಇವರ ಮೂಲ ಕಸುಬು ಬಲೂನು ಮಾರಾಟವಲ್ಲ. ಬರೋಡಾದಲ್ಲಿ ಒಬ್ಬರ ಕೈ ಕೆಳಗೆ ಕೆಲಸ ಮಾಡುವವರು. ಬಟ್ಟೆ ಹೊಲಿಯುವುದು, ಹಾಳಾದ ಪ್ಲಾಸ್ಟಿಕ್ ಬಕೆಟ್ಗಳ ರಿಪೇರಿ ಇಂತಹ ಕೆಲಸಗಳನ್ನು ನಿರ್ವಹಿಸುವರರು. ಬಲೂನ್ ಮಾರಾಟದಲ್ಲಿ ದುಡಿದ ಹಣವೂ ಇವರ ಕೈ ಸೇರುವುದಿಲ್ಲ. ಬಂದ ಹಣವನ್ನೆಲ್ಲ ತಮ್ಮ ಮಾಲೀಕನಿಗೆ ಕೊಟ್ಟು, ಆತ ನೀಡಿದ ಹಣದಲ್ಲಿ ಜೀವನ ಸಾಗಿಸುತ್ತಾರೆ.
ದಿನದ ಊಟಕ್ಕಾಗಿ ಮಾಲೀಕನ ಮುಂದೆ ನಿಲ್ಲುವ ಈ ಜನರು, ಗೊತ್ತುಗುರಿಯಿಲ್ಲದ ಊರಿನಲ್ಲಿ ದುಡಿಮೆ ಮಾಡುತ್ತಿದ್ದಾರೆ. ಬಂದ ಹಣದಲ್ಲಿ ಎಷ್ಟು ಪಾಲು ತಮಗೆ ಸಿಗುತ್ತದೆ ಎಂದ ಯೋಚನೆಯೂ ಇಲ್ಲದೆ ಬಿಸಿಲು, ಛಳಿಯಲ್ಲಿ ಬಲೂನ್ಗಳ ಮಾರಾಟದಲ್ಲಿ ತೊಡಗಿದ್ದಾರೆ.

10 ರೂ. 100 ರೂ. ಬಲೂನ್ ಮಾರಾಟ ಮಾಡುತ್ತಿರುವ ಇವರು ತೀರಾ ಹಿಂದುಳಿದ ವರ್ಗದಿಂದ ಬಂದವರು. 20 ದಿನಗಳ ಕಾಲ ಶಾಲೆ ರಜೆಯಿರುವುದರಿಂದ ತಾವೂ ಅಪ್ಪ ಅಮ್ಮನ ಜೊತೆ ಮಾರಾಟ ಮಾಡಲು ಬಂದಿದ್ದೇವೆ .ಪ್ರತಿ ನಿತ್ಯ ಸುಮಾರು 500 ರೂ. ಸಂಪಾದಿಸುತ್ತೇನೆ. ಎನ್ನುವುದು 15 ವರ್ಷದ ಬಾಲಕ ಮಲೀಂದರ್ ನ ಮಾತು. ಶಾಲೆ ರಜೆಯಿರುವ ಸಮಯ ಇವರಿಗೆ ದುಡಿಮೆಯ ಕಾಲ.
ಕರ್ನಾಟಕದ ಪುಟ್ಟಗ್ರಾಮದಲ್ಲಿ ನಡೆಯುತ್ತಿರುವ ಉತ್ಸವದ ಮಾತು ಬೇರೆ ರಾಜ್ಯದ ಗ್ರಾಮಗಳನ್ನು ತಲುಪುತ್ತಿದೆ. ಲಕ್ಷಾಂತರ ಜನ ಸೇರುವ ದೀಪೋತ್ಸವ ಕೇವಲ ಇಲ್ಲಿನ ಜನರಿಗೆ ಮಾತ್ರ ಮಹತ್ವವಾಗದೇ, ದೇಶದ ಹಲವಾರು ಭಾಗಗಳ ಜನರಿಗೂ ಜೀವನ ಕಟ್ಟಿಕೊಳ್ಳುವ ಅವಕಾಶವಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications